ಶೂನ್ಯ ವೇಳೆಯಲ್ಲಿ ಗುರುವಾರ ಕನ್ನಡದಲ್ಲೇ ವಿಷಯ ಪ್ರಸ್ತಾಪಿಸಿದ ಅವರು, ‘10ನೇ ತರಗತಿವರೆಗೆ ಸ್ಥಳೀಯ ಭಾಷೆಯಲ್ಲಿ ಕಲಿತವರಿಗೆ 2016ರವರೆಗೆ ಬ್ಯಾಂಕಿಂಗ್ ನೇಮಕಾತಿಗಳಲ್ಲಿ ಅವಕಾಶ ಇತ್ತು. ಆದರೆ, ಈಗ ಐಬಿಪಿಎಸ್ ನಡೆಸುವ ನೇಮಕಾತಿಗಳಲ್ಲಿ ಈ ಅವಕಾಶ ಇಲ್ಲ. ಈ ವಿಷಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು. ಚಂದ್ರಶೇಖರ್ ಅವರು ಮಾತು ಮುಗಿಸುತ್ತಿದ್ದಂತೆ ಸಭಾಪತಿ ವೆಂಕಯ್ಯ ನಾಯ್ದ ಕನ್ನಡದಲ್ಲೇ ಧನ್ಯವಾದ ಹೇಳಿದರು.