<p><strong>ಬೆಂಗಳೂರು:</strong> ಲೋಹದ ಹಕ್ಕಿಗಳ ‘ಏರ್ಶೋ’ಗೆ ನಾಲ್ಕು ದಿನಗಳು ಬಾಕಿ ಇದ್ದು, ಯಲಹಂಕದ ವಾಯುನೆಲೆಯಲ್ಲಿ ವಿಮಾನಗಳ ತಾಲೀಮು ಚುರುಕುಗೊಂಡಿದೆ.</p>.<p>ಶನಿವಾರ ಮಧ್ಯಾಹ್ನ 1.30 ಗಂಟೆಯಿಂದ ತಾಲೀಮು ಆರಂಭಿಸಿದ ಸೇನಾ ಪಡೆಯ ಹಲವು ವಿಮಾನಗಳು, ಆರ್ಭಟದ ಸದ್ದಿನೊಂದಿಗೆ ವಾಯುನೆಲೆಯ ಸುತ್ತಮುತ್ತ ಹಾರಾಡಿದವು.</p>.<p>ಸೂರ್ಯ ಕಿರಣ ತಂಡದ ಬಣ್ಣ ಬಣ್ಣದ ವಿಮಾನಗಳು ಬಾನಂಗಳದಲ್ಲಿ ಚಿತ್ತಾರವನ್ನೇ ಬಿಡಿಸಿದವು. ಅರ್ಧ ಗಂಟೆವರೆಗೆ ತಾಲೀಮು ನಡೆಸಿದ ಪೈಲಟ್ಗಳು, ವಾಯುನೆಲೆ ಸುತ್ತಮುತ್ತಲ ಜನರಿಗೆ ಮನರಂಜನೆ ನೀಡಿದರು. ಬಳ್ಳಾರಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸವಾರರು, ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ವಿಮಾನಗಳ ತಾಲೀಮು ವೀಕ್ಷಿಸಿದರು.</p>.<p>ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ಗಳ ತಾಲೀಮು ಸಹ ರೋಚಕವಾಗಿತ್ತು. ಅದರ ಪೈಲಟ್ಗಳು, ಬಣ್ಣದ ಹೊಗೆ ಮೂಲಕ ನಾನಾ ಚಿತ್ರಗಳನ್ನು ಬಾನಂಗಳದಲ್ಲಿ ಮೂಡಿಸಿದರು.</p>.<p class="Subhead">ಜೋರು ಸದ್ದು ಮಾಡಿದ ರಫೇಲ್: ಹಗರಣದ ಮೂಲಕ ದೇಶದಾದ್ಯಂತ ಸುದ್ದಿಯಾಗಿದ್ದ ರಫೇಲ್ ವಿಮಾನ ಶನಿವಾರ ತಾಲೀಮು ನಡೆಸಿ ಜೋರು ಸದ್ದಿನ ಮೂಲಕ ಜನರೆಲ್ಲ ಬಾನಿನತ್ತ ನೋಡುವಂತೆ ಮಾಡಿತು.</p>.<p>ಮಧ್ಯಾಹ್ನ 2 ಗಂಟೆ ಸುಮಾರಿಗೆ ವಾಯುನೆಲೆಯಿಂದ ಬಾನಿಗೆ ಜಿಗಿದ ಮೂರು ರಫೇಲ್ ವಿಮಾನಗಳು, ಯಲಹಂಕದಲ್ಲಷ್ಟೆ ಅಲ್ಲದೇ ನಗರದ ಹಲವು ಪ್ರದೇಶಗಳಲ್ಲಿ ಗೋಚರಿಸಿದವು. ಅವುಗಳ ಸದ್ದು ಒಂದು ಕ್ಷಣ ಬೆಚ್ಚಿಬೀಳಿಸುವಂತಿತ್ತು.</p>.<p>ರಫೇಲ್ ವಿಮಾನಗಳು ಲ್ಯಾಂಡಿಂಗ್ ಆದ ನಂತರ ತಾಲೀಮು ಶುರು ಮಾಡಿಕೊಂಡ ಬೋಯಿಂಗ್ ಸಿ-17 ಗ್ಲೋಬ್ ವಿಮಾನ ನಿಗದಿತ ಸ್ಥಳದಲ್ಲಿ ಸುತ್ತಾಡಿತು. ಜೊತೆಗೆ ಮಿಲಿಟರಿ ಟ್ಯಾಂಕರ್ಗಳು ವಾಯುನೆಲೆಯಲ್ಲೇ ಸುತ್ತಾಡಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾದವು.</p>.<p>ಫೆ. 19ರವರೆಗೆ ವಿಮಾನಗಳ ತಾಲೀಮು ಮುಂದುವರಿಯಲಿದ್ದು, 20ರಿಂದ ಏರ್ಶೋ ಪ್ರದರ್ಶನ ಆರಂಭವಾಗಲಿದೆ.</p>.<p><strong>ನಿವಾಸಿಗಳ ಆಧಾರ್ ಪರಿಶೀಲನೆ</strong></p>.