<p><strong>ಬೆಂಗಳೂರು</strong>: 'ಬರಹಗಾರರು ಯಾವುದೇ ಗುಂಪಿನ ಜತೆ ಗುರುತಿಸಿಕೊಳ್ಳುವುದು ವೈಯಕ್ತಿಕವಾಗಿ ಸರಿ ಎನಿಸುವುದಿಲ್ಲ. ನಿರ್ದಿಷ್ಟ ಗುಂಪಿಗೆ ಸೇರಿದರೆ ಅದರ ಸಿದ್ದಾಂತಕ್ಕೆ ಸೀಮಿತವಾಗುತ್ತೇವೆ‘ ಎಂದು ಸಾಹಿತಿ ಶಾಂತಿ ಕೆ. ಅಪ್ಪಣ್ಣ ಹೇಳಿದರು.</p>.<p>ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಶನಿವಾರ ‘ಹೊಸ ಬರಹ: ಇಂದಿನ ಕನ್ನಡ ಬರವಣಿಗೆ’ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>‘ಎಡ ಪಂಥೀಯ, ಬಲ ಪಂಥೀಯ ಎಂಬ ನಿಲುವು ಇರುವುದು ಸಹಜ. ಆದರೆ, ನಮ್ಮ ನಿಲುವಿನ ಮೇಲೆ ಪಯಣಿಸಬೇಕು. ಯಾವುದೇ ಗುಂಪು ಪ್ರತಿನಿಧಿಸುವುದನ್ನು ನಾನು ಇಷ್ಟ ಪಡುವುದಿಲ್ಲ. ಬರಹಗಾರ ಸಂವೇದನಾಶೀಲನಾಗಿರಬೇಕು. ಮತ್ತೊಬ್ಬರ ಕಷ್ಟ ಅರ್ಥಮಾಡಿಕೊಳ್ಳುವ ಅಂತಃಕರಣ ಇರಬೇಕು’ ಎಂದು ತಿಳಿಸಿದರು. </p>.<p>ಲೇಖಕಿ ಪಿ.ಕುಸುಮಾ ಆಯರಹಳ್ಳಿ ಮಾತನಾಡಿ, ‘ಬರಹಗಾರ, ಯಾವುದೇ ಗುಂಪಿನ ಜತೆ ಗುರುತಿಸಿಕೊಂಡರೆ ನಷ್ಟ. ಹಾಗಾಗಿ ಅಂತರ ಕಾಯ್ದುಕೊಳ್ಳುವುದು ಸರಿ‘ ಎಂದು ಅಭಿಪ್ರಾಯಪಟ್ಟರು.</p>.<p>ಲೇಖಕ ವೈ.ಎನ್. ಮಧು ಮಾತನಾಡಿ, ‘ಬರವಣಿಗೆಯ ಆರಂಭದ ದಿನಗಳಲ್ಲಿ ನಿರ್ದಿಷ್ಟ ಗುಂಪಿನ ಜತೆ ಗುರುತಿಸಿಕೊಂಡಿದ್ದೆ. ಆದರೆ ಅದರಿಂದ ಹೊರ ಬಂದು, ನನ್ನ ಬರವಣಿಗೆಯ ಮೂಲಕ ಗುರುತಿಸಿಕೊಂಡಿದ್ದೇನೆ. ಯುವ ಬರಹಗಾರರಿಗೆ ಕನ್ನಡದಲ್ಲಿ ಸಾಕಷ್ಟು ಅವಕಾಶ ಇದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>ಗೀತಾ ವಸಂತಾ ಅವರು ಗೋಷ್ಠಿ ನಿರ್ವಹಣೆ ಮಾಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: 'ಬರಹಗಾರರು ಯಾವುದೇ ಗುಂಪಿನ ಜತೆ ಗುರುತಿಸಿಕೊಳ್ಳುವುದು ವೈಯಕ್ತಿಕವಾಗಿ ಸರಿ ಎನಿಸುವುದಿಲ್ಲ. ನಿರ್ದಿಷ್ಟ ಗುಂಪಿಗೆ ಸೇರಿದರೆ ಅದರ ಸಿದ್ದಾಂತಕ್ಕೆ ಸೀಮಿತವಾಗುತ್ತೇವೆ‘ ಎಂದು ಸಾಹಿತಿ ಶಾಂತಿ ಕೆ. ಅಪ್ಪಣ್ಣ ಹೇಳಿದರು.</p>.<p>ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಶನಿವಾರ ‘ಹೊಸ ಬರಹ: ಇಂದಿನ ಕನ್ನಡ ಬರವಣಿಗೆ’ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>‘ಎಡ ಪಂಥೀಯ, ಬಲ ಪಂಥೀಯ ಎಂಬ ನಿಲುವು ಇರುವುದು ಸಹಜ. ಆದರೆ, ನಮ್ಮ ನಿಲುವಿನ ಮೇಲೆ ಪಯಣಿಸಬೇಕು. ಯಾವುದೇ ಗುಂಪು ಪ್ರತಿನಿಧಿಸುವುದನ್ನು ನಾನು ಇಷ್ಟ ಪಡುವುದಿಲ್ಲ. ಬರಹಗಾರ ಸಂವೇದನಾಶೀಲನಾಗಿರಬೇಕು. ಮತ್ತೊಬ್ಬರ ಕಷ್ಟ ಅರ್ಥಮಾಡಿಕೊಳ್ಳುವ ಅಂತಃಕರಣ ಇರಬೇಕು’ ಎಂದು ತಿಳಿಸಿದರು. </p>.<p>ಲೇಖಕಿ ಪಿ.ಕುಸುಮಾ ಆಯರಹಳ್ಳಿ ಮಾತನಾಡಿ, ‘ಬರಹಗಾರ, ಯಾವುದೇ ಗುಂಪಿನ ಜತೆ ಗುರುತಿಸಿಕೊಂಡರೆ ನಷ್ಟ. ಹಾಗಾಗಿ ಅಂತರ ಕಾಯ್ದುಕೊಳ್ಳುವುದು ಸರಿ‘ ಎಂದು ಅಭಿಪ್ರಾಯಪಟ್ಟರು.</p>.<p>ಲೇಖಕ ವೈ.ಎನ್. ಮಧು ಮಾತನಾಡಿ, ‘ಬರವಣಿಗೆಯ ಆರಂಭದ ದಿನಗಳಲ್ಲಿ ನಿರ್ದಿಷ್ಟ ಗುಂಪಿನ ಜತೆ ಗುರುತಿಸಿಕೊಂಡಿದ್ದೆ. ಆದರೆ ಅದರಿಂದ ಹೊರ ಬಂದು, ನನ್ನ ಬರವಣಿಗೆಯ ಮೂಲಕ ಗುರುತಿಸಿಕೊಂಡಿದ್ದೇನೆ. ಯುವ ಬರಹಗಾರರಿಗೆ ಕನ್ನಡದಲ್ಲಿ ಸಾಕಷ್ಟು ಅವಕಾಶ ಇದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>ಗೀತಾ ವಸಂತಾ ಅವರು ಗೋಷ್ಠಿ ನಿರ್ವಹಣೆ ಮಾಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>