<p><strong>ಬೆಂಗಳೂರು:</strong> ಪುನರುಜ್ಜೀವನಗೊಂಡು ಐದು ವರ್ಷಗಳ ಬಳಿಕ ಕೆ.ಆರ್.ಪುರ ಸಮೀಪದ ಬಸವನಪುರ ಕೆರೆ ಭರ್ತಿಯಾಗಿ ಕೋಡಿ ಹರಿದಿದೆ. ಈ ಕೆರೆ ತುಂಬುವುದಕ್ಕೆ ಕಾತರದಿಂದ ಕಾಯುತ್ತಿದ್ದ ಸ್ಥಳೀಯರು ಖುಷಿಯಲ್ಲಿ ಮಿಂದೆದ್ದಿದ್ದಾರೆ.</p>.<p>‘18 ಎಕರೆ ವಿಸ್ತೀರ್ಣದ ವಿಶಾಲವಾದ ಕೆರೆ ಇದು. ಎರಡು ದಶಕಗಳಲ್ಲಿ ಈ ಕೆರೆ ಇಷ್ಟೊಂದು ಸ್ವಚ್ಛ ನೀರಿನಿಂದ ತುಂಬಿದ್ದನ್ನು ಕಂಡಿಲ್ಲ. ಕೊಳಚೆ ನೀರಿನಿಂದ ಕಲುಷಿತಗೊಂಡಿದ್ದ ಈ ಜಲಕಾಯವನ್ನು ಐದು ವರ್ಷಗಳ ಹಿಂದೆ ಬಿಬಿಎಂಪಿಯು ₹ 3.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿತ್ತು. ಕೆರೆಗೆ ಒಳಚರಂಡಿಯ ತ್ಯಾಜ್ಯ ನೀರು ಸೇರದಂತೆ ವ್ಯವಸ್ಥೆ ಕಲ್ಪಿಸಿತ್ತು. ಆ ಬಳಿಕ ಮಳೆ ನೀರು ಮಾತ್ರ ಕೆರೆ ಒಡಲು ಸೇರುತ್ತಿದೆ. ಸ್ವತಂತ್ರನಗರ, ಕೊಡಿಗೆಹಳ್ಳಿ ರಸ್ತೆಗಳ ಪ್ರದೇಶದ ಮಳೆನೀರು ಈ ಜಲಕಾಯಕ್ಕೆ ಹರಿದುಬರುತ್ತಿದೆ’ ಎಂದು ಸ್ಥಳೀಯರಾದ ಬಾಲಾಜಿ ರಘೋತ್ತಮ್ ತಿಳಿಸಿದರು.</p>.<p>‘ಜಲಕಾಯಗಳ ಸರಣಿಯ ಮೊದಲ ಕೆರೆ ಇದು. ಹಾಗಾಗಿ ಮಳೆ ನೀರು ಮಾತ್ರ ಇದರ ಒಡಲಿಗೆ ಹರಿದು ಬರುತ್ತದೆ. ಈ ಜಲಕಾಯ ಭರ್ತಿಯಾಗಿ ಕೋಡಿ ಹರಿದ ನೀರು ಬೇರೆ ಕೆರೆಗಳಿಗೆ ಹರಿಯುತ್ತದೆ. ಅಭಿವೃದ್ಧಿಗೊಂಡ ಬಳಿಕ ಒಮ್ಮೆಯೂ ಭರ್ತಿ ಆಗಿರಲಿಲ್ಲ. ಕಳೆದ ವರ್ಷ ಭಾರಿ ಮಳೆ ಸುರಿದರೂ ಕೋಡಿ ಹರಿದಿರಲಿಲ್ಲ. ಏಕೆ ಹೀಗಾಗುತ್ತಿದೆ ಎಂಬ ಸಂದೇಹ ಕಾಡಿತ್ತು. ನಾವು ಕೆರೆಗಿಳಿದು ಪರಿಶೀಲಿಸಿದಾಗ ಈ ಕೆರೆ ಅಭಿವೃದ್ಧಿ ಕಾಮಗಾರಿಗೆ ನೀರು ಬರಿದುಮಾಡಲು ಅಳವಡಿಸಿದ್ದ ಕೊಳವೆಯೊಂದನ್ನು ತೆರವುಗೊಳಿಸದೇ ಬಿಟ್ಟಿದ್ದು ಪತ್ತೆಯಾಗಿತ್ತು. ಬಿಬಿಎಂಪಿ ಎಂಜಿನಿಯರ್ಗಳ ಗಮನಕ್ಕೆ ತಂದು ಅದನ್ನು ತೆಗೆಯಿಸಿದ್ದೆವು. ಹಾಗಾಗಿ ನೀರು ಪೋಲಾಗುವುದು ನಿಂತಿದೆ. ಈ ಬಾರಿಯ ಮೊದಲ ಮಳೆಯಲ್ಲೇ ಜಲಕಾಯ ಭರ್ತಿಯಾಗುವ ದೃಶ್ಯ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ’ ಎಂದು ಅವರು ಸಂತಸ ಹಂಚಿಕೊಂಡರು.