<p><strong>ಬೆಂಗಳೂರು:</strong> ಎಂಟೇ ನಿಮಿಷಕ್ಕೆ ಇಡೀ ರೈಲು ಸ್ವಚ್ಛಗೊಳಿಸಬಲ್ಲ ಸ್ವಯಂಚಾಲಿತ ಘಟಕ ನೈರುತ್ಯ ರೈಲ್ವೆ ವಲಯದಲ್ಲೇ ಮೊದಲ ಬಾರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಅಸ್ತಿತ್ವಕ್ಕೆ ಬಂದಿದೆ.</p>.<p>ಕೆಎಸ್ಆರ್ ರೈಲು ನಿಲ್ದಾಣದಿಂದ ಕಂಟೋನ್ಮೆಂಟ್ ರೈಲು ನಿಲ್ದಾಣದ ಕಡೆಯ ಮಾರ್ಗದ ಬದಿಯಲ್ಲಿ ಈ ಘಟಕ ನಿರ್ಮಾಣವಾಗಿದೆ. 24 ಬೋಗಿಗಳ ಒಂದು ರೈಲು ಗಾಡಿ ತೊಳೆಯಲು ಹೆಚ್ಚೆಂದರೆ 8 ನಿಮಿಷ ಸಾಕಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.</p>.<p>ರೈಲು ತೊಳೆಯಲು ಹಿಂದೆ ಅನುಸರಿಸುತ್ತಿರುವ ಮಾದರಿಗೂ ಹೊಸ ತಂತ್ರಜ್ಞಾನಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸಿಬ್ಬಂದಿಯ ಸಹಾಯದಿಂದ ರೈಲು ತೊಳೆಯಲು ಈಗ ಬಳಸುತ್ತಿರುವ ನೀರಿನ ಪ್ರಮಾಣದಲ್ಲಿ ಶೇ 50ರಿಂದ ಶೇ 60ರಷ್ಟು ಉಳಿತಾಯವಾಗಲಿದೆ.</p>.<p>ಒಂದು ಬೋಗಿ ತೊಳೆಯಲು ಈ ಹಿಂದೆ 1,500 ಲೀಟರ್ ನೀರಿನ ಅಗತ್ಯ ಇತ್ತು. ಹೊಸ ವ್ಯವಸ್ಥೆಯಲ್ಲಿ 250 ಲೀಟರ್ ನೀರು ಸಾಕಾಗಲಿದೆ. ಶೇ 85ರಷ್ಟು ನೀರನ್ನು ಮರುಬಳಕೆ ಮಾಡುವ ಸೌಲಭ್ಯ ಇದೆ.</p>.<p>ಸ್ವಯಂಚಾಲಿತ ಬೋಗಿ ತೊಳೆಯುವ ಘಟಕದೊಳಗೆ ರೈಲು ಗಾಡಿ ನಿಧಾನವಾಗಿ (ಗಂಟೆಗೆ 5–6 ಕಿಲೋ ಮಿಟರ್ ಕಡಿಮೆ ವೇಗದಲ್ಲಿ) ಚಲಿಸುವಾಗಲೇ ಎರಡೂ ಬದಿಯಲ್ಲಿ ಯಂತ್ರಗಳೇ ಸ್ವಚ್ಛಗೊಳಿಸುತ್ತವೆ. ಇಡೀ ಘಟಕವನ್ನು ಒಬ್ಬ ಸಿಬ್ಬಂದಿಯೇ ನಿರ್ವಹಿಸಬಹುದು.</p>.<p>ಈಸ್ಟ್ ಕೋಸ್ಟ್ ರೈಲ್ವೆ ವಿಭಾಗದ ಭುವನೇಶ್ವರದಲ್ಲಿ ಸದ್ಯ ಈ ರೀತಿಯ ವ್ಯವಸ್ಥೆ ಅಸ್ತಿತ್ವದಲ್ಲಿದೆ. ನೈರುತ್ಯ ರೈಲ್ವೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ಘಟಕವೇ ಮೊದಲನೆಯದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.</p>.<p class="Subhead">₹1.78 ಕೋಟಿ ವೆಚ್ಚ:ಈ ಘಟಕ ನಿರ್ಮಾಣಕ್ಕೆ ₹1.78 ಕೋಟಿ ವೆಚ್ಚವಾಗಲಿದೆ ಎಂದು ರೈಲ್ವೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಮುಂದಿನ ದಿನಗಳಲ್ಲಿ ಬೈಯ್ಯಪ್ಪನಹಳ್ಳಿ ಮತ್ತು ಬಾಣಸವಾಡಿಯಲ್ಲೂ ಇದೇ ಮಾದರಿಯ ಘಟಕ ತೆರೆಯುವ ಉದ್ದೇಶ ಇದೆ ಎಂದು ಅವರು ಹೇಳಿದರು. ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್ ಸಿಂಗ್ ಅವರು ಬುಧವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಈ ಘಟಕಕ್ಕೆ ಚಾಲನೆ ನೀಡಿದರು.</p>.<p><strong>ವಿಶೇಷಗಳೇನು?</strong></p>.<p>*ಚಲಿಸುವ ರೈಲನ್ನುತೊಳೆಯುವ ಸ್ಥಿರ ಘಟಕ</p>.<p>*ತ್ಯಾಜ್ಯ ನೀರು ಮರುಬಳಕೆ</p>.<p>*ಕಂಪ್ಯೂಟರೀಕೃತ ವ್ಯವಸ್ಥೆ, ಒಬ್ಬ ನಿರ್ವಾಹಕ ಸಾಕು</p>.<p>*ಕಡಿಮೆ ನೀರಿನ ಬಳಕೆ</p>.<p>*ಒಣಗಿಸುವ ವ್ಯವಸ್ಥೆಯೂ ಇದೆ</p>.<p>*ಬಿಡಿ ಭಾಗಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯ</p>.<p>*ಗಾಳಿಯ ನಿರಂತರ ಒತ್ತಡದಿಂದ ಸ್ವಚ್ಛಗಳಿಸುವ ತಿರುಗುವ ನೈಲಾನ್ಹ, ಹತ್ತಿ ಬ್ರಷ್ಗಳು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಎಂಟೇ ನಿಮಿಷಕ್ಕೆ ಇಡೀ ರೈಲು ಸ್ವಚ್ಛಗೊಳಿಸಬಲ್ಲ ಸ್ವಯಂಚಾಲಿತ ಘಟಕ ನೈರುತ್ಯ ರೈಲ್ವೆ ವಲಯದಲ್ಲೇ ಮೊದಲ ಬಾರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಅಸ್ತಿತ್ವಕ್ಕೆ ಬಂದಿದೆ.</p>.<p>ಕೆಎಸ್ಆರ್ ರೈಲು ನಿಲ್ದಾಣದಿಂದ ಕಂಟೋನ್ಮೆಂಟ್ ರೈಲು ನಿಲ್ದಾಣದ ಕಡೆಯ ಮಾರ್ಗದ ಬದಿಯಲ್ಲಿ ಈ ಘಟಕ ನಿರ್ಮಾಣವಾಗಿದೆ. 24 ಬೋಗಿಗಳ ಒಂದು ರೈಲು ಗಾಡಿ ತೊಳೆಯಲು ಹೆಚ್ಚೆಂದರೆ 8 ನಿಮಿಷ ಸಾಕಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.</p>.<p>ರೈಲು ತೊಳೆಯಲು ಹಿಂದೆ ಅನುಸರಿಸುತ್ತಿರುವ ಮಾದರಿಗೂ ಹೊಸ ತಂತ್ರಜ್ಞಾನಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸಿಬ್ಬಂದಿಯ ಸಹಾಯದಿಂದ ರೈಲು ತೊಳೆಯಲು ಈಗ ಬಳಸುತ್ತಿರುವ ನೀರಿನ ಪ್ರಮಾಣದಲ್ಲಿ ಶೇ 50ರಿಂದ ಶೇ 60ರಷ್ಟು ಉಳಿತಾಯವಾಗಲಿದೆ.</p>.