‘ಅರ್ಜಿದಾರರ ದೂರಿಗೆ ಆರ್ಬಿಐ ಕೂಡ 2017ರಲ್ಲಿ ಉತ್ತರ ನೀಡಿದೆ. ಈ ಬಗ್ಗೆ ಬೇರೆ ತಕಾರು ಇದ್ದರೆ ಸೂಕ್ತ ವೇದಿಕೆಯಲ್ಲಿ ಪರಿಹರಿಸಿಕೊಳ್ಳಬಹುದು. ಪದೇ ಪದೇ ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಸುವ ಮೂಲಕ ಸಮಯ ವ್ಯರ್ಥ ಮಾಡಲಾಗುತ್ತಿದೆ. ನ್ಯಾಯಾಂಗ ದುರ್ಬಳಕೆ ಮಾಡಲಾಗುತ್ತಿದೆ’ ಎಂದು ಅಭಿಪ್ರಾಯಿಸಿದ ಪೀಠ, ದಂಡ ವಿಧಿಸಿ ಆದೇಶಿಸಿದೆ.