</p>.<p>‘ಈ ಜಲಕಾಯ ಹಿಂದೆ ದುರ್ವಾಸನೆಯಿಂದ ಕೂಡಿತ್ತು. ಹಕ್ಕಿಗಳೂ ಕಣ್ಮರೆಯಾಗಿದ್ದವು. ಆದರೆ, ಪುನರುಜ್ಜೀವನಗೊಳಿಸಿದ ಬಳಿಕ ಕೆರೆಯಲ್ಲಿ ಹಕ್ಕಿಗಳ ಕಲರವ ಮತ್ತೆ ಕೇಳುತ್ತಿದೆ. ಕೊಕ್ಕರೆ, ನೀರುಗೋಳಿಗಳ ಹಿಂಡುಗಳು ಈ ಜಲಕಾಯದಲ್ಲಿ ವಿಹರಿಸುವುದನ್ನು ನೋಡಿದಾಗ ಮನ ಮುದಗೊಳ್ಳುತ್ತದೆ’ ಎನ್ನುತ್ತಾರೆ ಸ್ಥಳೀಯರಾದ ವಿಶ್ವನಾಥ ತೋರಗಲ್.</p>.<p>‘ನಾವು ಈ ಕೆರೆ ದಂಡೆಯ ಆಸುಪಾಸಿನಲ್ಲಿ 2ಸಾವಿರಕ್ಕೂ ಅಧಿಕ ಗಿಡ–ಮರಗಳನ್ನು ಬೆಳೆಸಿದ್ದೇವೆ. ನೂರಾರು ಹಕ್ಕಿಗಳು ಇಲ್ಲಿಗೆ ಬರುವುದಕ್ಕೆ ಇದು ಕೂಡಾ ಕಾರಣ. ಈ ಕೆರೆಯ ಸುತ್ತಲೂ ಬೇಲಿ ಹಾಕಿದ್ದಾರೆ. ಆದರೆ, ಪಶ್ಚಿಮ ದಿಕ್ಕಿನಲ್ಲಿ ಸ್ವಲ್ಪ ಭಾಗದಲ್ಲಿ ಮಾತ್ರ ಬೇಲಿ ಹಾಕುವ ಕೆಲಸ ಬಾಕಿ ಇದೆ. ಅದನ್ನು ಪೂರ್ಣಗೊಳಿಸಿದರೆ ಒಳ್ಳೆಯದು’ ಎಂದು ಬಾಲಾಜಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪುನರುಜ್ಜೀವನಗೊಂಡು ಐದು ವರ್ಷಗಳ ಬಳಿಕ ಕೆ.ಆರ್.ಪುರ ಸಮೀಪದ ಬಸವನಪುರ ಕೆರೆ ಭರ್ತಿಯಾಗಿ ಕೋಡಿ ಹರಿದಿದೆ. ಈ ಕೆರೆ ತುಂಬುವುದಕ್ಕೆ ಕಾತರದಿಂದ ಕಾಯುತ್ತಿದ್ದ ಸ್ಥಳೀಯರು ಖುಷಿಯಲ್ಲಿ ಮಿಂದೆದ್ದಿದ್ದಾರೆ.</p>.<p>‘18 ಎಕರೆ ವಿಸ್ತೀರ್ಣದ ವಿಶಾಲವಾದ ಕೆರೆ ಇದು. ಎರಡು ದಶಕಗಳಲ್ಲಿ ಈ ಕೆರೆ ಇಷ್ಟೊಂದು ಸ್ವಚ್ಛ ನೀರಿನಿಂದ ತುಂಬಿದ್ದನ್ನು ಕಂಡಿಲ್ಲ. ಕೊಳಚೆ ನೀರಿನಿಂದ ಕಲುಷಿತಗೊಂಡಿದ್ದ ಈ ಜಲಕಾಯವನ್ನು ಐದು ವರ್ಷಗಳ ಹಿಂದೆ ಬಿಬಿಎಂಪಿಯು ₹ 3.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿತ್ತು. ಕೆರೆಗೆ ಒಳಚರಂಡಿಯ ತ್ಯಾಜ್ಯ ನೀರು ಸೇರದಂತೆ ವ್ಯವಸ್ಥೆ ಕಲ್ಪಿಸಿತ್ತು. ಆ ಬಳಿಕ ಮಳೆ ನೀರು ಮಾತ್ರ ಕೆರೆ ಒಡಲು ಸೇರುತ್ತಿದೆ. ಸ್ವತಂತ್ರನಗರ, ಕೊಡಿಗೆಹಳ್ಳಿ ರಸ್ತೆಗಳ ಪ್ರದೇಶದ ಮಳೆನೀರು ಈ ಜಲಕಾಯಕ್ಕೆ ಹರಿದುಬರುತ್ತಿದೆ’ ಎಂದು ಸ್ಥಳೀಯರಾದ ಬಾಲಾಜಿ ರಘೋತ್ತಮ್ ತಿಳಿಸಿದರು.</p>.<p>‘ಜಲಕಾಯಗಳ ಸರಣಿಯ ಮೊದಲ ಕೆರೆ ಇದು. ಹಾಗಾಗಿ ಮಳೆ ನೀರು ಮಾತ್ರ ಇದರ ಒಡಲಿಗೆ ಹರಿದು ಬರುತ್ತದೆ. ಈ ಜಲಕಾಯ ಭರ್ತಿಯಾಗಿ ಕೋಡಿ ಹರಿದ ನೀರು ಬೇರೆ ಕೆರೆಗಳಿಗೆ ಹರಿಯುತ್ತದೆ. ಅಭಿವೃದ್ಧಿಗೊಂಡ ಬಳಿಕ ಒಮ್ಮೆಯೂ ಭರ್ತಿ ಆಗಿರಲಿಲ್ಲ. ಕಳೆದ ವರ್ಷ ಭಾರಿ ಮಳೆ ಸುರಿದರೂ ಕೋಡಿ ಹರಿದಿರಲಿಲ್ಲ. ಏಕೆ ಹೀಗಾಗುತ್ತಿದೆ ಎಂಬ ಸಂದೇಹ ಕಾಡಿತ್ತು. ನಾವು ಕೆರೆಗಿಳಿದು ಪರಿಶೀಲಿಸಿದಾಗ ಈ ಕೆರೆ ಅಭಿವೃದ್ಧಿ ಕಾಮಗಾರಿಗೆ ನೀರು ಬರಿದುಮಾಡಲು ಅಳವಡಿಸಿದ್ದ ಕೊಳವೆಯೊಂದನ್ನು ತೆರವುಗೊಳಿಸದೇ ಬಿಟ್ಟಿದ್ದು ಪತ್ತೆಯಾಗಿತ್ತು. ಬಿಬಿಎಂಪಿ ಎಂಜಿನಿಯರ್ಗಳ ಗಮನಕ್ಕೆ ತಂದು ಅದನ್ನು ತೆಗೆಯಿಸಿದ್ದೆವು. ಹಾಗಾಗಿ ನೀರು ಪೋಲಾಗುವುದು ನಿಂತಿದೆ. ಈ ಬಾರಿಯ ಮೊದಲ ಮಳೆಯಲ್ಲೇ ಜಲಕಾಯ ಭರ್ತಿಯಾಗುವ ದೃಶ್ಯ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ’ ಎಂದು ಅವರು ಸಂತಸ ಹಂಚಿಕೊಂಡರು.</p>.<p>‘ಈ ಜಲಕಾಯ ಹಿಂದೆ ದುರ್ವಾಸನೆಯಿಂದ ಕೂಡಿತ್ತು. ಹಕ್ಕಿಗಳೂ ಕಣ್ಮರೆಯಾಗಿದ್ದವು. ಆದರೆ, ಪುನರುಜ್ಜೀವನಗೊಳಿಸಿದ ಬಳಿಕ ಕೆರೆಯಲ್ಲಿ ಹಕ್ಕಿಗಳ ಕಲರವ ಮತ್ತೆ ಕೇಳುತ್ತಿದೆ. ಕೊಕ್ಕರೆ, ನೀರುಗೋಳಿಗಳ ಹಿಂಡುಗಳು ಈ ಜಲಕಾಯದಲ್ಲಿ ವಿಹರಿಸುವುದನ್ನು ನೋಡಿದಾಗ ಮನ ಮುದಗೊಳ್ಳುತ್ತದೆ’ ಎನ್ನುತ್ತಾರೆ ಸ್ಥಳೀಯರಾದ ವಿಶ್ವನಾಥ ತೋರಗಲ್.</p>.<p>‘ನಾವು ಈ ಕೆರೆ ದಂಡೆಯ ಆಸುಪಾಸಿನಲ್ಲಿ 2ಸಾವಿರಕ್ಕೂ ಅಧಿಕ ಗಿಡ–ಮರಗಳನ್ನು ಬೆಳೆಸಿದ್ದೇವೆ. ನೂರಾರು ಹಕ್ಕಿಗಳು ಇಲ್ಲಿಗೆ ಬರುವುದಕ್ಕೆ ಇದು ಕೂಡಾ ಕಾರಣ. ಈ ಕೆರೆಯ ಸುತ್ತಲೂ ಬೇಲಿ ಹಾಕಿದ್ದಾರೆ. ಆದರೆ, ಪಶ್ಚಿಮ ದಿಕ್ಕಿನಲ್ಲಿ ಸ್ವಲ್ಪ ಭಾಗದಲ್ಲಿ ಮಾತ್ರ ಬೇಲಿ ಹಾಕುವ ಕೆಲಸ ಬಾಕಿ ಇದೆ. ಅದನ್ನು ಪೂರ್ಣಗೊಳಿಸಿದರೆ ಒಳ್ಳೆಯದು’ ಎಂದು ಬಾಲಾಜಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>