‘ಈ ಜಲಕಾಯ ಹಿಂದೆ ದುರ್ವಾಸನೆಯಿಂದ ಕೂಡಿತ್ತು. ಹಕ್ಕಿಗಳೂ ಕಣ್ಮರೆಯಾಗಿದ್ದವು. ಆದರೆ, ಪುನರುಜ್ಜೀವನಗೊಳಿಸಿದ ಬಳಿಕ ಕೆರೆಯಲ್ಲಿ ಹಕ್ಕಿಗಳ ಕಲರವ ಮತ್ತೆ ಕೇಳುತ್ತಿದೆ. ಕೊಕ್ಕರೆ, ನೀರುಗೋಳಿಗಳ ಹಿಂಡುಗಳು ಈ ಜಲಕಾಯದಲ್ಲಿ ವಿಹರಿಸುವುದನ್ನು ನೋಡಿದಾಗ ಮನ ಮುದಗೊಳ್ಳುತ್ತದೆ’ ಎನ್ನುತ್ತಾರೆ ಸ್ಥಳೀಯರಾದ ವಿಶ್ವನಾಥ ತೋರಗಲ್.