<p><strong>ಬೆಂಗಳೂರು:</strong> ನಗರದಲ್ಲಿ ಜನರು ನಡೆದು ಸಾಗುವುದನ್ನು ಹಾಗೂ ಸೈಕಲ್ ಸವಾರಿಯನ್ನು ಇಷ್ಟಪಡುವಂತೆ ಮಾಡುವ ಮೂಲಕ ಮೋಟಾರು ವಾಹನ ಬಳಕೆ ಪ್ರಮಾಣವನ್ನು ಗಣನೀಯ ಕಡಿಮೆಗೊಳಿಸುವ<br />ಚಿಂತನೆ ಸರ್ಕಾರದ ಮುಂದಿದೆ.</p>.<p>ಈ ಸಲುವಾಗಿಯೇ ನಗರದಲ್ಲಿ ಈಗಿರುವ ರಸ್ತೆ ಜಾಲದ ಜೊತೆಯಲ್ಲೇ ಮೋಟಾರುರಹಿತ ಸಂಚಾರಕ್ಕೆ (ಎನ್ಎಂಟಿ) 651 ಕಿ.ಮೀ ಉದ್ದದ ಮೂಲಸೌಕರ್ಯವನ್ನೂ ಅಭಿವೃದ್ಧಿಪಡಿಸುವ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ. ಸಮಗ್ರ ಸಂಚಾರ ಯೋಜನೆಯ (ಸಿಎಂಪಿ) ಕರಡಿನಲ್ಲಿ ಮೋಟಾರುರಹಿತ ಸಂಚಾರ ವ್ಯವಸ್ಥೆ ಬಗ್ಗೆಯೂ ಚರ್ಚಿಸಲಾಗಿದೆ.</p>.<p>ನಡಿಗೆ ಸುಲಲಿತಗೊಳಿಸುವ ಸಲುವಾಗಿ ಟೆಂಡರ್ ಶ್ಯೂರ್ ರಸ್ತೆ, ಸುರಕ್ಷಿತ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸುವುದು, ಸೈಕಲ್ ಸವಾರರಿಗಾಗಿಪ್ರತ್ಯೇಕ ಪಥ ನಿರ್ಮಿಸುವುದುಸೇರಿದಂತೆ ಈ ಸಲುವಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಸಿಎಂಪಿಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಕುರಿತ ಪ್ರಮುಖ ಅಂಶಗಳು ಇಲ್ಲಿವೆ.</p>.<p><span class="Bullet">*</span> ಪಾದಚಾರಿ ಮೂಲಸೌಕರ್ಯಗಳನ್ನು ವಿಸ್ತರಿಸಬೇಕು. ಸಾರ್ವತ್ರಿಕವಾಗಿಸ್ವೀಕೃತಗೊಂಡಿರುವ ಟೆಂಡರ್ಶ್ಯೂರ್ ರಸ್ತೆ ವಿನ್ಯಾಸದಂತೆಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಬೇಕು. ಇವುಗಳನ್ನು ಬಳಸುವವವರ ಸುರಕ್ಷತೆಗೆ ಅಲ್ಲಲ್ಲಿ ತಡೆಗಂಬಗಳನ್ನು (ಬೊಲ್ಲಾರ್ಡ್ಸ್)ಅಳವಡಿಸಬೇಕು.</p>.<p><span class="Bullet">*</span> ಪಾದಚಾರಿ ಮಾರ್ಗವು ನಿರಂತರವಾಗಿರುವಂತೆ ಹಾಗೂ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ತೆರವುಗೊಳಿಸಬೇಕು. ಹೆಚ್ಚು ದಟ್ಟಣೆ ಇರುವ ಕಡೆಗಳಲ್ಲಂತೂ ಒತ್ತುವರಿಗೆ ಅವಕಾಶ ನೀಡಲೇಬಾರದು.</p>.<p><span class="Bullet">*</span> ಸುರಕ್ಷಿತವಾಗಿ ರಸ್ತೆ ದಾಟುವುದಕ್ಕೆ ಅಲ್ಲಲ್ಲಿ ವ್ಯವಸ್ಥೆ ಕಲ್ಪಿಸಬೇಕು. ಅಗತ್ಯ ಇರುವ ಕಡೆ ಪಾದಚಾರಿ<br />ಮೇಲ್ಸೇತುವೆಗಳನ್ನು ನಿರ್ಮಿಸಬೇಕು.</p>.<p><span class="Bullet">*</span> ಸಂಚಾರಿ ತಾಣವನ್ನು ತಲುಪಲು ಅಥವಾ ಅಲ್ಲಿಂದ ಕೊನೆಯ ತಾಣವನ್ನು ತಲುಪಲು ಜನ ನಡೆದುಹೋಗಲು ಅಥವಾ ಸೈಕಲ್ ಮೂಲಕ ಹೋಗಲು ಇಷ್ಟಪಡುವಂತಹ ವಾತಾವರಣ ಕಲ್ಪಿಸಬೇಕು. ಈ ಸಲುವಾಗಿ ಸಂಚಾರ ತಾಣಗಳಿಗೆ ನಡೆದು ಹೋಗುವುದಕ್ಕೆ ಹಾಗೂ ಸೈಕಲ್ನಲ್ಲಿ ಸಾಗುವುದಕ್ಕೆ ಪೂರಕವಾದ ಸೌಕರ್ಯಗಳನ್ನು ನಿರ್ಮಿಸುವುದಕ್ಕೆ ಆದ್ಯತೆ ನೀಡಬೇಕು.