<p><strong>ಬೆಂಗಳೂರು:</strong> ‘ನಗರದಲ್ಲಿ ಸೆಪ್ಟೆಂಬರ್ 1ರ ನಂತರ ಒಂದೇ ಒಂದು ಪ್ಲಾಸ್ಟಿಕ್ ಕೈಚೀಲ ಕಂಡರೂ ಬಿಬಿಎಂಪಿ ವಿರುದ್ಧ ರಾಷ್ಟ್ರೀಯ ಹಸಿರುನ್ಯಾಯಮಂಡಳಿಗೆ (ಎನ್ಜಿಟಿ) ಕಠಿಣ ವರದಿ ನೀಡುತ್ತೇನೆ’ ಎಂದುಎನ್ಜಿಟಿ ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಖಡಕ್ ಎಚ್ಚರಿಕೆ ನೀಡಿದರು.</p>.<p>ಎನ್ಜಿಟಿ ಮತ್ತು ಬಿಬಿಎಂಪಿ ದಕ್ಷಿಣ ವಲಯದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಘನತಾಜ್ಯ ನಿರ್ವಹಣೆಯ ಪಾಲುದಾರರ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಹಿಂದುಳಿದ ಪ್ರದೇಶಗಳು ಎಂದು ಕರೆಯುವ ಬೀದರ್ ಮತ್ತು ಕಲಬುರ್ಗಿಯಲ್ಲಿ ಪ್ಲಾಸ್ಟಿಕ್ ಮುಕ್ತವಾಗಲು ಹೊರಟಿರುವಾಗ ಶಿಕ್ಷಿತರೇ ಹೆಚ್ಚಿರುವ ಬೆಂಗಳೂರಿನಲ್ಲಿ ಏಕೆ ಸಾಧ್ಯವಿಲ್ಲ’ ಎಂದು ಪ್ರಶ್ನಿಸಿದರು.</p>.<p>‘ಬೆಂಗಳೂರು ಪ್ಲಾಸ್ಟಿಕ್ ಮುಕ್ತ ಆಗಲೇಬೇಕು. ಇಲ್ಲದಿದ್ದರೆ ನಾನಂತೂ ಸುಮ್ಮನಿರುವುದಿಲ್ಲ.ಕಳೆದ ಕೆಲ ದಿನಗಳಿಂದ ಪರಿಸ್ಥಿತಿ ಬದಲಾದಂತೆ ಕಾಣುತ್ತಿದೆ. ನಿಷೇಧಿತ ಪ್ಲಾಸ್ಟಿಕ್ ಕವರ್ಗಳ ಬದಲು ಪೇವರ್ ಕವರ್ಗಳು ಕಾಣಿಸುತ್ತಿವೆ. ಮತ್ತಷ್ಟು ಪರಿಣಾಮಕಾರಿ ಅನುಷ್ಠಾನ ಆಗಲೇಬೇಕು’ ಎಂದು ಅವರು ತಿಳಿಸಿದರು.</p>.<p>‘ಕಸ ವಿಲೇವಾರಿ ವಿಷಯದಲ್ಲೂಕಠಿಣ ಕ್ರಮಗಳನ್ನು ಬಿಬಿಎಂಪಿ ಕೈಗೊಳ್ಳಬೇಕು.ಕಸ ವಿಂಗಡಣೆ ಮಾಡದವರಿಗೆ ಬಿಬಿಎಂಪಿ ದಂಡ ಹಾಕಬೇಕು. ಅದಕ್ಕಾಗಿ ಬೈಲಾ ರೂಪಿಸಿಕೊಳ್ಳಬೇಕು.ಜನರು ಕೂಡ ಸಹಕರಿಸಬೇಕು. ಹಸಿ ಕಸವನ್ನು ಆದಷ್ಟು ಮನೆಯಲ್ಲೇ ಸಾವಯವ ಗೊಬ್ಬರ ಮಾಡಬೇಕು. ಆಗದಿದ್ದರೆ ಕಸ ಸಂಗ್ರಹಿಸಲು ಬರುವ<br />ವರಿಗೆ ಹಸಿ, ಒಣ ಮತ್ತು ಹಾನಿಕಾರಕ ಕಸ ಎಂದು ಮೂರು ಭಾಗವಾಗಿ ವಿಂಗಡಿಸಿ ನೀಡಬೇಕು. ಆಯಾ ವಾರ್ಡ್ನಲ್ಲಿ ಉತ್ಪತ್ತಿಯಾಗುವ ಹಸಿ ಕಸ ಅಲ್ಲಿಯೇ ಸಾವಯವ ಗೊಬ್ಬರ ಆಗುವಂತೆ ನೋಡಿಕೊಳ್ಳಬೇಕು’ ಎಂದರು.</p>.