‘ಕಡಲೆಕಾಯಿ ಪರಿಷೆಗೆ ಈ ಬಾರಿ ಹೆಚ್ಚಿನ ಜನರು ಸೇರಿದ್ದರು. ಬಸವನಗುಡಿ ಮುಖ್ಯರಸ್ತೆಯ 1.5 ಕಿ.ಮೀ. ಹಾಗೂ ಸುತ್ತಮುತ್ತಲಿನ ರಸ್ತೆ ಸೇರಿ ಸುಮಾರು 3 ಕಿ.ಮೀ. ರಸ್ತೆ ಜನರಿಂದ ತುಂಬಿಹೋಗಿತ್ತು. ಒಂದು ವಾರದಲ್ಲಿ ಸುಮಾರು 8 ಲಕ್ಷ ಜನರು ಇಲ್ಲಿಗೆ ಬಂದಿರಬಹುದು ಎಂದು ಅಂದಾಜು ಮಾಡಲಾಗಿದೆ. ಇದು ಹೊಸ ದಾಖಲೆ. ಗುರುವಾರ ಸಂಜೆ ಹೆಚ್ಚಿನ ಜನರಿದ್ದರೂ ಪರಿಷೆಯನ್ನು ಅಧಿಕೃತವಾಗಿ ಮುಕ್ತಾಯಗೊಳಿಸಲಾಯಿತು’ ಎಂದು ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ತಿಳಿಸಿದರು.