<p><strong>ಬೆಂಗಳೂರು: </strong>‘ಕರಗ ಮಹೋತ್ಸವವನ್ನು ದೇವಸ್ಥಾನದ ಆವರಣಕ್ಕೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಇದೇ 17ರ ಒಳಗೆ ಮತ್ತೊಂದು ಸಮನ್ವಯ ಸಭೆ ಕರೆದು ಮಹೋತ್ಸವದ ವಿಧಾನಗಳ ಬಗ್ಗೆೆ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.</p>.<p>ಕರಗ ಉತ್ಸವ ಸಂಬಂಧ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಗುರುವಾರ ಸಭೆ ನಡೆಸಿದ ಅವರು, ‘ನಗರದಲ್ಲಿ ಮತ್ತು ಶ್ರೀ ಧರ್ಮರಾಯ ಸ್ವಾಮಿ ದೇಗುಲದ ಸುತ್ತ–ಮುತ್ತ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಮೆರವಣಿಗೆಗೆ ಅವಕಾಶ ನೀಡದೆ, ದೇಗುಲದ ಒಳಗೆ 5 ರಿಂದ 7 ಜನರು ಒಳಗೊಂಡತೆ ಪೂಜೆ ವಿಧಿ ವಿಧಾನವನ್ನು ನಡೆಸಲು ಅನುಮತಿ ನೀಡುವ ಚಿಂತನೆ ಇದೆ’ ಎಂದರು.</p>.<p>ವಿಧಾನ ಪರಿಷತ್ ಸದಸ್ಯ ಪಿ.ಆರ್. ರಮೇಶ್, ‘ಕಳೆದ ವರ್ಷವೂ ಕರಗ ಉತ್ಸವವನ್ನು ಕೇವಲ 5 ಜನರ ನೇತೃತ್ವದಲ್ಲಿ ಗರ್ಭಗುಡಿಯ ಒಳಗಡೆ ನೆರವೇರಿಸಲಾಯಿತು. ಈ ವರ್ಷ ಸ್ವಲ್ಪ ಸಡಿಲಿಕೆ ನೀಡಬೇಕು’ ಎಂದು ಕೋರಿದರು.</p>.<p>ಶಾಸಕ ಉದಯ ಗರುಡಾಚಾರ್, ‘ಹೆಚ್ಚು ಸಡಿಲಿಕೆ ಬೇಡ. ಜನರ ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕಾದುದು ಅವಶ್ಯ’ ಎಂದರು.</p>.<p class="Subhead"><strong>ಉತ್ಸವ ಸಮಿತಿ:</strong>ಈ ವರ್ಷ ಕರಗ ಉತ್ಸವ ವ್ಯವಸ್ಥಾಪನಾ ಸಮಿತಿ ಅಸ್ತಿತ್ವದಲ್ಲಿ ಇಲ್ಲ. ಬದಲಾಗಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರು ಕರಗ ಉತ್ಸವ ಸಮಿತಿ ರಚಿಸಿದ್ದಾರೆ. ಈ ಉತ್ಸವ ಸಮಿತಿಯು ದೇವಾಲಯಕ್ಕೆೆ ಸೀಮಿತವಾಗಿ ಕರಗ ಆಚರಣೆ ಕುರಿತು ವಿಧಿವಿಧಾನ ಮತ್ತು ಸಂಪ್ರದಾಯದ ಕುರಿತು ಏ.17ಕ್ಕೆ ವರದಿ ನೀಡಲಿದೆ.</p>.<p>‘ರಾಜ್ಯ ಸರ್ಕಾರ ಮುಸ್ಲಿಂ ಮುಖಂಡರೊಂದಿಗೆ ಚರ್ಚಿಸಿ ಕೋವಿಡ್ ಸೋಂಕು ಹರಡದಂತೆ ಎಚ್ಚರಿಕೆ ವಹಿಸಿ, ರಂಜಾನ್ ಆಚರಣೆ ಬಗ್ಗೆೆ ಕೋವಿಡ್ ಮಾರ್ಗಸೂಚಿ ಹೊರಡಿಸಿದೆ. ಈ ಮಾರ್ಗಸೂಚಿ ಪಾಲನೆಗೆ ಅವಶ್ಯವಿರುವ ಸಿಬ್ಬಂದಿ ನೆರವನ್ನು ಪಾಲಿಕೆ ನೀಡಲಿದೆ’ ಎಂದೂ ಗೌರವ್ ಗುಪ್ತ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ಕರಗ ಮಹೋತ್ಸವವನ್ನು ದೇವಸ್ಥಾನದ ಆವರಣಕ್ಕೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಇದೇ 17ರ ಒಳಗೆ ಮತ್ತೊಂದು ಸಮನ್ವಯ ಸಭೆ ಕರೆದು ಮಹೋತ್ಸವದ ವಿಧಾನಗಳ ಬಗ್ಗೆೆ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.</p>.<p>ಕರಗ ಉತ್ಸವ ಸಂಬಂಧ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಗುರುವಾರ ಸಭೆ ನಡೆಸಿದ ಅವರು, ‘ನಗರದಲ್ಲಿ ಮತ್ತು ಶ್ರೀ ಧರ್ಮರಾಯ ಸ್ವಾಮಿ ದೇಗುಲದ ಸುತ್ತ–ಮುತ್ತ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಮೆರವಣಿಗೆಗೆ ಅವಕಾಶ ನೀಡದೆ, ದೇಗುಲದ ಒಳಗೆ 5 ರಿಂದ 7 ಜನರು ಒಳಗೊಂಡತೆ ಪೂಜೆ ವಿಧಿ ವಿಧಾನವನ್ನು ನಡೆಸಲು ಅನುಮತಿ ನೀಡುವ ಚಿಂತನೆ ಇದೆ’ ಎಂದರು.</p>.<p>ವಿಧಾನ ಪರಿಷತ್ ಸದಸ್ಯ ಪಿ.ಆರ್. ರಮೇಶ್, ‘ಕಳೆದ ವರ್ಷವೂ ಕರಗ ಉತ್ಸವವನ್ನು ಕೇವಲ 5 ಜನರ ನೇತೃತ್ವದಲ್ಲಿ ಗರ್ಭಗುಡಿಯ ಒಳಗಡೆ ನೆರವೇರಿಸಲಾಯಿತು. ಈ ವರ್ಷ ಸ್ವಲ್ಪ ಸಡಿಲಿಕೆ ನೀಡಬೇಕು’ ಎಂದು ಕೋರಿದರು.</p>.<p>ಶಾಸಕ ಉದಯ ಗರುಡಾಚಾರ್, ‘ಹೆಚ್ಚು ಸಡಿಲಿಕೆ ಬೇಡ. ಜನರ ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕಾದುದು ಅವಶ್ಯ’ ಎಂದರು.</p>.<p class="Subhead"><strong>ಉತ್ಸವ ಸಮಿತಿ:</strong>ಈ ವರ್ಷ ಕರಗ ಉತ್ಸವ ವ್ಯವಸ್ಥಾಪನಾ ಸಮಿತಿ ಅಸ್ತಿತ್ವದಲ್ಲಿ ಇಲ್ಲ. ಬದಲಾಗಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರು ಕರಗ ಉತ್ಸವ ಸಮಿತಿ ರಚಿಸಿದ್ದಾರೆ. ಈ ಉತ್ಸವ ಸಮಿತಿಯು ದೇವಾಲಯಕ್ಕೆೆ ಸೀಮಿತವಾಗಿ ಕರಗ ಆಚರಣೆ ಕುರಿತು ವಿಧಿವಿಧಾನ ಮತ್ತು ಸಂಪ್ರದಾಯದ ಕುರಿತು ಏ.17ಕ್ಕೆ ವರದಿ ನೀಡಲಿದೆ.</p>.<p>‘ರಾಜ್ಯ ಸರ್ಕಾರ ಮುಸ್ಲಿಂ ಮುಖಂಡರೊಂದಿಗೆ ಚರ್ಚಿಸಿ ಕೋವಿಡ್ ಸೋಂಕು ಹರಡದಂತೆ ಎಚ್ಚರಿಕೆ ವಹಿಸಿ, ರಂಜಾನ್ ಆಚರಣೆ ಬಗ್ಗೆೆ ಕೋವಿಡ್ ಮಾರ್ಗಸೂಚಿ ಹೊರಡಿಸಿದೆ. ಈ ಮಾರ್ಗಸೂಚಿ ಪಾಲನೆಗೆ ಅವಶ್ಯವಿರುವ ಸಿಬ್ಬಂದಿ ನೆರವನ್ನು ಪಾಲಿಕೆ ನೀಡಲಿದೆ’ ಎಂದೂ ಗೌರವ್ ಗುಪ್ತ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>