<p>‘ಪ್ಲಾಸ್ಟಿಕ್ ನಿಷೇಧ ಮತ್ತು ತ್ಯಾಜ್ಯ ವಿಲೇವಾರಿಯಲ್ಲಿಬೆಂಗಳೂರು ದಕ್ಷಿಣ ವಲಯ ಮಾದರಿಯಾಗಬೇಕು. ಇದಕ್ಕೆ ಸಾರ್ವಜನಿಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಬಿಬಿಎಂಪಿ ಜತೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.</p>.<p><strong>‘ಆಗಸ್ಟ್ನಿಂದ ಐದು ಪಟ್ಟು ದಂಡ’</strong></p>.<p>‘ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಬಿಬಿಎಂಪಿ ಕಠಿಣ ಕ್ರಮ ಕೈಗೊಂಡಿದೆ. ಪ್ಲಾಸ್ಟಿಕ್ ಕೈ ಚೀಲ ಮಾರಾಟ ಮಾಡುವವರಿಗೆ ಮತ್ತು ಖರೀದಿ ಮಾಡುವರಿಗೆ ಈಗಾಗಲೇ ದಂಡ ವಿಧಿಸಲಾಗುತ್ತಿದೆ. ಆಗಸ್ಟ್ 1ರಿಂದ ದಂಡದ ಪ್ರಮಾಣ ಐದು ಪಟ್ಟು ಹೆಚ್ಚಾಗಲಿದೆ’ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.</p>.<p>‘ಪ್ಲಾಸ್ಟಿಕ್ ಬಳಕೆಯನ್ನು 2017ರಲ್ಲೇ ನಿಷೇಧಿಸಲಾಗಿದೆ. ಆದರೂ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಈಗ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಧಿಕಾರಿಗಳು ದಾಳಿ ನಡೆಸಿದಾಗ ಪ್ಲಾಸ್ಟಿಕ್ ಕೈ ಚೀಲಗಳು ಸಿಕ್ಕಿದರೆ ಉದ್ದಿಮೆ ಪರವಾನಗಿ ರದ್ದುಗೊಳಿಸಲಿದ್ದಾರೆ’ ಎಂದು ಹೇಳಿದರು.</p>.<p>‘ಬೀದಿ ಬದಿ ವ್ಯಾಪಾರಿಗಳ ಬಳಿ ಪ್ಲಾಸ್ಟಿಕ್ ಸಿಕ್ಕರೆ ಅವರ ಅಂಗಡಿಯಲ್ಲಿರುವ ಎಲ್ಲಾ ಸರಕುಗಳನ್ನು ಜಪ್ತಿ ಮಾಡಲಾಗುತ್ತದೆ. ಪೇಪರ್ ಅಥವಾ ಬಟ್ಟೆ ಕೈ ಚೀಲಗಳನ್ನು ಮನೆಯಿಂದ ತಾರದೇ ಇದ್ದವರಿಗೆ ವ್ಯಾಪಾರಿಗಳು ವಸ್ತುಗಳನ್ನು ಮಾರಾಟ ಮಾಡಬಾರದು’ ಎಂದು ತಿಳಿಸಿದರು.</p>.<p>‘ಕಸ ವಿಂಗಡಣೆ ಮಾಡದವರಿಗೂ ಸೆ. 1ರಿಂದ ದಂಡ ಹಾಕುವುದು ನಿಶ್ಚಿತ. ಎಲ್ಲಾ ವಾರ್ಡ್ಗಳಲ್ಲಿ ಮಾರ್ಷಲ್ಗಳ ನೇಮಕವಾಗುವ ಕಾರಣ ಎಲ್ಲೆಂದರಲ್ಲಿ ಕಸ ಬಿಸಾಡಲು ಅವಕಾಶ ಇಲ್ಲ. ಹೀಗಾಗಿ, ಬಿಬಿಎಂಪಿ ಜತೆ ನಾಗರಿಕರು ಸಹಕರಿಸಬೇಕು. ನಿಯಮ ಪಾಲಿಸಬೇಕು’ ಎಂದು ಮನವಿ ಮಾಡಿದರು.</p>.<p><strong>ಕಸ ವಿಲೇವಾರಿ: ದಕ್ಷಿಣದಲ್ಲಿ ಹೇಗೆ?</strong></p>.