<p>‘ಏರ್ ಶೋ’ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ನಗರ ಪೊಲೀಸರು, ವಾಯುನೆಲೆ ಇರುವ ಯಲಹಂಕ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಾಸವಿರುವ ನಿವಾಸಿಗಳ ಆಧಾರ್ ಪರಿಶೀಲನೆ ನಡೆಸುತ್ತಿದ್ದಾರೆ.</p>.<p>ಅಪಾರ್ಟ್ಮೆಂಟ್ ಸಮುಚ್ಚಯ ಹಾಗೂ ಮನೆಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಯಾರಾದರೂ ಇದ್ದಾರೆಯೇ? ಎಂಬುದನ್ನು ಪೊಲೀಸರು ತಿಳಿದುಕೊಳ್ಳುತ್ತಿದ್ದಾರೆ. ನಿವಾಸಿಗಳ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಕಾಯಂ ನಿವಾಸಿಗಳೇ? ಎಂಬ ಹಲವು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.</p>.<p>ಬಾಡಿಗೆದಾರರು ಹಾಗೂ ಹೊರ ರಾಜ್ಯ ಹಾಗೂ ದೇಶಗಳಿಂದ ಬಂದವರ ಬಗ್ಗೆಯೂ ವಿಚಾರಿಸುತ್ತಿದ್ದಾರೆ. ಕೆಲವು ಅಪಾರ್ಟ್ಮೆಂಟ್ ಸಮುಚ್ಚಯಗಳ ಎದುರು ನೋಟಿಸ್ಗಳನ್ನು ಅಂಟಿಸಿರುವ ಪೊಲೀಸರು, ಸಮುಚ್ಚಯದಲ್ಲಿ ನೆಲೆಸಿರುವ ನಿವಾಸಿಗಳ ಪಟ್ಟಿ ನೀಡುವಂತೆ ವ್ಯವಸ್ಥಾಪಕರಿಗೆ ಗಡುವು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಲೋಹದ ಹಕ್ಕಿಗಳ ‘ಏರ್ಶೋ’ಗೆ ನಾಲ್ಕು ದಿನಗಳು ಬಾಕಿ ಇದ್ದು, ಯಲಹಂಕದ ವಾಯುನೆಲೆಯಲ್ಲಿ ವಿಮಾನಗಳ ತಾಲೀಮು ಚುರುಕುಗೊಂಡಿದೆ.</p>.<p>ಶನಿವಾರ ಮಧ್ಯಾಹ್ನ 1.30 ಗಂಟೆಯಿಂದ ತಾಲೀಮು ಆರಂಭಿಸಿದ ಸೇನಾ ಪಡೆಯ ಹಲವು ವಿಮಾನಗಳು, ಆರ್ಭಟದ ಸದ್ದಿನೊಂದಿಗೆ ವಾಯುನೆಲೆಯ ಸುತ್ತಮುತ್ತ ಹಾರಾಡಿದವು.</p>.<p>ಸೂರ್ಯ ಕಿರಣ ತಂಡದ ಬಣ್ಣ ಬಣ್ಣದ ವಿಮಾನಗಳು ಬಾನಂಗಳದಲ್ಲಿ ಚಿತ್ತಾರವನ್ನೇ ಬಿಡಿಸಿದವು. ಅರ್ಧ ಗಂಟೆವರೆಗೆ ತಾಲೀಮು ನಡೆಸಿದ ಪೈಲಟ್ಗಳು, ವಾಯುನೆಲೆ ಸುತ್ತಮುತ್ತಲ ಜನರಿಗೆ ಮನರಂಜನೆ ನೀಡಿದರು. ಬಳ್ಳಾರಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸವಾರರು, ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ವಿಮಾನಗಳ ತಾಲೀಮು ವೀಕ್ಷಿಸಿದರು.</p>.<p>ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ಗಳ ತಾಲೀಮು ಸಹ ರೋಚಕವಾಗಿತ್ತು. ಅದರ ಪೈಲಟ್ಗಳು, ಬಣ್ಣದ ಹೊಗೆ ಮೂಲಕ ನಾನಾ ಚಿತ್ರಗಳನ್ನು ಬಾನಂಗಳದಲ್ಲಿ ಮೂಡಿಸಿದರು.</p>.<p class="Subhead">ಜೋರು ಸದ್ದು ಮಾಡಿದ ರಫೇಲ್: ಹಗರಣದ ಮೂಲಕ ದೇಶದಾದ್ಯಂತ ಸುದ್ದಿಯಾಗಿದ್ದ ರಫೇಲ್ ವಿಮಾನ ಶನಿವಾರ ತಾಲೀಮು ನಡೆಸಿ ಜೋರು ಸದ್ದಿನ ಮೂಲಕ ಜನರೆಲ್ಲ ಬಾನಿನತ್ತ ನೋಡುವಂತೆ ಮಾಡಿತು.</p>.<p>ಮಧ್ಯಾಹ್ನ 2 ಗಂಟೆ ಸುಮಾರಿಗೆ ವಾಯುನೆಲೆಯಿಂದ ಬಾನಿಗೆ ಜಿಗಿದ ಮೂರು ರಫೇಲ್ ವಿಮಾನಗಳು, ಯಲಹಂಕದಲ್ಲಷ್ಟೆ ಅಲ್ಲದೇ ನಗರದ ಹಲವು ಪ್ರದೇಶಗಳಲ್ಲಿ ಗೋಚರಿಸಿದವು. ಅವುಗಳ ಸದ್ದು ಒಂದು ಕ್ಷಣ ಬೆಚ್ಚಿಬೀಳಿಸುವಂತಿತ್ತು.</p>.<p>ರಫೇಲ್ ವಿಮಾನಗಳು ಲ್ಯಾಂಡಿಂಗ್ ಆದ ನಂತರ ತಾಲೀಮು ಶುರು ಮಾಡಿಕೊಂಡ ಬೋಯಿಂಗ್ ಸಿ-17 ಗ್ಲೋಬ್ ವಿಮಾನ ನಿಗದಿತ ಸ್ಥಳದಲ್ಲಿ ಸುತ್ತಾಡಿತು. ಜೊತೆಗೆ ಮಿಲಿಟರಿ ಟ್ಯಾಂಕರ್ಗಳು ವಾಯುನೆಲೆಯಲ್ಲೇ ಸುತ್ತಾಡಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾದವು.</p>.<p>ಫೆ. 19ರವರೆಗೆ ವಿಮಾನಗಳ ತಾಲೀಮು ಮುಂದುವರಿಯಲಿದ್ದು, 20ರಿಂದ ಏರ್ಶೋ ಪ್ರದರ್ಶನ ಆರಂಭವಾಗಲಿದೆ.</p>.<p><strong>ನಿವಾಸಿಗಳ ಆಧಾರ್ ಪರಿಶೀಲನೆ</strong></p>.<p>‘ಏರ್ ಶೋ’ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ನಗರ ಪೊಲೀಸರು, ವಾಯುನೆಲೆ ಇರುವ ಯಲಹಂಕ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಾಸವಿರುವ ನಿವಾಸಿಗಳ ಆಧಾರ್ ಪರಿಶೀಲನೆ ನಡೆಸುತ್ತಿದ್ದಾರೆ.</p>.<p>ಅಪಾರ್ಟ್ಮೆಂಟ್ ಸಮುಚ್ಚಯ ಹಾಗೂ ಮನೆಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಯಾರಾದರೂ ಇದ್ದಾರೆಯೇ? ಎಂಬುದನ್ನು ಪೊಲೀಸರು ತಿಳಿದುಕೊಳ್ಳುತ್ತಿದ್ದಾರೆ. ನಿವಾಸಿಗಳ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಕಾಯಂ ನಿವಾಸಿಗಳೇ? ಎಂಬ ಹಲವು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.</p>.<p>ಬಾಡಿಗೆದಾರರು ಹಾಗೂ ಹೊರ ರಾಜ್ಯ ಹಾಗೂ ದೇಶಗಳಿಂದ ಬಂದವರ ಬಗ್ಗೆಯೂ ವಿಚಾರಿಸುತ್ತಿದ್ದಾರೆ. ಕೆಲವು ಅಪಾರ್ಟ್ಮೆಂಟ್ ಸಮುಚ್ಚಯಗಳ ಎದುರು ನೋಟಿಸ್ಗಳನ್ನು ಅಂಟಿಸಿರುವ ಪೊಲೀಸರು, ಸಮುಚ್ಚಯದಲ್ಲಿ ನೆಲೆಸಿರುವ ನಿವಾಸಿಗಳ ಪಟ್ಟಿ ನೀಡುವಂತೆ ವ್ಯವಸ್ಥಾಪಕರಿಗೆ ಗಡುವು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>