ಬೆಂಗಳೂರು: ಬಾಗಲಗುಂಟೆ ಗ್ರಾಮದಲ್ಲಿ ಜಮೀನೊಂದರ ಪೋಡಿ ಮಾಡಿಕೊಡಲು ₹55,000 ಲಂಚ ಪಡೆಯುತ್ತಿದ್ದ ಬೆಂಗಳೂರು ಉತ್ತರ ತಾಲ್ಲೂಕು ಭೂ ದಾಖಲೆಗಳ ಉಪ ನಿರ್ದೇಶಕರ ಕಚೇರಿಯ ಸರ್ವೇಯರ್ ಕೆ.ಪಿ. ನಾಗಪ್ಪ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಜಮೀನು ಮಾಲೀಕರು ಕಳೆದ ವರ್ಷದ ಡಿ.12ರಂದು ನಾಗಪ್ಪ ಅವರನ್ನು ಸಂಪರ್ಕಿಸಿ, ಪೋಡಿ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು. ಆಗ ನಾಗಪ್ಪ ₹ 55,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮಂಗಳವಾರ (ಜುಲೈ 2ರಂದು) ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ಬಂಧಿಸಿದರು.