<p><em>ಜನಸಂಖ್ಯೆ; 22.10ಲಕ್ಷ</em></p>.<p><em>ಮನೆಗಳ ಸಂಖ್ಯೆ; 4.91 ಲಕ್ಷ</em></p>.<p><em>ವಾರ್ಡ್ಗಳ ಸಂಖ್ಯೆ; 44</em></p>.<p><em>ವಿಧಾನಸಭಾ ಕ್ಷೇತ್ರಗಳು; 6</em></p>.<p><em>ಉದ್ಯಾನಗಳು; 266</em></p>.<p><em>ಪ್ರತಿನಿತ್ಯ ಉತ್ಪತ್ತಿಯಾಗುವ ಹಸಿಕಸ; 1,087 ಟನ್</em></p>.<p><em>ಪ್ರತಿನಿತ್ಯ ಉತ್ಪತ್ತಿಯಾಗುವ ಒಣಕಸ; 33 ಟನ್</em></p>.<p><em>ಕಸ ಸಂಗ್ರಹಕ್ಕೆ ಬಳಸುತ್ತಿರುವ ಕಾಂಪ್ಯಾಕ್ಟರ್; 134</em></p>.<p><em>ಕಸ ಸಂಗ್ರಹಕ್ಕೆ ಬಳಸುತ್ತಿರುವ ಆಟೋ ಟಿಪ್ಪರ್; 855</em></p>.<p><em>ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು; 4,033</em></p>.<p><em>ಪ್ರತಿನಿತ್ಯ ಸಂಸ್ಕರಣೆಯಾಗುತ್ತಿರುವ ಒಣ ಎಲೆ; 1.50 ಟನ್</em></p>.<p><em>ಬಯೋಮೀಥನೈಸೇಷನ್ ಘಟಕಗಳು; 4 (ತಲಾ 5 ಟನ್ ಸಾಮರ್ಥ್ಯ)</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ನಗರದಲ್ಲಿ ಸೆಪ್ಟೆಂಬರ್ 1ರ ನಂತರ ಒಂದೇ ಒಂದು ಪ್ಲಾಸ್ಟಿಕ್ ಕೈಚೀಲ ಕಂಡರೂ ಬಿಬಿಎಂಪಿ ವಿರುದ್ಧ ರಾಷ್ಟ್ರೀಯ ಹಸಿರುನ್ಯಾಯಮಂಡಳಿಗೆ (ಎನ್ಜಿಟಿ) ಕಠಿಣ ವರದಿ ನೀಡುತ್ತೇನೆ’ ಎಂದುಎನ್ಜಿಟಿ ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಖಡಕ್ ಎಚ್ಚರಿಕೆ ನೀಡಿದರು.</p>.<p>ಎನ್ಜಿಟಿ ಮತ್ತು ಬಿಬಿಎಂಪಿ ದಕ್ಷಿಣ ವಲಯದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಘನತಾಜ್ಯ ನಿರ್ವಹಣೆಯ ಪಾಲುದಾರರ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಹಿಂದುಳಿದ ಪ್ರದೇಶಗಳು ಎಂದು ಕರೆಯುವ ಬೀದರ್ ಮತ್ತು ಕಲಬುರ್ಗಿಯಲ್ಲಿ ಪ್ಲಾಸ್ಟಿಕ್ ಮುಕ್ತವಾಗಲು ಹೊರಟಿರುವಾಗ ಶಿಕ್ಷಿತರೇ ಹೆಚ್ಚಿರುವ ಬೆಂಗಳೂರಿನಲ್ಲಿ ಏಕೆ ಸಾಧ್ಯವಿಲ್ಲ’ ಎಂದು ಪ್ರಶ್ನಿಸಿದರು.</p>.<p>‘ಬೆಂಗಳೂರು ಪ್ಲಾಸ್ಟಿಕ್ ಮುಕ್ತ ಆಗಲೇಬೇಕು. ಇಲ್ಲದಿದ್ದರೆ ನಾನಂತೂ ಸುಮ್ಮನಿರುವುದಿಲ್ಲ.