ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಬೆಂಗಳೂರು | ಕಾಮಗಾರಿ ನಿಧಾನ, ಸಂಚಾರ ಅಧ್ವಾನ

ಆರ್‌.ಟಿ. ನಗರ ಮುಖ್ಯರಸ್ತೆ: ಮಳೆ ಬಂದರೆ ಕೆಸರು.. ಬಾರದಿದ್ದರೆ ದೂಳು..
Published : 25 ಮೇ 2024, 0:31 IST
Last Updated : 25 ಮೇ 2024, 0:31 IST
ಫಾಲೋ ಮಾಡಿ
Comments
ಶೇ 50ರಷ್ಟೂ ವ್ಯಾಪಾರವಿಲ್ಲ ಬಿಬಿಎಂಪಿ ಈ ಕಾಮಗಾರಿ ಕೈಗೊಂಡಲ್ಲಿಂದ ರಸ್ತೆ ಎರಡೂ ಬದಿಯ ಅಂಗಡಿಗಳಿಗೆ ವ್ಯಾಪಾರ ಕಡಿಮೆಯಾಗಿದೆ. ಐದಾರು ತಿಂಗಳಿನಿಂದ ಶೇ 50ರಷ್ಟು ವ್ಯಾಪಾರ ಆಗುತ್ತಿಲ್ಲ. ಈಗ ಕಾಮಗಾರಿ ನಡೆಯುತ್ತಿರುವ ವೇಗ ನೋಡಿದರೆ ಇನ್ನು ಆರು ತಿಂಗಳಾದರೂ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ.
–ಜಗನ್ನಾಥ, ಎಸ್‌ಆರ್‌ಎ ಮೆಡಿಕಲ್‌ ಶಾಪ್‌, ಆರ್‌.ಟಿ.ನಗರ
ಅಡ್ಡರಸ್ತೆಗಳಲ್ಲೂ ಸಮಸ್ಯೆ 80 ಅಡಿ ಮುಖ್ಯರಸ್ತೆಯನ್ನು ಅಗೆದು ಹಾಕಿ ವಾಹನಗಳು, ಜನ ಸಂಚಾರಕ್ಕೆ ಒಂದೆಡೆ ತೊಂದರೆ ಆಗಿದೆ. ಇನ್ನೊಂದೆಡೆ, ಈ ರಸ್ತೆಯನ್ನು ಸಂಪರ್ಕಿಸುವ ಅಡ್ಡ ರಸ್ತೆಗಳಿಗೂ ಇದರಿಂದ ತೊಂದರೆಯಾಗಿದೆ. ಮುಖ್ಯರಸ್ತೆಯಲ್ಲಿ ಸಾಲು ಸಾಲು ಅಂಗಡಿ, ಹೋಟೆಲ್‌ಗಳಿವೆ. ಅಲ್ಲಿ ವಾಹನ ನಿಲ್ಲಿಸಲು ಜಾಗವಿಲ್ಲ. ಅಡ್ಡರಸ್ತೆಗಳಲ್ಲಿ ನಿಲ್ಲಿಸುತ್ತಾರೆ. ಇದರಿಂದ ಅಲ್ಲಿಯೂ ಸಂಚಾರಕ್ಕೆ ತೊಡಕಾಗಿದೆ. ಸಂಜೆ ತಳ್ಳುಗಾಡಿಗಳು ಸಾಲು ಸಾಲು ನಿಂತರಂತೂ ಇಲ್ಲಿ ಅತ್ತಿತ್ತ ಓಡಾಡಲೂ ಕಷ್ಟ.
ಸೈಫುದ್ದೀನ್‌, ಕೆಟರ್ ಕೆಫೆ, ತರಳಬಾಳು ರಸ್ತೆ, ಆರ್‌.ಟಿ. ನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT