<p><strong>ಬೆಂಗಳೂರು</strong>: ಪಾಲಿಕೆಯ ವತಿಯಿಂದ ಸಾಮಾನ್ಯವಾಗಿ ಕೊರೊನಾ ಸೋಂಕು ನಿವಾರಕ ಸಿಂಪಡಣೆ ಮಾಡಲಾಗುತ್ತದೆ. ಆದರೆ, ಮಲ್ಲೇಶ್ವರದಲ್ಲಿ ವ್ಯಕ್ತಿಯೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ ಸುತ್ತಮುತ್ತಲ 140ಕ್ಕೂ ಹೆಚ್ಚು ಮನೆಗಳಿಗೆ ಸ್ಯಾನಿಸೈಸ್ ಮಾಡಿಸಿದ್ದಾರೆ.</p>.<p>ಮಲ್ಲೇಶ್ವರದ ನಿವಾಸಿಯೂ ಆಗಿರುವ ಭವಸಾರ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ವರ್ಣೆ ಅವರು 4ನೇ ದೇವಸ್ಥಾನ ರಸ್ತೆಯ 13ರಿಂದ 15ನೇ ಕ್ರಾಸ್ ತನಕ ಇರುವ ಮನೆಗಳ ಎಲ್ಲಾ ಅಂತಸ್ತುಗಳಿಗೆ, ವಾಹನಗಳಿಗೆ, ರಸ್ತೆ ಸೇರಿ ಗಲ್ಲಿಯನ್ನೂ ಬಿಡದೆ ಸ್ಯಾನಿಟೈಸ್ ಮಾಡಿದ್ದಾರೆ.</p>.<p>‘ಬಿಬಿಎಂಪಿ ಸಿಬ್ಬಂದಿ ಒಮ್ಮೆಯೂ ಇಲ್ಲಿ ಸಿಂಪಡಣೆ ಮಾಡಿಲ್ಲ. ಮಾಡಿದರೂ ಬ್ಲೀಚಿಂಗ್ ಪೌಡರ್ಗೆ ನೀರು ಬೆರೆಸಿ ಸಿಂಪಡಿಸುತ್ತಾರೆ. ನಾನು 150 ಕೆ.ಜಿಯಷ್ಟುಸೋಡಿಯಂ ಹೈಪೋ ಕ್ಲೋರೈಡ್ ಬಳಸಿ ಸ್ಯಾನಿಟೈಸ್ ಮಾಡಿಸಿದ್ದೇನೆ’ ಎಂದು ಯೋಗೇಂದ್ರ ವರ್ಣೆ ತಿಳಿಸಿದರು.</p>.<p>‘ನಮ್ಮ ಮನೆಯವರಷ್ಟೇ ಸುರಕ್ಷಿತವಾಗಿದ್ದರೆ ಸಾಲದು, ಸುತ್ತಮುತ್ತಲ ಜನರೂ ಸುರಕ್ಷಿತವಾಗಿ ಇರುವುದು ಈಗ ಮುಖ್ಯ. ಹೀಗಾಗಿ ಸಿಂಪಡಣೆ ಮಾಡಿಸಿದ್ದೇನೆ. ಮುಂದಿನ ದಿನಗಳಲ್ಲೂ ಬೇಕಾಗಲಿದೆ ಎಂಬ ಕಾರಣಕ್ಕೆ ಸಿಂಪಡಣೆ ಯಂತ್ರವನ್ನೇ ಖರೀದಿ ಮಾಡಿದ್ದೇನೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಪಾಲಿಕೆಯ ವತಿಯಿಂದ ಸಾಮಾನ್ಯವಾಗಿ ಕೊರೊನಾ ಸೋಂಕು ನಿವಾರಕ ಸಿಂಪಡಣೆ ಮಾಡಲಾಗುತ್ತದೆ. ಆದರೆ, ಮಲ್ಲೇಶ್ವರದಲ್ಲಿ ವ್ಯಕ್ತಿಯೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ ಸುತ್ತಮುತ್ತಲ 140ಕ್ಕೂ ಹೆಚ್ಚು ಮನೆಗಳಿಗೆ ಸ್ಯಾನಿಸೈಸ್ ಮಾಡಿಸಿದ್ದಾರೆ.</p>.<p>ಮಲ್ಲೇಶ್ವರದ ನಿವಾಸಿಯೂ ಆಗಿರುವ ಭವಸಾರ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ವರ್ಣೆ ಅವರು 4ನೇ ದೇವಸ್ಥಾನ ರಸ್ತೆಯ 13ರಿಂದ 15ನೇ ಕ್ರಾಸ್ ತನಕ ಇರುವ ಮನೆಗಳ ಎಲ್ಲಾ ಅಂತಸ್ತುಗಳಿಗೆ, ವಾಹನಗಳಿಗೆ, ರಸ್ತೆ ಸೇರಿ ಗಲ್ಲಿಯನ್ನೂ ಬಿಡದೆ ಸ್ಯಾನಿಟೈಸ್ ಮಾಡಿದ್ದಾರೆ.</p>.<p>‘ಬಿಬಿಎಂಪಿ ಸಿಬ್ಬಂದಿ ಒಮ್ಮೆಯೂ ಇಲ್ಲಿ ಸಿಂಪಡಣೆ ಮಾಡಿಲ್ಲ. ಮಾಡಿದರೂ ಬ್ಲೀಚಿಂಗ್ ಪೌಡರ್ಗೆ ನೀರು ಬೆರೆಸಿ ಸಿಂಪಡಿಸುತ್ತಾರೆ. ನಾನು 150 ಕೆ.ಜಿಯಷ್ಟುಸೋಡಿಯಂ ಹೈಪೋ ಕ್ಲೋರೈಡ್ ಬಳಸಿ ಸ್ಯಾನಿಟೈಸ್ ಮಾಡಿಸಿದ್ದೇನೆ’ ಎಂದು ಯೋಗೇಂದ್ರ ವರ್ಣೆ ತಿಳಿಸಿದರು.</p>.<p>‘ನಮ್ಮ ಮನೆಯವರಷ್ಟೇ ಸುರಕ್ಷಿತವಾಗಿದ್ದರೆ ಸಾಲದು, ಸುತ್ತಮುತ್ತಲ ಜನರೂ ಸುರಕ್ಷಿತವಾಗಿ ಇರುವುದು ಈಗ ಮುಖ್ಯ. ಹೀಗಾಗಿ ಸಿಂಪಡಣೆ ಮಾಡಿಸಿದ್ದೇನೆ. ಮುಂದಿನ ದಿನಗಳಲ್ಲೂ ಬೇಕಾಗಲಿದೆ ಎಂಬ ಕಾರಣಕ್ಕೆ ಸಿಂಪಡಣೆ ಯಂತ್ರವನ್ನೇ ಖರೀದಿ ಮಾಡಿದ್ದೇನೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>