ಅಕ್ಕಿಯನ್ನು ಒದಗಿಸಲು ಕೇಂದ್ರ ನಿರಾಕರಿಸಿದೆ. ಅದಕ್ಕೆ ಬದಲಿಯಾಗಿ ರಾಗಿ, ಜೋಳವನ್ನು ನೀಡಬೇಕು. ಸದ್ಯಕ್ಕೆ ಅಗತ್ಯ ಇರುವಷ್ಟು ಪ್ರಮಾಣದಲ್ಲಿ ರಾಗಿ, ಜೋಳ ಸಿಗದೇ ಇರಬಹುದು. ಸ್ವಾಮಿನಾಥನ್ ಸಮಿತಿಯ ಶಿಫಾರಸಿನಂತೆ ಬೆಂಬಲ ಬೆಲೆಯ ಆಧಾರದಲ್ಲಿ ಖರೀದಿಸುವ ಆಶ್ವಾಸನೆ ನೀಡಿದರೆ ರೈತರು ಮುಂಗಾರಿನಲ್ಲಿ ಬೆಳೆಯಬಹುದು ಎಂದು ತಿಳಿಸಿದ್ದಾರೆ.