<p><strong>ಬೆಂಗಳೂರು</strong>: ಕೋವಿಡ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಕಡೆಗಣಿಸುತ್ತಿರುವ ಹೋಟೆಲ್ಗಳು, ರೆಸ್ಟೊರೆಂಟ್ಗಳು, ಮಳಿಗೆಗಳು ಹಾಗೂ ಸೂಪರ್ ಮಾರ್ಕೆಟ್ಗಳ ಮೇಲಿನ ದಾಳಿಯನ್ನು ಬಿಬಿಎಂಪಿ ಮುಂದುವರಿಸಿದೆ.</p>.<p>ಸಿಬ್ಬಂದಿ ಮಾಸ್ಕ್ ಧರಿಸದೇ ಇರುವುದು, ಗ್ರಾಹಕರು ಅಂತರ ಕಾಪಾಡುವುದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪಾಲಿಕೆ ಅಧಿಕಾರಿಗಳು ಬುಧವಾರ ಒಂದೇ ದಿನ 22 ಉದ್ದಿಮೆಗಳನ್ನು ಮುಚ್ಚಿಸಿದ್ದಾರೆ.</p>.<p>ಪಶ್ಚಿಮ ವಲಯದಲ್ಲಿ ಚಾಮರಾಜಪೇಟೆಯ ಮಂಜುನಾಥ ಟಿಫಿನ್ ಸೆಂಟರ್, ಹೋಟೆಲ್ ಶ್ರೀಹರ್ಷ ಹಾಗೂ ರಾಜಾಜಿನಗರದ ಗಣೇಶ ಜ್ಯೂಸ್ ಸೆಂಟರ್ಗಳನ್ನು ಅಧಿಕಾರಿಗಳು ಮುಚ್ಚಿಸಿದ್ದಾರೆ. ಪಶ್ಚಿಮ ವಲಯದಲ್ಲಿ ಆರು ಉದ್ದಿಮೆಗಳಿಗೆ ಒಟ್ಟು 12,750 ದಂಡ ವಿಧಿಸಲಾಗಿದೆ.</p>.<p>ಯಲಹಂಕ ವಲಯದಲ್ಲಿ ಝತಾರ್ ಮಲ್ಟಿ ಕುಸೈನ್ ರೆಸ್ಟೋರೆಂಟ್ಗೆ ಬೀಗಮುದ್ರೆ ಹಾಕಲಾಗಿದೆ. ಮಹದೇವಪುರ ವಲಯದ ಹಗದೂರು ವಾರ್ಡ್ನಲ್ಲಿ ಮಿಯಾಮಿ ಸೂಪರ್ ಮಾರ್ಕೆಟ್, ಮಾರತಹಳ್ಳಿಯ ಪ್ಯಾರಡೈಸ್ ರೆಸ್ಟೋರೆಂಟ್ ಹಾಗೂ ರಿಲಯನ್ಸ್ ಸ್ಮಾರ್ಟ್ ಪಾಯಿಂಟ್ ಮಳಿಗೆ, ಹೊರಮಾವು ವಾರ್ಡ್ನ ಲಸ್ಸಿ ಶಾಪ್ಗಳನ್ನು ಅಧಿಕಾರಿಗಳು ಮುಚ್ಚಿಸಿದರು.</p>.<p>ರಾಜರಾಜೇಶ್ವರಿ ನಗರ ವಲಯದ ನಾಗರಬಾವಿಯ ಉಡುಪಿ ಹೋಟೆಲ್, ರಾಜರಾಜೇಶ್ವರಿ ನಗರ ವಾರ್ಡ್ನ ಕಾಪಿಕಟ್ಟೆ ಹಾಗೂ ಇಂದ್ರಪ್ರಸ್ಥ ಹೋಟೆಲ್ಗಳನ್ನು ಬಂದ್ ಮಾಡಿಸಿದರು. ಪೂರ್ವವಲಯದ ಗಂಗೇನಹಳ್ಳಿ ವಾರ್ಡ್ನಲ್ಲಿ ಮೂರು ಮಳಿಗೆಗಳಿಗೆ ಅಧಿಕಾರಿಗಳು ಬಾಗಿಲು ಹಾಕಿಸಿದರು.</p>.<p>ದಕ್ಷಿಣ ವಲಯದಲ್ಲಿ ಶಿವಶಕ್ತಿ ಟಿಫಿನ್ ಸೆಂಟರ್, ಲಕ್ಷ್ಮೀ ಈಟಿಂಗ್ ಪಾಯಿಂಟ್, ಹೋಟೆಲ್ ಕಬ್ಬಾಳ್ ಹಾಗೂ ಶ್ರೀಮಾತಾ ಚಿಕನ್ ಸೆಂಟರ್ಗಳನ್ನು ಮುಚ್ಚಿಸಿದರು. ದಾಸರಹಳ್ಳಿ ವಲಯದ ಟಿ ದಾಸರಹಳ್ಳಿ ವಾರ್ಡ್ನಲ್ಲಿ ಎರಡು ಮಳಿಗೆಗಳನ್ನು ಅಧಿಕಾರಿಗಳು ಮುಚ್ಚಿಸಿದರು.</p>.