ಬೆಂಗಳೂರು: ವಸತಿ ಗೃಹಗಳಿಗೆ ಸರಬರಾಜು ಮಾಡಿದ ಪೀಠೋಪಕರಣದ ಬಿಲ್ ಪಾವತಿಗೆ ₹15 ಸಾವಿರ ಲಂಚ ಪಡೆಯುತ್ತಿದ್ದ ಬಿಬಿಎಂಪಿ ಕೇಂದ್ರ ಕಚೇರಿಯ ಉಪ ಆಯುಕ್ತರ ಆಡಳಿತ ವಿಭಾಗದಲ್ಲಿನ ಪ್ರಥಮ ದರ್ಜೆ ಸಹಾಯಕ ಎಚ್.ರಾಜು ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಬಲೆಗೆ ಬಿದ್ದಿದ್ದಾರೆ.
ತಾವರೆಕೆರೆಯಲ್ಲಿನ ವಸತಿ ಗೃಹಕ್ಕೆ ಶೇಷಾದ್ರಿಪುರದ ನಿವಾಸಿಯೊಬ್ಬರು ಪೀಠೋಪಕರಣ ಸರಬರಾಜು ಮಾಡಿದ್ದರು. ಅದರ ಬಾಕಿ ಬಿಲ್ ಪಾವತಿಗೆ ರಾಜು ಲಂಚ ಪಡೆಯುವಾಗ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.