45 ವರ್ಷಗಳಿಂದ ಗುತ್ತಿಗೆದಾರರಾಗಿದ್ದರು. ಮಲ್ಲೇಶ್ವರದಲ್ಲಿ ಗಾಂಧಿಭವನ, ಗೋವಿಂದರಾಜನಗರದಲ್ಲಿ ಕ್ರೀಡಾಂಗಣ, ರಾಜಾಜಿನಗರ ಕಾಂಪ್ಲೆಕ್ಸ್ ಸೇರಿದಂತೆ ಹಲವು ಕಟ್ಟಡಗಳನ್ನು ಇವರು ನಿರ್ಮಾಣ ಮಾಡಿದ್ದರು.ಕಟ್ಟಡ ನಿರ್ಮಾಣವೊಂದರ ಗುತ್ತಿಗೆ ಬಾಕಿ ಹಣ ನೀಡುವಂತೆ ಹಲವು ಬಾರಿ ಪಾಲಿಕೆಗೆ ಮನವಿ ಮಾಡಿದ್ದರು. ₹4 ಕೋಟಿ ಬಾಕಿ ಹಣ ಬಾರದಿದ್ದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.