<p>ಬೊಮ್ಮನಹಳ್ಳಿ ವಲಯದ ಸೂಪರ್ ಮಾರ್ಕೆಟ್ ಒಂದನ್ನು ಹಾಗೂ ಕಲ್ಪತರು ರಿಫ್ರೆಶ್ಮೆಂಟ್ಸ್ ಅನ್ನು ಅಧಿಕರಿಗಳು ಮುಚ್ಚಿಸಿದ್ದಾರೆ. ಗ್ರಾಹಕರು ಅಂತರ ಕಾಪಾಡಲು ವ್ಯವಸ್ಥೆ ಮಾಡದ್ದಕ್ಕೆ ಎಂಟಿಆರ್ ಹೋಟೆಲ್ಗೆ ₹ 10 ಸಾವಿರ ದಂಡ ಹಾಕಿದ್ದಾರೆ. ಬೇಗೂರಿನಲ್ಲಿ ಅಪಾರ್ಟ್ಮೆಂಟ್ ಸಮುಚ್ಚಯದ ಕ್ಲಬ್ ಹೌಸ್ನಲ್ಲಿ ಔತಣಕೂಟ ಏರ್ಪಡಿಸಿದ್ದಕ್ಕೆ ₹ 20 ಸಾವಿರ ದಂಡ ವಿಧಿಸಿದ್ದಾರೆ.</p>.<p>ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ, ‘ಸಾರ್ವಜನಿಕರು ಹಾಗೂ ಅಂಗಡಿ ಮಳಿಗೆಗಳ ಮಾಲೀಕರು ಕೊರೊನಾ ಸೋಂಕು ನಿಯಂತ್ರಿಸಲು ಪಾಲಿಕೆ ಅಧಿಕಾರಿಗಳ ಜೊತೆ ಸಹಕರಿಸಬೇಕು. ಸರ್ಕಾರ ರೂಪಿಸಿರುವ ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು’ ಎಂದು ಕೋರಿದರು.</p>.<p>‘ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಯಲು ಅಧಿಕಾರಿಗಳು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ’ ಎಂದು ಅವರು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕೋವಿಡ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಕಡೆಗಣಿಸುತ್ತಿರುವ ಹೋಟೆಲ್ಗಳು, ರೆಸ್ಟೊರೆಂಟ್ಗಳು, ಮಳಿಗೆಗಳು ಹಾಗೂ ಸೂಪರ್ ಮಾರ್ಕೆಟ್ಗಳ ಮೇಲಿನ ದಾಳಿಯನ್ನು ಬಿಬಿಎಂಪಿ ಮುಂದುವರಿಸಿದೆ.</p>.<p>ಸಿಬ್ಬಂದಿ ಮಾಸ್ಕ್ ಧರಿಸದೇ ಇರುವುದು, ಗ್ರಾಹಕರು ಅಂತರ ಕಾಪಾಡುವುದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪಾಲಿಕೆ ಅಧಿಕಾರಿಗಳು ಬುಧವಾರ ಒಂದೇ ದಿನ 22 ಉದ್ದಿಮೆಗಳನ್ನು ಮುಚ್ಚಿಸಿದ್ದಾರೆ.</p>.<p>ಪಶ್ಚಿಮ ವಲಯದಲ್ಲಿ ಚಾಮರಾಜಪೇಟೆಯ ಮಂಜುನಾಥ ಟಿಫಿನ್ ಸೆಂಟರ್, ಹೋಟೆಲ್ ಶ್ರೀಹರ್ಷ ಹಾಗೂ ರಾಜಾಜಿನಗರದ ಗಣೇಶ ಜ್ಯೂಸ್ ಸೆಂಟರ್ಗಳನ್ನು ಅಧಿಕಾರಿಗಳು ಮುಚ್ಚಿಸಿದ್ದಾರೆ. ಪಶ್ಚಿಮ ವಲಯದಲ್ಲಿ ಆರು ಉದ್ದಿಮೆಗಳಿಗೆ ಒಟ್ಟು 12,750 ದಂಡ ವಿಧಿಸಲಾಗಿದೆ.</p>.