<p><strong>ಬೆಂಗಳೂರು: </strong>ಯಲಹಂಕ ವಲಯದ ಸೋಮೇಶ್ವರನಗರದಲ್ಲಿ ಡಾಂಬರೀಕರಣ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವ ಬಗ್ಗೆ ಹಾಗೂ ಮಳೆಯ ನಡುವೆಯೇ ಡಾಂಬರೀಕರಣ ನಡೆಸಿರುವ ಬಗ್ಗೆ ಸ್ಥಳೀಯ ನಿವಾಸಿ ಡಾ.ಆನಂದ ಕುಮಾರ್ ಅವರು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ಲಿಖಿತ ದೂರು ನೀಡಿದ್ದಾರೆ.</p>.<p>ಕಳಪೆ ಕಾಮಗಾರಿಗೆ ಕಾರಣರಾಗಿರುವ ಗುತ್ತಿಗೆದಾರರ ವಿರುದ್ಧ ಹಾಗೂ ಬಿಬಿಎಂಪಿಯ ಎಂಜಿನಿಯರ್ಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.</p>.<p>‘ಜೂನ್ 3ರಂದು ಮಧ್ಯಾಹ್ನ 3.45ರ ವೇಳೆ ಸೋಮೇಶ್ವರ ನಗರದ ಮೂರನೇ ಮುಖ್ಯರಸ್ತೆಯ ಎರಡನೇ ಅಡ್ಡರಸ್ತೆಗೆ ಮಳೆಯ ನಡುವೆಯೇ ಡಾಂಬರೀಕರಣ ನಡೆಸಲಾಗಿದೆ. ಈ ವಿಚಾರ ತಿಳಿದರೂ ಬಿಬಿಎಂಪಿ ಎಂಜಿನಿಯರ್ಗಳು ಅದನ್ನು ತಡೆಯುವ ಪ್ರಯತ್ನ ಮಾಡಿಲ್ಲ. ನಾನು ಈ ವಿಚಾರವನ್ನು ಅವರ ಗಮನಕ್ಕೆ ತಂದೆ. ಆಗ ಅವರು, ‘ಒಂದು ವೇಳೆ ರಸ್ತೆ ಹದಗೆಟ್ಟರೂ, ಕಾಮಗಾರಿಯ ಲೋಪ ನಿರ್ವಹಣೆಯ ಹೊಣೆಗಾರಿಕೆ ಅವಧಿ ಜಾರಿಯಲ್ಲಿರುವುದರಿಂದ ಸಂಬಂಧಪಟ್ಟ ಗುತ್ತಿಗೆದಾರರೇ ಅದನ್ನೇ ದುರಸ್ತಿ ಮಾಡುತ್ತಾರೆ’ ಎಂದು ಉದಾಸೀನದಿಂದ ಹೇಳಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.</p>.<p>‘ಇಂತಹ ಕಳಪೆ ಕಾಮಗಾರಿಗಳಿಂದಾಗಿಯೇ ರಸ್ತೆಗಳಲ್ಲಿ ಬೇಗನೇ ಗುಂಡಿಗಳು ನಿರ್ಮಾಣವಾಗುತ್ತವೆ. ಕಾಮಗಾರಿ ನಡೆಸಿದ ಬಳಿಕ ಗುತ್ತಿಗೆದಾರರು ಹೊಣೆಗಾರಿಕೆಯ ಅವಧಿಯಲ್ಲೂ ಅದರ ನಿರ್ವಹಣೆಯನ್ನು ಸರಿಯಾಗಿ ಮಾಡುವುದಿಲ್ಲ’ ಎಂದೂ ಅವರು ಆರೋಪಿಸಿದ್ದಾರೆ.</p>.<p>‘ಇದೇ ರಸ್ತೆಯಲ್ಲಿ ಇತರ ಕಟ್ಟಡ ಕಾಮಗಾರಿಗಳು ನಡೆಯುತ್ತಿದ್ದು, ಅದಕ್ಕಾಗಿ ಅಗೆದ ಮಣ್ಣನ್ನು ರಸ್ತೆಯಲ್ಲೇ ರಾಶಿ ಹಾಕಲಾಗಿದೆ. ಈ ನಡುವೆಯೇ ಕಾಮಗಾರಿ ನಡೆಸಲಾಗಿದೆ’ ಎಂದೂ ಅವರು ದೂರಿದ್ದಾರೆ.</p>.<p>ಯಲಹಂಕ ವಲಯದ ಜಂಟಿ ಆಯುಕ್ತರಿಗೆ, ಕಾರ್ಯಪಾಲಕ ಎಂಜಿನಿಯರ್ಗೆ ಹಾಗೂ ಬಿಬಿಎಂಪಿಯ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಿಗೂ ದೂರಿನ ಪ್ರತಿಯನ್ನು ಆನಂದ್ ಕುಮಾರ್ ಕಳುಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಯಲಹಂಕ ವಲಯದ ಸೋಮೇಶ್ವರನಗರದಲ್ಲಿ ಡಾಂಬರೀಕರಣ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವ ಬಗ್ಗೆ ಹಾಗೂ ಮಳೆಯ ನಡುವೆಯೇ ಡಾಂಬರೀಕರಣ ನಡೆಸಿರುವ ಬಗ್ಗೆ ಸ್ಥಳೀಯ ನಿವಾಸಿ ಡಾ.