ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್. ಸ್ವಾಮಿ ಹಾಗೂ ಬಿಡಿಎ ಎಂಜಿನಿಯರ್ ಎನ್.ಜಿ. ಗೌಡಯ್ಯ ಅವರ ಮನೆ,ಕಚೇರಿಗಳಮೇಲೆ ಶುಕ್ರವಾರ ಬೆಳಿಗ್ಗೆಭ್ರಷ್ಟಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಟಿ.ಆರ್. ಸ್ವಾಮಿ ಅವರಿಗೆ ಸೇರಿರುವ ಮಲ್ಲೇಶ್ವರದ ಮಂತ್ರಿ ಗ್ರೀನ್ಸ್ ಅಪಾರ್ಟ್ಮೆಂಟ್ನಲ್ಲಿ ಅಧಿಕಾರಿಗಳುಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಇದೇ ವೇಳೆ ಗೌಡಯ್ಯ ಅವರಿಗೆ ಸೇರಿರುವ ಬೆಂಗಳೂರು, ತುಮಕೂರಿನ ಮನೆಗಳ ಮೇಲೆ ಅಧಿಕಾರಿಗಳುದಾಳಿ ನಡೆಸಿದಾಗಅವರುಹಣದ ಚೀಲ ಎಸೆದರು ಎಂದು ಮೂಲಗಳು ತಿಳಿಸಿವೆ.