<p>ಒಂದು ಬೋಗಿ ತೊಳೆಯಲು ಈ ಹಿಂದೆ 1,500 ಲೀಟರ್ ನೀರಿನ ಅಗತ್ಯ ಇತ್ತು. ಹೊಸ ವ್ಯವಸ್ಥೆಯಲ್ಲಿ 250 ಲೀಟರ್ ನೀರು ಸಾಕಾಗಲಿದೆ. ಶೇ 85ರಷ್ಟು ನೀರನ್ನು ಮರುಬಳಕೆ ಮಾಡುವ ಸೌಲಭ್ಯ ಇದೆ.</p>.<p>ಸ್ವಯಂಚಾಲಿತ ಬೋಗಿ ತೊಳೆಯುವ ಘಟಕದೊಳಗೆ ರೈಲು ಗಾಡಿ ನಿಧಾನವಾಗಿ (ಗಂಟೆಗೆ 5–6 ಕಿಲೋ ಮಿಟರ್ ಕಡಿಮೆ ವೇಗದಲ್ಲಿ) ಚಲಿಸುವಾಗಲೇ ಎರಡೂ ಬದಿಯಲ್ಲಿ ಯಂತ್ರಗಳೇ ಸ್ವಚ್ಛಗೊಳಿಸುತ್ತವೆ. ಇಡೀ ಘಟಕವನ್ನು ಒಬ್ಬ ಸಿಬ್ಬಂದಿಯೇ ನಿರ್ವಹಿಸಬಹುದು.</p>.<p>ಈಸ್ಟ್ ಕೋಸ್ಟ್ ರೈಲ್ವೆ ವಿಭಾಗದ ಭುವನೇಶ್ವರದಲ್ಲಿ ಸದ್ಯ ಈ ರೀತಿಯ ವ್ಯವಸ್ಥೆ ಅಸ್ತಿತ್ವದಲ್ಲಿದೆ. ನೈರುತ್ಯ ರೈಲ್ವೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ಘಟಕವೇ ಮೊದಲನೆಯದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.</p>.<p class="Subhead">₹1.78 ಕೋಟಿ ವೆಚ್ಚ:ಈ ಘಟಕ ನಿರ್ಮಾಣಕ್ಕೆ ₹1.78 ಕೋಟಿ ವೆಚ್ಚವಾಗಲಿದೆ ಎಂದು ರೈಲ್ವೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಮುಂದಿನ ದಿನಗಳಲ್ಲಿ ಬೈಯ್ಯಪ್ಪನಹಳ್ಳಿ ಮತ್ತು ಬಾಣಸವಾಡಿಯಲ್ಲೂ ಇದೇ ಮಾದರಿಯ ಘಟಕ ತೆರೆಯುವ ಉದ್ದೇಶ ಇದೆ ಎಂದು ಅವರು ಹೇಳಿದರು. ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್ ಸಿಂಗ್ ಅವರು ಬುಧವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಈ ಘಟಕಕ್ಕೆ ಚಾಲನೆ ನೀಡಿದರು.</p>.<p><strong>ವಿಶೇಷಗಳೇನು?</strong></p>.<p>*ಚಲಿಸುವ ರೈಲನ್ನುತೊಳೆಯುವ ಸ್ಥಿರ ಘಟಕ</p>.<p>*ತ್ಯಾಜ್ಯ ನೀರು ಮರುಬಳಕೆ</p>.<p>*ಕಂಪ್ಯೂಟರೀಕೃತ ವ್ಯವಸ್ಥೆ, ಒಬ್ಬ ನಿರ್ವಾಹಕ ಸಾಕು</p>.<p>*ಕಡಿಮೆ ನೀರಿನ ಬಳಕೆ</p>.<p>*ಒಣಗಿಸುವ ವ್ಯವಸ್ಥೆಯೂ ಇದೆ</p>.<p>*ಬಿಡಿ ಭಾಗಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯ</p>.<p>*ಗಾಳಿಯ ನಿರಂತರ ಒತ್ತಡದಿಂದ ಸ್ವಚ್ಛಗಳಿಸುವ ತಿರುಗುವ ನೈಲಾನ್ಹ, ಹತ್ತಿ ಬ್ರಷ್ಗಳು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>