ಬೆಂಗಳೂರು: ಡಾ.ಬರಗೂರು ಪ್ರತಿಷ್ಠಾನದ ವತಿಯಿಂದ ರಾಜಲಕ್ಷ್ಮೀ ಬರಗೂರು ಸ್ಮರಣಾರ್ಥವಾಗಿ ನೀಡಲಾಗುವ ‘ಶ್ರೀಮತಿ ರಾಜಲಕ್ಷ್ಮೀ ಬರಗೂರು ಪುಸ್ತಕ ಪ್ರಶಸ್ತಿ’ಗೆ ಕೃತಿಗಳನ್ನು ಆಹ್ವಾನಿಸಲಾಗಿದೆ.
‘ಪ್ರೊ.ಬರಗೂರು ರಾಮಚಂದ್ರಪ್ಪ ಹಾಗೂ ದಿ.ರಾಜಲಕ್ಷ್ಮೀ ಬರಗೂರು ಅವರ ಆಸಕ್ತ ಕ್ಷೇತ್ರಗಳಾದ ವಿಚಾರ ಸಾಹಿತ್ಯ ಹಾಗೂ ಕಾದಂಬರಿ ಪ್ರಕಾರಗಳಲ್ಲಿ ಆಯ್ಕೆಯಾದ ಕೃತಿಗಳಿಗೆ ತಲಾ ₹10 ಸಾವಿರ ನಗದು, ಫಲಕ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಗುತ್ತದೆ’ ಎಂದು ಪ್ರಕಟಣೆ ತಿಳಿಸಿದೆ.
ಆಸಕ್ತರು 2021ರ ಡಿಸೆಂಬರ್ 31ರೊಳಗೆ ಪ್ರಕಟವಾದ ವಿಚಾರ ಸಾಹಿತ್ಯ ಹಾಗೂ ಕಾದಂಬರಿಯ ತಲಾ ಮೂರು ಪ್ರತಿಗಳನ್ನು 2022ರ ಫೆಬ್ರುವರಿ 10 ರೊಳಗೆ ಸಲ್ಲಿಸಬೇಕು.
ಕೃತಿಗಳನ್ನು ಕಳುಹಿಸಬೇಕಾದ ವಿಳಾಸ: ಡಾ.ಎ.ವಿ.ಲಕ್ಷ್ಮೀನಾರಾಯಣ, ಬೆಳಕು, 2453, 3ನೇ ಬ್ಲಾಕ್, ವಿಶ್ವೇಶ್ವರಯ್ಯ ಬಡಾವಣೆ, ಸೊಣ್ಣೇನಹಳ್ಳಿ ಬ್ರಿಡ್ಜ್ ಹತ್ತಿರ, ಬೆಂಗಳೂರು–560110.