<p><strong>ಬೆಂಗಳೂರು:</strong> ಲಾಕ್ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ 5ರಿಂದ 8 ವರ್ಷ ವೃತ್ತಿ ಅನುಭವ ಹೊಂದಿದ ಬಡ ಹಾಗೂ ಯುವ ವಕೀಲರಿಗೆ ಹಣಕಾಸು ನೆರವು ಒದಗಿಸಲು ಬೆಂಗಳೂರು ವಕೀಲರ ಸಂಘ ಮುಂದಾಗಿದೆ.</p>.<p>ಈಗಾಗಲೇ ಎರಡು ಹಂತದಲ್ಲಿ 5 ವರ್ಷದ ವೃತ್ತಿ ಅನುಭವ ಹೊಂದಿರುವ ಒಟ್ಟು 368 ವಕೀಲರಿಗೆ ತಲಾ ₹ 5 ಸಾವಿರ ನೆರವು ನೀಡಿರುವ ಸಂಘವು ಇದೀಗ 5 ರಿಂದ 8 ವರ್ಷದೊಳಗೆ ವಕೀಲಿ ವೃತ್ತಿ ಅನುಭವ ಹೊಂದಿದ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ವಕೀಲರಿಗೂ ನೆರವು ನೀಡಲು ತೀರ್ಮಾನಿಸಿದೆ.</p>.<p>'ವಕೀಲರು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ನೋಂದಣಿ ಸಂಖ್ಯೆ, ಸಂಘದ ಗುರುತಿನ ಚೀಟಿ, ಬ್ಯಾಂಕ್ ಖಾತೆ ವಿವರಗಳನ್ನು ಸಂಘದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. ಇಲ್ಲವೇ, ಸಿಟಿ ಸಿವಿಲ್ ಕೋರ್ಟ್ ಆವರಣದ ವಕೀಲರ ಭವನದಲ್ಲಿನ ಸಂಘದ ಕಚೇರಿಗೆ ಖುದ್ದು ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು' ಎಂದು ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ತಿಳಿಸಿದ್ದಾರೆ.</p>.<p>'ದೇಣಿಗೆ ನೀಡ ಬಯಸುವವರು ಕರ್ನಾಟಕ ಬ್ಯಾಂಕ್ ಖಾತೆ ಸಂಖ್ಯೆ-1172000100026101, ಐಎಫ್ಎಸ್ಸಿ ಕೋಡ್ ಕೆಎಆರ್ಬಿ-0000117, ಸಿಟಿ ಸಿವಿಲ್ ಕೋರ್ಟ್ ಶಾಖೆಗೆ ಹಣ ಪಾವತಿಸಬಹುದು' ಎಂದು ಅವರು ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಲಾಕ್ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ 5ರಿಂದ 8 ವರ್ಷ ವೃತ್ತಿ ಅನುಭವ ಹೊಂದಿದ ಬಡ ಹಾಗೂ ಯುವ ವಕೀಲರಿಗೆ ಹಣಕಾಸು ನೆರವು ಒದಗಿಸಲು ಬೆಂಗಳೂರು ವಕೀಲರ ಸಂಘ ಮುಂದಾಗಿದೆ.</p>.<p>ಈಗಾಗಲೇ ಎರಡು ಹಂತದಲ್ಲಿ 5 ವರ್ಷದ ವೃತ್ತಿ ಅನುಭವ ಹೊಂದಿರುವ ಒಟ್ಟು 368 ವಕೀಲರಿಗೆ ತಲಾ ₹ 5 ಸಾವಿರ ನೆರವು ನೀಡಿರುವ ಸಂಘವು ಇದೀಗ 5 ರಿಂದ 8 ವರ್ಷದೊಳಗೆ ವಕೀಲಿ ವೃತ್ತಿ ಅನುಭವ ಹೊಂದಿದ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ವಕೀಲರಿಗೂ ನೆರವು ನೀಡಲು ತೀರ್ಮಾನಿಸಿದೆ.</p>.<p>'ವಕೀಲರು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ನೋಂದಣಿ ಸಂಖ್ಯೆ, ಸಂಘದ ಗುರುತಿನ ಚೀಟಿ, ಬ್ಯಾಂಕ್ ಖಾತೆ ವಿವರಗಳನ್ನು ಸಂಘದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. ಇಲ್ಲವೇ, ಸಿಟಿ ಸಿವಿಲ್ ಕೋರ್ಟ್ ಆವರಣದ ವಕೀಲರ ಭವನದಲ್ಲಿನ ಸಂಘದ ಕಚೇರಿಗೆ ಖುದ್ದು ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು' ಎಂದು ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ತಿಳಿಸಿದ್ದಾರೆ.</p>.<p>'ದೇಣಿಗೆ ನೀಡ ಬಯಸುವವರು ಕರ್ನಾಟಕ ಬ್ಯಾಂಕ್ ಖಾತೆ ಸಂಖ್ಯೆ-1172000100026101, ಐಎಫ್ಎಸ್ಸಿ ಕೋಡ್ ಕೆಎಆರ್ಬಿ-0000117, ಸಿಟಿ ಸಿವಿಲ್ ಕೋರ್ಟ್ ಶಾಖೆಗೆ ಹಣ ಪಾವತಿಸಬಹುದು' ಎಂದು ಅವರು ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>