<p><strong>ಬೆಂಗಳೂರು:</strong> ‘ಶೈಕ್ಷಣಿಕ ಸ್ವಾಯತ್ತತೆ, ವೈವಿಧ್ಯತೆ ಮತ್ತು ವಿಕೇಂದ್ರೀಕರಣದ ತಾತ್ವಿಕತೆಯ ಆಧಾರದಲ್ಲೇ ವಿವಿಧ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಏಕರೂಪ ಪಠ್ಯಕ್ರಮ ರೂಪಿಸಿದರೆ ಈ ಪ್ರಮುಖ ಅಂಶಗಳನ್ನೇ ಮೂಲೆಗೆ ತಳ್ಳಿದಂತಾಗುತ್ತದೆ’ ಎಂದು ಸಾಹಿತಿಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.</p>.<p>ಈ ಬಗ್ಗೆ ಉನ್ನತ ಶಿಕ್ಷಣ ಸಚಿವರಿಗೆ ಐದು ದಿನದಲ್ಲಿ ಎರಡನೇ ಪತ್ರ ಬರೆದಿರುವ ಅವರು, ‘ಏಕರೂಪದ ಪಠ್ಯಕ್ರಮದಿಂದ ಭಾಷೆ, ಸಾಹಿತ್ಯ ಸಹಿತ ಎಲ್ಲ ಮಾನವಿಕ ಪಠ್ಯಗಳು ಪ್ರಾದೇಶಿಕ ವಿಷಯ ಪ್ರಾತಿನಿಧ್ಯದ ಅವಕಾಶದಿಂದ ವಂಚಿತವಾಗುವ ಅಪಾಯವಿದೆ’ ಎಂದಿದ್ದಾರೆ.</p>.<p>‘ತುಮಕೂರು ವಿಶ್ವವಿದ್ಯಾಲಯವು ಸಾಹಿತ್ಯ ಪಠ್ಯಕ್ರಮ ರೂಪಿಸಲು ಸೂಚಿಸಿರುವ ಪತ್ರದಲ್ಲಿ ಕೌಶಲಾಭಿವೃದ್ಧಿ, ವೃತ್ತಿಪರತೆ, ಉದ್ಯೋಗಾಧಾರಿತ ವಿಷಯಗಳನ್ನು ಸೇರಿಸಬೇಕೆಂದು ಹೇಳಲಾಗಿದೆ. ಸಾಹಿತ್ಯ ಪಠ್ಯಕ್ರಮಕ್ಕೆ ಈ ವಿಷಯಗಳನ್ನು ಹೇಗೆ ಸೇರಿಸಲು ಸಾಧ್ಯ?’ ಎಂದು ಅವರು ಪ್ರಶ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಶೈಕ್ಷಣಿಕ ಸ್ವಾಯತ್ತತೆ, ವೈವಿಧ್ಯತೆ ಮತ್ತು ವಿಕೇಂದ್ರೀಕರಣದ ತಾತ್ವಿಕತೆಯ ಆಧಾರದಲ್ಲೇ ವಿವಿಧ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಏಕರೂಪ ಪಠ್ಯಕ್ರಮ ರೂಪಿಸಿದರೆ ಈ ಪ್ರಮುಖ ಅಂಶಗಳನ್ನೇ ಮೂಲೆಗೆ ತಳ್ಳಿದಂತಾಗುತ್ತದೆ’ ಎಂದು ಸಾಹಿತಿಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.</p>.<p>ಈ ಬಗ್ಗೆ ಉನ್ನತ ಶಿಕ್ಷಣ ಸಚಿವರಿಗೆ ಐದು ದಿನದಲ್ಲಿ ಎರಡನೇ ಪತ್ರ ಬರೆದಿರುವ ಅವರು, ‘ಏಕರೂಪದ ಪಠ್ಯಕ್ರಮದಿಂದ ಭಾಷೆ, ಸಾಹಿತ್ಯ ಸಹಿತ ಎಲ್ಲ ಮಾನವಿಕ ಪಠ್ಯಗಳು ಪ್ರಾದೇಶಿಕ ವಿಷಯ ಪ್ರಾತಿನಿಧ್ಯದ ಅವಕಾಶದಿಂದ ವಂಚಿತವಾಗುವ ಅಪಾಯವಿದೆ’ ಎಂದಿದ್ದಾರೆ.</p>.<p>‘ತುಮಕೂರು ವಿಶ್ವವಿದ್ಯಾಲಯವು ಸಾಹಿತ್ಯ ಪಠ್ಯಕ್ರಮ ರೂಪಿಸಲು ಸೂಚಿಸಿರುವ ಪತ್ರದಲ್ಲಿ ಕೌಶಲಾಭಿವೃದ್ಧಿ, ವೃತ್ತಿಪರತೆ, ಉದ್ಯೋಗಾಧಾರಿತ ವಿಷಯಗಳನ್ನು ಸೇರಿಸಬೇಕೆಂದು ಹೇಳಲಾಗಿದೆ. ಸಾಹಿತ್ಯ ಪಠ್ಯಕ್ರಮಕ್ಕೆ ಈ ವಿಷಯಗಳನ್ನು ಹೇಗೆ ಸೇರಿಸಲು ಸಾಧ್ಯ?’ ಎಂದು ಅವರು ಪ್ರಶ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>