ಕಳೆದ ಕೆಲ ದಿನಗಳಿಂದ ಪರಿಸ್ಥಿತಿ ಬದಲಾದಂತೆ ಕಾಣುತ್ತಿದೆ. ನಿಷೇಧಿತ ಪ್ಲಾಸ್ಟಿಕ್ ಕವರ್ಗಳ ಬದಲು ಪೇವರ್ ಕವರ್ಗಳು ಕಾಣಿಸುತ್ತಿವೆ. ಮತ್ತಷ್ಟು ಪರಿಣಾಮಕಾರಿ ಅನುಷ್ಠಾನ ಆಗಲೇಬೇಕು’ ಎಂದು ಅವರು ತಿಳಿಸಿದರು.</p>.<p>‘ಕಸ ವಿಲೇವಾರಿ ವಿಷಯದಲ್ಲೂಕಠಿಣ ಕ್ರಮಗಳನ್ನು ಬಿಬಿಎಂಪಿ ಕೈಗೊಳ್ಳಬೇಕು.ಕಸ ವಿಂಗಡಣೆ ಮಾಡದವರಿಗೆ ಬಿಬಿಎಂಪಿ ದಂಡ ಹಾಕಬೇಕು. ಅದಕ್ಕಾಗಿ ಬೈಲಾ ರೂಪಿಸಿಕೊಳ್ಳಬೇಕು.ಜನರು ಕೂಡ ಸಹಕರಿಸಬೇಕು. ಹಸಿ ಕಸವನ್ನು ಆದಷ್ಟು ಮನೆಯಲ್ಲೇ ಸಾವಯವ ಗೊಬ್ಬರ ಮಾಡಬೇಕು. ಆಗದಿದ್ದರೆ ಕಸ ಸಂಗ್ರಹಿಸಲು ಬರುವ<br />ವರಿಗೆ ಹಸಿ, ಒಣ ಮತ್ತು ಹಾನಿಕಾರಕ ಕಸ ಎಂದು ಮೂರು ಭಾಗವಾಗಿ ವಿಂಗಡಿಸಿ ನೀಡಬೇಕು. ಆಯಾ ವಾರ್ಡ್ನಲ್ಲಿ ಉತ್ಪತ್ತಿಯಾಗುವ ಹಸಿ ಕಸ ಅಲ್ಲಿಯೇ ಸಾವಯವ ಗೊಬ್ಬರ ಆಗುವಂತೆ ನೋಡಿಕೊಳ್ಳಬೇಕು’ ಎಂದರು.</p>.<p>‘ಪ್ಲಾಸ್ಟಿಕ್ ನಿಷೇಧ ಮತ್ತು ತ್ಯಾಜ್ಯ ವಿಲೇವಾರಿಯಲ್ಲಿಬೆಂಗಳೂರು ದಕ್ಷಿಣ ವಲಯ ಮಾದರಿಯಾಗಬೇಕು. ಇದಕ್ಕೆ ಸಾರ್ವಜನಿಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಬಿಬಿಎಂಪಿ ಜತೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.</p>.<p><strong>‘ಆಗಸ್ಟ್ನಿಂದ ಐದು ಪಟ್ಟು ದಂಡ’</strong></p>.<p>‘ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಬಿಬಿಎಂಪಿ ಕಠಿಣ ಕ್ರಮ ಕೈಗೊಂಡಿದೆ. ಪ್ಲಾಸ್ಟಿಕ್ ಕೈ ಚೀಲ ಮಾರಾಟ ಮಾಡುವವರಿಗೆ ಮತ್ತು ಖರೀದಿ ಮಾಡುವರಿಗೆ ಈಗಾಗಲೇ ದಂಡ ವಿಧಿಸಲಾಗುತ್ತಿದೆ. ಆಗಸ್ಟ್ 1ರಿಂದ ದಂಡದ ಪ್ರಮಾಣ ಐದು ಪಟ್ಟು ಹೆಚ್ಚಾಗಲಿದೆ’ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.</p>.<p>‘ಪ್ಲಾಸ್ಟಿಕ್ ಬಳಕೆಯನ್ನು 2017ರಲ್ಲೇ ನಿಷೇಧಿಸಲಾಗಿದೆ. ಆದರೂ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಈಗ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಧಿಕಾರಿಗಳು ದಾಳಿ ನಡೆಸಿದಾಗ ಪ್ಲಾಸ್ಟಿಕ್ ಕೈ ಚೀಲಗಳು ಸಿಕ್ಕಿದರೆ ಉದ್ದಿಮೆ ಪರವಾನಗಿ ರದ್ದುಗೊಳಿಸಲಿದ್ದಾರೆ’ ಎಂದು ಹೇಳಿದರು.