ಆನಂದ ಕುಮಾರ್ ಅವರು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ಲಿಖಿತ ದೂರು ನೀಡಿದ್ದಾರೆ.</p>.<p>ಕಳಪೆ ಕಾಮಗಾರಿಗೆ ಕಾರಣರಾಗಿರುವ ಗುತ್ತಿಗೆದಾರರ ವಿರುದ್ಧ ಹಾಗೂ ಬಿಬಿಎಂಪಿಯ ಎಂಜಿನಿಯರ್ಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.</p>.<p>‘ಜೂನ್ 3ರಂದು ಮಧ್ಯಾಹ್ನ 3.45ರ ವೇಳೆ ಸೋಮೇಶ್ವರ ನಗರದ ಮೂರನೇ ಮುಖ್ಯರಸ್ತೆಯ ಎರಡನೇ ಅಡ್ಡರಸ್ತೆಗೆ ಮಳೆಯ ನಡುವೆಯೇ ಡಾಂಬರೀಕರಣ ನಡೆಸಲಾಗಿದೆ. ಈ ವಿಚಾರ ತಿಳಿದರೂ ಬಿಬಿಎಂಪಿ ಎಂಜಿನಿಯರ್ಗಳು ಅದನ್ನು ತಡೆಯುವ ಪ್ರಯತ್ನ ಮಾಡಿಲ್ಲ. ನಾನು ಈ ವಿಚಾರವನ್ನು ಅವರ ಗಮನಕ್ಕೆ ತಂದೆ. ಆಗ ಅವರು, ‘ಒಂದು ವೇಳೆ ರಸ್ತೆ ಹದಗೆಟ್ಟರೂ, ಕಾಮಗಾರಿಯ ಲೋಪ ನಿರ್ವಹಣೆಯ ಹೊಣೆಗಾರಿಕೆ ಅವಧಿ ಜಾರಿಯಲ್ಲಿರುವುದರಿಂದ ಸಂಬಂಧಪಟ್ಟ ಗುತ್ತಿಗೆದಾರರೇ ಅದನ್ನೇ ದುರಸ್ತಿ ಮಾಡುತ್ತಾರೆ’ ಎಂದು ಉದಾಸೀನದಿಂದ ಹೇಳಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.</p>.<p>‘ಇಂತಹ ಕಳಪೆ ಕಾಮಗಾರಿಗಳಿಂದಾಗಿಯೇ ರಸ್ತೆಗಳಲ್ಲಿ ಬೇಗನೇ ಗುಂಡಿಗಳು ನಿರ್ಮಾಣವಾಗುತ್ತವೆ. ಕಾಮಗಾರಿ ನಡೆಸಿದ ಬಳಿಕ ಗುತ್ತಿಗೆದಾರರು ಹೊಣೆಗಾರಿಕೆಯ ಅವಧಿಯಲ್ಲೂ ಅದರ ನಿರ್ವಹಣೆಯನ್ನು ಸರಿಯಾಗಿ ಮಾಡುವುದಿಲ್ಲ’ ಎಂದೂ ಅವರು ಆರೋಪಿಸಿದ್ದಾರೆ.</p>.<p>‘ಇದೇ ರಸ್ತೆಯಲ್ಲಿ ಇತರ ಕಟ್ಟಡ ಕಾಮಗಾರಿಗಳು ನಡೆಯುತ್ತಿದ್ದು, ಅದಕ್ಕಾಗಿ ಅಗೆದ ಮಣ್ಣನ್ನು ರಸ್ತೆಯಲ್ಲೇ ರಾಶಿ ಹಾಕಲಾಗಿದೆ. ಈ ನಡುವೆಯೇ ಕಾಮಗಾರಿ ನಡೆಸಲಾಗಿದೆ’ ಎಂದೂ ಅವರು ದೂರಿದ್ದಾರೆ.</p>.<p>ಯಲಹಂಕ ವಲಯದ ಜಂಟಿ ಆಯುಕ್ತರಿಗೆ, ಕಾರ್ಯಪಾಲಕ ಎಂಜಿನಿಯರ್ಗೆ ಹಾಗೂ ಬಿಬಿಎಂಪಿಯ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಿಗೂ ದೂರಿನ ಪ್ರತಿಯನ್ನು ಆನಂದ್ ಕುಮಾರ್ ಕಳುಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>