<p><strong>ಬೆಂಗಳೂರು</strong>: ‘ದೇಶದ ಬಹುಸಂಖ್ಯಾತರ ಭಾಷೆ ಹಿಂದೂಸ್ತಾನಿ ಆಗಿದೆ. ಇದು ನೊಯ್ಡಾ ಮೂಲದ ಮಾಧ್ಯಮಗಳಲ್ಲಿ ಕಾಣುವುದಿಲ್ಲ’ ಎಂದು ಲೇಖಕಿ ರಕ್ಷಂದಾ ಜಲೀಲ್ ಹೇಳಿದರು.</p>.<p>ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಶನಿವಾರ ನಡೆದ ‘ಹಿಂದಿ ಮತ್ತು ಹಿಂದೂಸ್ತಾನಿ’ ಎಂಬ ಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>‘ಹಿಂದಿ ಮತ್ತು ಉರ್ದು ಮಿಶ್ರಿತ ಭಾಷೆಯನ್ನು ಹಿಂದೂಸ್ತಾನಿ ಎಂದು ಕರೆಯಬಹುದು. ಇದು ಬಾಲಿವುಡ್ ಸಿನೆಮಾ ರಂಗದಲ್ಲಿ ಛಾಪು ಮೂಡಿಸಿದೆ. ಮಾಧ್ಯಮಗಳಲ್ಲಿ, ಸಾರ್ವಜನಿಕರ ಆಡುಮಾತುಗಳಲ್ಲಿಯೂ ಇದು ಹೆಚ್ಚು ಬಳಕೆಯಲ್ಲಿದೆ. ಲೇಖಕರು ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಸಾಹಿತ್ಯ ರಚಿಸಿದರೂ, ಈ ಎರಡು ಭಾಷೆಗಳನ್ನು ಸಮನಾಂತರವಾಗಿ ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.</p>.<p>‘ಹಿಂದಿ ಮತ್ತು ಉರ್ದು ಭಾಷೆಯ ಪದಗಳಲ್ಲಿ, ಶಬ್ದಕೋಶಗಳಲ್ಲಿ ವ್ಯತ್ಯಾಸಗಳನ್ನು ಕಾಣಬಹುದು. ಸಾಹಿತ್ಯ ರಚನೆಯಲ್ಲಿಯೂ ವ್ಯತ್ಯಾಸವಿದೆ. ಉರ್ದು ಭಾಷೆಯನ್ನು ತಿಳಿದುಕೊಳ್ಳಬೇಕದಾರೆ ಅದರ ಲಿಪಿಯನ್ನು ಅರ್ಥೈಸಿಕೊಳ್ಳಬೇಕು’ ಎಂದು ತಿಳಿಸಿದರು.</p>.<p>‘ಈ ಗೋಷ್ಠಿಗೆ ಹಿಂದಿ, ಉರ್ದು ಮತ್ತು ಹಿಂದೂಸ್ತಾನಿ ಎಂಬ ಶೀರ್ಷಿಕೆ ನೀಡಬೇಕಿತ್ತು. ಭಾಷೆಗಳ ಬಳಕೆ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ. ಹಿಂದೂಸ್ತಾನಿಯೊಳಗೆ ಉರ್ದುವನ್ನೂ ಸೇರಿಸಿದ್ದರೆ ಇದಕ್ಕೆ ಇನ್ನಷ್ಟೂ ಮೆರಗು ಬರುತ್ತಿತ್ತು’ ಎಂದು ಹೇಳಿದರು.</p>.<p>ಲೇಖಕ ಚಂದನ್ ಪಾಂಡೆ ಮಾತನಾಡಿ, ‘ಹಿಂದಿ ಮತ್ತು ಉರ್ದು ಭಾಷೆಗಳ ಸಂಘರ್ಷದಲ್ಲಿ ಭೋಜಪುರಿ, ಅವಧ್ ಸೇರಿದಂತೆ ಸ್ಥಳೀಯ ಭಾಷೆಗಳಿಗೆ ಹೆಚ್ಚು ಪ್ರಾಮುಖ್ಯ ದೊರೆಯುತ್ತಿಲ್ಲ. ಭಾಷೆ ಎಂದರೆ ಅದು ಪದಗಳ ಗುಚ್ಚವಾಗಿದೆ. ಅದು ಜನರ ನಂಬಿಕೆಯನ್ನು ಪ್ರತಿನಿಧಿಸುತ್ತದೆ’ ಎಂದು ಹೇಳಿದರು.</p>.