‘ರಾಜ್ಯದಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ ಆರ್ಯವೈಶ್ಯ ಜನಾಂಗವು ಹಿಂದಿನಿಂದಲೂ ಶೋಷಣೆಗೊಳಗಾಗುತ್ತಿದೆ. ಈ ಜನಾಂಗದವರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಲು ಬಹಳ ವರ್ಷಗಳಿಂದ ಹೋರಾಟ ನಡೆದಿದೆ. ಅದರ ಫಲವಾಗಿ, ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಆರ್ಯವೈಶ್ಯ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿತ್ತು. ₹ 11 ಕೋಟಿ ಅನುದಾನವನ್ನೂ ಆಗಿನ ಸರ್ಕಾರ ನಿಗಮಕ್ಕೆ ಬಿಡುಗಡೆ ಮಾಡಿತ್ತು. ಸಾವಿರಕ್ಕೂ ಅಧಿಕ ಫಲಾನುಭವಿಗಳು ಈ ನಿಗಮದ ಪ್ರಯೋಜನ ಪಡೆದಿದ್ದರು. ಆದರೆ, ಈಗಿನ ಸರ್ಕಾರ ನಿಗಮಕ್ಕೆ ಕೇವಲ ₹ 5 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇದು ಏನೇನೂ ಸಾಲದು’ ಎಂದು ಅವರು ತಿಳಿಸಿದ್ದಾರೆ.