</p>.<p><span class="Bullet">*</span> ಈಗಿರುವ ರಸ್ತೆಗಳ ಪಕ್ಕದಲ್ಲಿ ಸಾಧ್ಯವಾದಷ್ಟು ಹೆಚ್ಚು ಕಡೆ ಸೈಕಲ್ ಪಥಗಳನ್ನು ಅಭಿವೃದ್ಧಿಪಡಿಸಬೇಕು. ಹೊಸ ರಸ್ತೆಗಳನ್ನು ನಿರ್ಮಿಸುವಾಗ ಅವುಗಳಲ್ಲಿ ಸೈಕಲ್ ಸವಾರರಿಗೆ ಪ್ರತ್ಯೇಕ ಪಥಗಳನ್ನು ಗೊತ್ತುಪಡಿಸಬೇಕು.</p>.<p><span class="Bullet">*</span> ಅಲ್ಲಲ್ಲಿ ಸೈಕಲ್ಗಳ ನಿಲುಗಡೆಗೆ ಮೂಲಸೌಕರ್ಯ ಕಲ್ಪಿಸಬೇಕು. ಸಂಚಾರ ತಾಣಗಳ ಬಳಿಯೂ ಕಡ್ಡಾಯವಾಗಿ ಸೈಕಲ್ಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು.</p>.<p><strong>ಬಿಬಿಎಂಪಿ, ಡಲ್ಟ್, ಬಿಎಂಆರ್ಸಿಎಲ್ಗೆ ಹೊಣೆ</strong></p>.<p>ಮೋಟಾರುರಹಿತ ಸಂಚಾರಕ್ಕೆ ಪೂರಕ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಹೊಣೆಯನ್ನು ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್), ಬಿಬಿಎಂಪಿ ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮಗಳಿಗೆ (ಬಿಎಂಆರ್ಸಿಎಲ್) ವಹಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದಲ್ಲಿ ಜನರು ನಡೆದು ಸಾಗುವುದನ್ನು ಹಾಗೂ ಸೈಕಲ್ ಸವಾರಿಯನ್ನು ಇಷ್ಟಪಡುವಂತೆ ಮಾಡುವ ಮೂಲಕ ಮೋಟಾರು ವಾಹನ ಬಳಕೆ ಪ್ರಮಾಣವನ್ನು ಗಣನೀಯ ಕಡಿಮೆಗೊಳಿಸುವ<br />ಚಿಂತನೆ ಸರ್ಕಾರದ ಮುಂದಿದೆ.</p>.<p>ಈ ಸಲುವಾಗಿಯೇ ನಗರದಲ್ಲಿ ಈಗಿರುವ ರಸ್ತೆ ಜಾಲದ ಜೊತೆಯಲ್ಲೇ ಮೋಟಾರುರಹಿತ ಸಂಚಾರಕ್ಕೆ (ಎನ್ಎಂಟಿ) 651 ಕಿ.ಮೀ ಉದ್ದದ ಮೂಲಸೌಕರ್ಯವನ್ನೂ ಅಭಿವೃದ್ಧಿಪಡಿಸುವ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ. ಸಮಗ್ರ ಸಂಚಾರ ಯೋಜನೆಯ (ಸಿಎಂಪಿ) ಕರಡಿನಲ್ಲಿ ಮೋಟಾರುರಹಿತ ಸಂಚಾರ ವ್ಯವಸ್ಥೆ ಬಗ್ಗೆಯೂ ಚರ್ಚಿಸಲಾಗಿದೆ.</p>.<p>ನಡಿಗೆ ಸುಲಲಿತಗೊಳಿಸುವ ಸಲುವಾಗಿ ಟೆಂಡರ್ ಶ್ಯೂರ್ ರಸ್ತೆ, ಸುರಕ್ಷಿತ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸುವುದು, ಸೈಕಲ್ ಸವಾರರಿಗಾಗಿಪ್ರತ್ಯೇಕ ಪಥ ನಿರ್ಮಿಸುವುದುಸೇರಿದಂತೆ ಈ ಸಲುವಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಸಿಎಂಪಿಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಕುರಿತ ಪ್ರಮುಖ ಅಂಶಗಳು ಇಲ್ಲಿವೆ.</p>.