<p>ಮನಿಷಾ ಪಾಂಡೆ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ದೇಶದ ಬಹುಸಂಖ್ಯಾತರ ಭಾಷೆ ಹಿಂದೂಸ್ತಾನಿ ಆಗಿದೆ. ಇದು ನೊಯ್ಡಾ ಮೂಲದ ಮಾಧ್ಯಮಗಳಲ್ಲಿ ಕಾಣುವುದಿಲ್ಲ’ ಎಂದು ಲೇಖಕಿ ರಕ್ಷಂದಾ ಜಲೀಲ್ ಹೇಳಿದರು.</p>.<p>ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಶನಿವಾರ ನಡೆದ ‘ಹಿಂದಿ ಮತ್ತು ಹಿಂದೂಸ್ತಾನಿ’ ಎಂಬ ಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>‘ಹಿಂದಿ ಮತ್ತು ಉರ್ದು ಮಿಶ್ರಿತ ಭಾಷೆಯನ್ನು ಹಿಂದೂಸ್ತಾನಿ ಎಂದು ಕರೆಯಬಹುದು. ಇದು ಬಾಲಿವುಡ್ ಸಿನೆಮಾ ರಂಗದಲ್ಲಿ ಛಾಪು ಮೂಡಿಸಿದೆ. ಮಾಧ್ಯಮಗಳಲ್ಲಿ, ಸಾರ್ವಜನಿಕರ ಆಡುಮಾತುಗಳಲ್ಲಿಯೂ ಇದು ಹೆಚ್ಚು ಬಳಕೆಯಲ್ಲಿದೆ. ಲೇಖಕರು ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಸಾಹಿತ್ಯ ರಚಿಸಿದರೂ, ಈ ಎರಡು ಭಾಷೆಗಳನ್ನು ಸಮನಾಂತರವಾಗಿ ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.</p>.<p>‘ಹಿಂದಿ ಮತ್ತು ಉರ್ದು ಭಾಷೆಯ ಪದಗಳಲ್ಲಿ, ಶಬ್ದಕೋಶಗಳಲ್ಲಿ ವ್ಯತ್ಯಾಸಗಳನ್ನು ಕಾಣಬಹುದು. ಸಾಹಿತ್ಯ ರಚನೆಯಲ್ಲಿಯೂ ವ್ಯತ್ಯಾಸವಿದೆ. ಉರ್ದು ಭಾಷೆಯನ್ನು ತಿಳಿದುಕೊಳ್ಳಬೇಕದಾರೆ ಅದರ ಲಿಪಿಯನ್ನು ಅರ್ಥೈಸಿಕೊಳ್ಳಬೇಕು’ ಎಂದು ತಿಳಿಸಿದರು.</p>.<p>‘ಈ ಗೋಷ್ಠಿಗೆ ಹಿಂದಿ, ಉರ್ದು ಮತ್ತು ಹಿಂದೂಸ್ತಾನಿ ಎಂಬ ಶೀರ್ಷಿಕೆ ನೀಡಬೇಕಿತ್ತು. ಭಾಷೆಗಳ ಬಳಕೆ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ. ಹಿಂದೂಸ್ತಾನಿಯೊಳಗೆ ಉರ್ದುವನ್ನೂ ಸೇರಿಸಿದ್ದರೆ ಇದಕ್ಕೆ ಇನ್ನಷ್ಟೂ ಮೆರಗು ಬರುತ್ತಿತ್ತು’ ಎಂದು ಹೇಳಿದರು.</p>.<p>ಲೇಖಕ ಚಂದನ್ ಪಾಂಡೆ ಮಾತನಾಡಿ, ‘ಹಿಂದಿ ಮತ್ತು ಉರ್ದು ಭಾಷೆಗಳ ಸಂಘರ್ಷದಲ್ಲಿ ಭೋಜಪುರಿ, ಅವಧ್ ಸೇರಿದಂತೆ ಸ್ಥಳೀಯ ಭಾಷೆಗಳಿಗೆ ಹೆಚ್ಚು ಪ್ರಾಮುಖ್ಯ ದೊರೆಯುತ್ತಿಲ್ಲ. ಭಾಷೆ ಎಂದರೆ ಅದು ಪದಗಳ ಗುಚ್ಚವಾಗಿದೆ. ಅದು ಜನರ ನಂಬಿಕೆಯನ್ನು ಪ್ರತಿನಿಧಿಸುತ್ತದೆ’ ಎಂದು ಹೇಳಿದರು.</p>.<p>ಮನಿಷಾ ಪಾಂಡೆ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>