ಕಾರು ಎದುರಲ್ಲಿ ಪಾರ್ಟಿ; ‘ರಾಜಾಜಿನಗರ ನಿವಾಸಿಯಾದ ಹರ್ಷ ಹಾಗೂ ಅರ್ಷಿತ್, ಮದ್ಯದ ಪಾರ್ಟಿ ಮಾಡಲೆಂದು ಜಾಲಹಳ್ಳಿಗೆ ಸಂಪರ್ಕ ಕಲ್ಪಿಸುವ ಅಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆಗೆ ಬಂದಿದ್ದರು. ಅಪಾರ್ಟ್ಮೆಂಟ್ ಸಮುಚ್ಚಯವೊಂದರ ಸಮೀಪದಲ್ಲಿ ಕಾರು ನಿಲ್ಲಿಸಿ, ರಸ್ತೆ ಮೇಲೆ ಬಿಯರ್ ಬಾಟಲಿ ಹಿಡಿದು ಕುಡಿಯುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು.