<p><strong>ಬೆಂಗಳೂರು</strong>: ವಿಶ್ವ ಪರಿಸರ ದಿನ ನಿಮಿತ್ತ ಇಲ್ಲಿನ ವಿಮೊವ್ ಫೌಂಡೇಶನ್ ‘ಆಲ್ಟರ್ನೆಟಿವ್ 24’ ಶೀರ್ಷಿಕೆಯಡಿ ಪರಿಸರ ಸಂರಕ್ಷಣೆ ಕುರಿತು ಏರ್ಪಡಿಸಿದ್ದ ವಿಡಿಯೊ ರೀಲ್ಸ್ ಸ್ಪರ್ಧೆ ಫಲಿತಾಂಶ ಘೋಷಣೆ ಸಮಾರಂಭ ಜೂನ್ 1ರಂದು ಬೆಳಿಗ್ಗೆ 10ಕ್ಕೆ ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ನಡೆಯಲಿದೆ. </p>.<p>‘ಯೂತ್ ಫಾರ್ ಗ್ರೀನ್ ಆ್ಯಂಡ್ ವೈಬ್ರಂಟ್ ಬೆಂಗಳೂರು’ ಪರಿಕಲ್ಪನೆಯಡಿ ‘ಆಲ್ಟರ್ನೆಟಿವ್ 24’ ಹಮ್ಮಿಕೊಳ್ಳಲಾಗಿದೆ. ನಗರದ ಕಾಲೇಜುಗಳ ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, 30 ವರ್ಷದೊಳಗಿನವರು ಏಕವ್ಯಕ್ತಿಯಾಗಿ ಅಥವಾ ಗುಂಪಾಗಿ ಈ ರೀಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. </p>.<p>ಜಲ ಸಂರಕ್ಷಣೆ, ಹಸಿರು ತಾಣದ ಅಗತ್ಯ, ತ್ಯಾಜ್ಯ ನಿರ್ವಹಣೆ, ಸಾಗಣೆ ಕ್ರಮಗಳಲ್ಲಿ ಬದಲಾವಣೆ ಹಾಗೂ ಹಸಿರು ಇಂಧನ ಪರಿಹಾರ ಕುರಿತು ರೀಲ್ಸ್ ಮಾಡಲು ಅವಕಾಶವಿತ್ತು. ಇದೇ ವೇಳೆ ವಿವಿಧ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದೆ. </p>.<p>ತಜ್ಞರ ಸಮಿತಿ ಪ್ರತಿ ವಿಭಾಗದಲ್ಲಿ ಮೂರು ವಿಡಿಯೊ ರೀಲ್ಸ್ ಆಯ್ಕೆ ಮಾಡುತ್ತದೆ. ಪರಿಸರ ರಕ್ಷಣೆಯ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿತ್ತು ಎಂದು ಫೌಂಡೇಶನ್ನ ಸಂಸ್ಥಾಪಕ ವಿನಯ್ ಶಿಂಧೆ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ವಿಶ್ವ ಪರಿಸರ ದಿನ ನಿಮಿತ್ತ ಇಲ್ಲಿನ ವಿಮೊವ್ ಫೌಂಡೇಶನ್ ‘ಆಲ್ಟರ್ನೆಟಿವ್ 24’ ಶೀರ್ಷಿಕೆಯಡಿ ಪರಿಸರ ಸಂರಕ್ಷಣೆ ಕುರಿತು ಏರ್ಪಡಿಸಿದ್ದ ವಿಡಿಯೊ ರೀಲ್ಸ್ ಸ್ಪರ್ಧೆ ಫಲಿತಾಂಶ ಘೋಷಣೆ ಸಮಾರಂಭ ಜೂನ್ 1ರಂದು ಬೆಳಿಗ್ಗೆ 10ಕ್ಕೆ ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ನಡೆಯಲಿದೆ. </p>.<p>‘ಯೂತ್ ಫಾರ್ ಗ್ರೀನ್ ಆ್ಯಂಡ್ ವೈಬ್ರಂಟ್ ಬೆಂಗಳೂರು’ ಪರಿಕಲ್ಪನೆಯಡಿ ‘ಆಲ್ಟರ್ನೆಟಿವ್ 24’ ಹಮ್ಮಿಕೊಳ್ಳಲಾಗಿದೆ. ನಗರದ ಕಾಲೇಜುಗಳ ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, 30 ವರ್ಷದೊಳಗಿನವರು ಏಕವ್ಯಕ್ತಿಯಾಗಿ ಅಥವಾ ಗುಂಪಾಗಿ ಈ ರೀಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. </p>.<p>ಜಲ ಸಂರಕ್ಷಣೆ, ಹಸಿರು ತಾಣದ ಅಗತ್ಯ, ತ್ಯಾಜ್ಯ ನಿರ್ವಹಣೆ, ಸಾಗಣೆ ಕ್ರಮಗಳಲ್ಲಿ ಬದಲಾವಣೆ ಹಾಗೂ ಹಸಿರು ಇಂಧನ ಪರಿಹಾರ ಕುರಿತು ರೀಲ್ಸ್ ಮಾಡಲು ಅವಕಾಶವಿತ್ತು. ಇದೇ ವೇಳೆ ವಿವಿಧ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದೆ. </p>.<p>ತಜ್ಞರ ಸಮಿತಿ ಪ್ರತಿ ವಿಭಾಗದಲ್ಲಿ ಮೂರು ವಿಡಿಯೊ ರೀಲ್ಸ್ ಆಯ್ಕೆ ಮಾಡುತ್ತದೆ. ಪರಿಸರ ರಕ್ಷಣೆಯ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿತ್ತು ಎಂದು ಫೌಂಡೇಶನ್ನ ಸಂಸ್ಥಾಪಕ ವಿನಯ್ ಶಿಂಧೆ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>