‘ಜೂನ್ 3ರಂದು ಮಧ್ಯಾಹ್ನ 3.45ರ ವೇಳೆ ಸೋಮೇಶ್ವರ ನಗರದ ಮೂರನೇ ಮುಖ್ಯರಸ್ತೆಯ ಎರಡನೇ ಅಡ್ಡರಸ್ತೆಗೆ ಮಳೆಯ ನಡುವೆಯೇ ಡಾಂಬರೀಕರಣ ನಡೆಸಲಾಗಿದೆ. ಈ ವಿಚಾರ ತಿಳಿದರೂ ಬಿಬಿಎಂಪಿ ಎಂಜಿನಿಯರ್ಗಳು ಅದನ್ನು ತಡೆಯುವ ಪ್ರಯತ್ನ ಮಾಡಿಲ್ಲ. ನಾನು ಈ ವಿಚಾರವನ್ನು ಅವರ ಗಮನಕ್ಕೆ ತಂದೆ. ಆಗ ಅವರು, ‘ಒಂದು ವೇಳೆ ರಸ್ತೆ ಹದಗೆಟ್ಟರೂ, ಕಾಮಗಾರಿಯ ಲೋಪ ನಿರ್ವಹಣೆಯ ಹೊಣೆಗಾರಿಕೆ ಅವಧಿ ಜಾರಿಯಲ್ಲಿರುವುದರಿಂದ ಸಂಬಂಧಪಟ್ಟ ಗುತ್ತಿಗೆದಾರರೇ ಅದನ್ನೇ ದುರಸ್ತಿ ಮಾಡುತ್ತಾರೆ’ ಎಂದು ಉದಾಸೀನದಿಂದ ಹೇಳಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.