ಬೆಂಗಳೂರು: ಅಪಘಾತವನ್ನುಂಟು ಮಾಡಿ ಬೈಕ್ ಸವಾರರೊಬ್ಬರ ಸಾವಿಗೆ ಕಾರಣವಾಗಿದ್ದ ಆರೋಪಿ ಮತಿವಣ್ಣನ್ನನ್ನು 14 ವರ್ಷಗಳ ಬಳಿಕ ವಿಜಯನಗರ ಸಂಚಾರ ಪೊಲೀಸರು ಬಂಧಿಸಿದ್ದಾರೆ.
‘2005ರ ಅಕ್ಟೋಬರ್ನಲ್ಲಿ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದ. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ, 2007ರಲ್ಲಿ ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದೇಶವಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದ’ ಎಂದು ಪೊಲೀಸರು ಹೇಳಿದರು.
‘ಕಾರು ಚಾಲಕನಾಗಿದ್ದ ತಮಿಳುನಾಡಿನ ತ್ರಿಪುರಾದ ಮತಿವಣ್ಣನ್, ತನ್ನ ಮಾಲೀಕನನ್ನು ಬೆಂಗಳೂರಿಗೆ ಬಿಟ್ಟು ಹೋಗಲು ಕಾರಿನಲ್ಲಿ ಬಂದಿದ್ದಾಗ ಮಾರೇನಹಳ್ಳಿ ಬಳಿ ಅಪಘಾತವನ್ನುಂಟು ಮಾಡಿದ್ದ’ ಎಂದೂ ತಿಳಿಸಿದರು.