</p>.<p>‘ಬೀದಿ ಬದಿ ವ್ಯಾಪಾರಿಗಳ ಬಳಿ ಪ್ಲಾಸ್ಟಿಕ್ ಸಿಕ್ಕರೆ ಅವರ ಅಂಗಡಿಯಲ್ಲಿರುವ ಎಲ್ಲಾ ಸರಕುಗಳನ್ನು ಜಪ್ತಿ ಮಾಡಲಾಗುತ್ತದೆ. ಪೇಪರ್ ಅಥವಾ ಬಟ್ಟೆ ಕೈ ಚೀಲಗಳನ್ನು ಮನೆಯಿಂದ ತಾರದೇ ಇದ್ದವರಿಗೆ ವ್ಯಾಪಾರಿಗಳು ವಸ್ತುಗಳನ್ನು ಮಾರಾಟ ಮಾಡಬಾರದು’ ಎಂದು ತಿಳಿಸಿದರು.</p>.<p>‘ಕಸ ವಿಂಗಡಣೆ ಮಾಡದವರಿಗೂ ಸೆ. 1ರಿಂದ ದಂಡ ಹಾಕುವುದು ನಿಶ್ಚಿತ. ಎಲ್ಲಾ ವಾರ್ಡ್ಗಳಲ್ಲಿ ಮಾರ್ಷಲ್ಗಳ ನೇಮಕವಾಗುವ ಕಾರಣ ಎಲ್ಲೆಂದರಲ್ಲಿ ಕಸ ಬಿಸಾಡಲು ಅವಕಾಶ ಇಲ್ಲ. ಹೀಗಾಗಿ, ಬಿಬಿಎಂಪಿ ಜತೆ ನಾಗರಿಕರು ಸಹಕರಿಸಬೇಕು. ನಿಯಮ ಪಾಲಿಸಬೇಕು’ ಎಂದು ಮನವಿ ಮಾಡಿದರು.</p>.<p><strong>ಕಸ ವಿಲೇವಾರಿ: ದಕ್ಷಿಣದಲ್ಲಿ ಹೇಗೆ?</strong></p>.<p><em>ಜನಸಂಖ್ಯೆ; 22.10ಲಕ್ಷ</em></p>.<p><em>ಮನೆಗಳ ಸಂಖ್ಯೆ; 4.91 ಲಕ್ಷ</em></p>.<p><em>ವಾರ್ಡ್ಗಳ ಸಂಖ್ಯೆ; 44</em></p>.<p><em>ವಿಧಾನಸಭಾ ಕ್ಷೇತ್ರಗಳು; 6</em></p>.<p><em>ಉದ್ಯಾನಗಳು; 266</em></p>.<p><em>ಪ್ರತಿನಿತ್ಯ ಉತ್ಪತ್ತಿಯಾಗುವ ಹಸಿಕಸ; 1,087 ಟನ್</em></p>.<p><em>ಪ್ರತಿನಿತ್ಯ ಉತ್ಪತ್ತಿಯಾಗುವ ಒಣಕಸ; 33 ಟನ್</em></p>.<p><em>ಕಸ ಸಂಗ್ರಹಕ್ಕೆ ಬಳಸುತ್ತಿರುವ ಕಾಂಪ್ಯಾಕ್ಟರ್; 134</em></p>.<p><em>ಕಸ ಸಂಗ್ರಹಕ್ಕೆ ಬಳಸುತ್ತಿರುವ ಆಟೋ ಟಿಪ್ಪರ್; 855</em></p>.<p><em>ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು; 4,033</em></p>.<p><em>ಪ್ರತಿನಿತ್ಯ ಸಂಸ್ಕರಣೆಯಾಗುತ್ತಿರುವ ಒಣ ಎಲೆ; 1.50 ಟನ್</em></p>.<p><em>ಬಯೋಮೀಥನೈಸೇಷನ್ ಘಟಕಗಳು; 4 (ತಲಾ 5 ಟನ್ ಸಾಮರ್ಥ್ಯ)</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>