<p><span class="Bullet">*</span> ಪಾದಚಾರಿ ಮೂಲಸೌಕರ್ಯಗಳನ್ನು ವಿಸ್ತರಿಸಬೇಕು. ಸಾರ್ವತ್ರಿಕವಾಗಿಸ್ವೀಕೃತಗೊಂಡಿರುವ ಟೆಂಡರ್ಶ್ಯೂರ್ ರಸ್ತೆ ವಿನ್ಯಾಸದಂತೆಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಬೇಕು. ಇವುಗಳನ್ನು ಬಳಸುವವವರ ಸುರಕ್ಷತೆಗೆ ಅಲ್ಲಲ್ಲಿ ತಡೆಗಂಬಗಳನ್ನು (ಬೊಲ್ಲಾರ್ಡ್ಸ್)ಅಳವಡಿಸಬೇಕು.</p>.<p><span class="Bullet">*</span> ಪಾದಚಾರಿ ಮಾರ್ಗವು ನಿರಂತರವಾಗಿರುವಂತೆ ಹಾಗೂ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ತೆರವುಗೊಳಿಸಬೇಕು. ಹೆಚ್ಚು ದಟ್ಟಣೆ ಇರುವ ಕಡೆಗಳಲ್ಲಂತೂ ಒತ್ತುವರಿಗೆ ಅವಕಾಶ ನೀಡಲೇಬಾರದು.</p>.<p><span class="Bullet">*</span> ಸುರಕ್ಷಿತವಾಗಿ ರಸ್ತೆ ದಾಟುವುದಕ್ಕೆ ಅಲ್ಲಲ್ಲಿ ವ್ಯವಸ್ಥೆ ಕಲ್ಪಿಸಬೇಕು. ಅಗತ್ಯ ಇರುವ ಕಡೆ ಪಾದಚಾರಿ<br />ಮೇಲ್ಸೇತುವೆಗಳನ್ನು ನಿರ್ಮಿಸಬೇಕು.</p>.<p><span class="Bullet">*</span> ಸಂಚಾರಿ ತಾಣವನ್ನು ತಲುಪಲು ಅಥವಾ ಅಲ್ಲಿಂದ ಕೊನೆಯ ತಾಣವನ್ನು ತಲುಪಲು ಜನ ನಡೆದುಹೋಗಲು ಅಥವಾ ಸೈಕಲ್ ಮೂಲಕ ಹೋಗಲು ಇಷ್ಟಪಡುವಂತಹ ವಾತಾವರಣ ಕಲ್ಪಿಸಬೇಕು. ಈ ಸಲುವಾಗಿ ಸಂಚಾರ ತಾಣಗಳಿಗೆ ನಡೆದು ಹೋಗುವುದಕ್ಕೆ ಹಾಗೂ ಸೈಕಲ್ನಲ್ಲಿ ಸಾಗುವುದಕ್ಕೆ ಪೂರಕವಾದ ಸೌಕರ್ಯಗಳನ್ನು ನಿರ್ಮಿಸುವುದಕ್ಕೆ ಆದ್ಯತೆ ನೀಡಬೇಕು.</p>.<p><span class="Bullet">*</span> ಈಗಿರುವ ರಸ್ತೆಗಳ ಪಕ್ಕದಲ್ಲಿ ಸಾಧ್ಯವಾದಷ್ಟು ಹೆಚ್ಚು ಕಡೆ ಸೈಕಲ್ ಪಥಗಳನ್ನು ಅಭಿವೃದ್ಧಿಪಡಿಸಬೇಕು. ಹೊಸ ರಸ್ತೆಗಳನ್ನು ನಿರ್ಮಿಸುವಾಗ ಅವುಗಳಲ್ಲಿ ಸೈಕಲ್ ಸವಾರರಿಗೆ ಪ್ರತ್ಯೇಕ ಪಥಗಳನ್ನು ಗೊತ್ತುಪಡಿಸಬೇಕು.</p>.<p><span class="Bullet">*</span> ಅಲ್ಲಲ್ಲಿ ಸೈಕಲ್ಗಳ ನಿಲುಗಡೆಗೆ ಮೂಲಸೌಕರ್ಯ ಕಲ್ಪಿಸಬೇಕು. ಸಂಚಾರ ತಾಣಗಳ ಬಳಿಯೂ ಕಡ್ಡಾಯವಾಗಿ ಸೈಕಲ್ಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು.</p>.<p><strong>ಬಿಬಿಎಂಪಿ, ಡಲ್ಟ್, ಬಿಎಂಆರ್ಸಿಎಲ್ಗೆ ಹೊಣೆ</strong></p>.<p>ಮೋಟಾರುರಹಿತ ಸಂಚಾರಕ್ಕೆ ಪೂರಕ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಹೊಣೆಯನ್ನು ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್), ಬಿಬಿಎಂಪಿ ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮಗಳಿಗೆ (ಬಿಎಂಆರ್ಸಿಎಲ್) ವಹಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>