ಕರಗ ಉತ್ಸವ ಸಂಬಂಧ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಗುರುವಾರ ಸಭೆ ನಡೆಸಿದ ಅವರು, ‘ನಗರದಲ್ಲಿ ಮತ್ತು ಶ್ರೀ ಧರ್ಮರಾಯ ಸ್ವಾಮಿ ದೇಗುಲದ ಸುತ್ತ–ಮುತ್ತ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಮೆರವಣಿಗೆಗೆ ಅವಕಾಶ ನೀಡದೆ, ದೇಗುಲದ ಒಳಗೆ 5 ರಿಂದ 7 ಜನರು ಒಳಗೊಂಡತೆ ಪೂಜೆ ವಿಧಿ ವಿಧಾನವನ್ನು ನಡೆಸಲು ಅನುಮತಿ ನೀಡುವ ಚಿಂತನೆ ಇದೆ’ ಎಂದರು.