<p>ಯಲಹಂಕ ವಲಯದಲ್ಲಿ ಝತಾರ್ ಮಲ್ಟಿ ಕುಸೈನ್ ರೆಸ್ಟೋರೆಂಟ್ಗೆ ಬೀಗಮುದ್ರೆ ಹಾಕಲಾಗಿದೆ. ಮಹದೇವಪುರ ವಲಯದ ಹಗದೂರು ವಾರ್ಡ್ನಲ್ಲಿ ಮಿಯಾಮಿ ಸೂಪರ್ ಮಾರ್ಕೆಟ್, ಮಾರತಹಳ್ಳಿಯ ಪ್ಯಾರಡೈಸ್ ರೆಸ್ಟೋರೆಂಟ್ ಹಾಗೂ ರಿಲಯನ್ಸ್ ಸ್ಮಾರ್ಟ್ ಪಾಯಿಂಟ್ ಮಳಿಗೆ, ಹೊರಮಾವು ವಾರ್ಡ್ನ ಲಸ್ಸಿ ಶಾಪ್ಗಳನ್ನು ಅಧಿಕಾರಿಗಳು ಮುಚ್ಚಿಸಿದರು.</p>.<p>ರಾಜರಾಜೇಶ್ವರಿ ನಗರ ವಲಯದ ನಾಗರಬಾವಿಯ ಉಡುಪಿ ಹೋಟೆಲ್, ರಾಜರಾಜೇಶ್ವರಿ ನಗರ ವಾರ್ಡ್ನ ಕಾಪಿಕಟ್ಟೆ ಹಾಗೂ ಇಂದ್ರಪ್ರಸ್ಥ ಹೋಟೆಲ್ಗಳನ್ನು ಬಂದ್ ಮಾಡಿಸಿದರು. ಪೂರ್ವವಲಯದ ಗಂಗೇನಹಳ್ಳಿ ವಾರ್ಡ್ನಲ್ಲಿ ಮೂರು ಮಳಿಗೆಗಳಿಗೆ ಅಧಿಕಾರಿಗಳು ಬಾಗಿಲು ಹಾಕಿಸಿದರು.</p>.<p>ದಕ್ಷಿಣ ವಲಯದಲ್ಲಿ ಶಿವಶಕ್ತಿ ಟಿಫಿನ್ ಸೆಂಟರ್, ಲಕ್ಷ್ಮೀ ಈಟಿಂಗ್ ಪಾಯಿಂಟ್, ಹೋಟೆಲ್ ಕಬ್ಬಾಳ್ ಹಾಗೂ ಶ್ರೀಮಾತಾ ಚಿಕನ್ ಸೆಂಟರ್ಗಳನ್ನು ಮುಚ್ಚಿಸಿದರು. ದಾಸರಹಳ್ಳಿ ವಲಯದ ಟಿ ದಾಸರಹಳ್ಳಿ ವಾರ್ಡ್ನಲ್ಲಿ ಎರಡು ಮಳಿಗೆಗಳನ್ನು ಅಧಿಕಾರಿಗಳು ಮುಚ್ಚಿಸಿದರು.</p>.<p>ಬೊಮ್ಮನಹಳ್ಳಿ ವಲಯದ ಸೂಪರ್ ಮಾರ್ಕೆಟ್ ಒಂದನ್ನು ಹಾಗೂ ಕಲ್ಪತರು ರಿಫ್ರೆಶ್ಮೆಂಟ್ಸ್ ಅನ್ನು ಅಧಿಕರಿಗಳು ಮುಚ್ಚಿಸಿದ್ದಾರೆ. ಗ್ರಾಹಕರು ಅಂತರ ಕಾಪಾಡಲು ವ್ಯವಸ್ಥೆ ಮಾಡದ್ದಕ್ಕೆ ಎಂಟಿಆರ್ ಹೋಟೆಲ್ಗೆ ₹ 10 ಸಾವಿರ ದಂಡ ಹಾಕಿದ್ದಾರೆ. ಬೇಗೂರಿನಲ್ಲಿ ಅಪಾರ್ಟ್ಮೆಂಟ್ ಸಮುಚ್ಚಯದ ಕ್ಲಬ್ ಹೌಸ್ನಲ್ಲಿ ಔತಣಕೂಟ ಏರ್ಪಡಿಸಿದ್ದಕ್ಕೆ ₹ 20 ಸಾವಿರ ದಂಡ ವಿಧಿಸಿದ್ದಾರೆ.</p>.<p>ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ, ‘ಸಾರ್ವಜನಿಕರು ಹಾಗೂ ಅಂಗಡಿ ಮಳಿಗೆಗಳ ಮಾಲೀಕರು ಕೊರೊನಾ ಸೋಂಕು ನಿಯಂತ್ರಿಸಲು ಪಾಲಿಕೆ ಅಧಿಕಾರಿಗಳ ಜೊತೆ ಸಹಕರಿಸಬೇಕು. ಸರ್ಕಾರ ರೂಪಿಸಿರುವ ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು’ ಎಂದು ಕೋರಿದರು.</p>.<p>‘ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಯಲು ಅಧಿಕಾರಿಗಳು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ’ ಎಂದು ಅವರು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>