<p><strong>ಯಲಹಂಕ:</strong> ಬಿಬಿಎಂಪಿ ಯಲಹಂಕವಲಯ ವ್ಯಾಪ್ತಿಯ ಜಿಕೆವಿಕೆ ಆವರಣದಲ್ಲಿ 370 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರಕ್ಕೆ ಸೋಮವಾರ ಚಾಲನೆ ನೀಡಲಾಯಿತು.</p>.<p>ಶಾಸಕರಾದ ಎಸ್.ಆರ್.ವಿಶ್ವನಾಥ್, ಕೃಷ್ಣಬೈರೇಗೌಡ, ಬಿಬಿಎಂಪಿ ಆಯುಕ್ತ ಗೌರವಗುಪ್ತ ಆರೈಕೆ ಕೇಂದ್ರಕ್ಕೆ ಚಾಲನೆ ನೀಡಿದರು.</p>.<p>ಆರೈಕೆ ಕೇಂದ್ರದಲ್ಲಿ ಪುರುಷರಿಗೆ 80, ಮಹಿಳೆಯರಿಗೆ 80, ಸಾಮಾನ್ಯವರ್ಗದವರಿಗೆ 150 ಹಾಗೂ 50 ಆಮ್ಲಜನಕಯುಕ್ತ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಈ ಕೇಂದ್ರಕ್ಕೆ ಎರಡು ಆಂಬುಲೆನ್ಸ್, 12 ವೈದ್ಯರು, 12 ದಾದಿಯರು, 24 ಆರೋಗ್ಯ ಸಹಾಯಕರು, 36 ಮಂದಿ ಸಹಾಯಕ ಸಿಬ್ಬಂದಿ, ಡಾಟಾ ಆಪರೇಟರ್ ಹಾಗೂ ಮಾರ್ಷಲ್ಗಳನ್ನು ಸಹ ನಿಯೋಜಿಸಲಾಗಿದೆ.</p>.<p>‘ಆರೈಕೆ ಕೇಂದ್ರದಲ್ಲಿ 70 ಐಸಿಯು ಹಾಸಿಗೆ ವ್ಯವಸ್ಥೆ ಮಾಡಲು ಸಿದ್ಧತೆ ನಡೆಸಲಾಗಿದ್ದು, ಇದಕ್ಕೆ ಸಹಾಯಮಾಡಲು ಕೆಲವು ದಾನಿಗಳು ಮುಂದೆ ಬಂದಿದ್ದಾರೆ. ಈ ಕೇಂದ್ರ ತೆರೆದಿರುವುದರಿಂದ ಸುತ್ತಮುತ್ತಲ ಹಾಗೂ ಗ್ರಾಮೀಣಭಾಗದ ಜನರಿಗೆ ಅನುಕೂಲವಾಗಲಿದೆ’ ಎಂದು ತಹಶೀಲ್ದಾರ್ ಕೆ.ನರಸಿಂಹಮೂರ್ತಿ ತಿಳಿಸಿದರು.</p>.<p>ಯಲಹಂಕ ವಲಯದ ಜಂಟಿ ಆಯುಕ್ತ ಡಾ.ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಹಂಕ:</strong> ಬಿಬಿಎಂಪಿ ಯಲಹಂಕವಲಯ ವ್ಯಾಪ್ತಿಯ ಜಿಕೆವಿಕೆ ಆವರಣದಲ್ಲಿ 370 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರಕ್ಕೆ ಸೋಮವಾರ ಚಾಲನೆ ನೀಡಲಾಯಿತು.</p>.<p>ಶಾಸಕರಾದ ಎಸ್.ಆರ್.ವಿಶ್ವನಾಥ್, ಕೃಷ್ಣಬೈರೇಗೌಡ, ಬಿಬಿಎಂಪಿ ಆಯುಕ್ತ ಗೌರವಗುಪ್ತ ಆರೈಕೆ ಕೇಂದ್ರಕ್ಕೆ ಚಾಲನೆ ನೀಡಿದರು.</p>.<p>ಆರೈಕೆ ಕೇಂದ್ರದಲ್ಲಿ ಪುರುಷರಿಗೆ 80, ಮಹಿಳೆಯರಿಗೆ 80, ಸಾಮಾನ್ಯವರ್ಗದವರಿಗೆ 150 ಹಾಗೂ 50 ಆಮ್ಲಜನಕಯುಕ್ತ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಈ ಕೇಂದ್ರಕ್ಕೆ ಎರಡು ಆಂಬುಲೆನ್ಸ್, 12 ವೈದ್ಯರು, 12 ದಾದಿಯರು, 24 ಆರೋಗ್ಯ ಸಹಾಯಕರು, 36 ಮಂದಿ ಸಹಾಯಕ ಸಿಬ್ಬಂದಿ, ಡಾಟಾ ಆಪರೇಟರ್ ಹಾಗೂ ಮಾರ್ಷಲ್ಗಳನ್ನು ಸಹ ನಿಯೋಜಿಸಲಾಗಿದೆ.</p>.<p>‘ಆರೈಕೆ ಕೇಂದ್ರದಲ್ಲಿ 70 ಐಸಿಯು ಹಾಸಿಗೆ ವ್ಯವಸ್ಥೆ ಮಾಡಲು ಸಿದ್ಧತೆ ನಡೆಸಲಾಗಿದ್ದು, ಇದಕ್ಕೆ ಸಹಾಯಮಾಡಲು ಕೆಲವು ದಾನಿಗಳು ಮುಂದೆ ಬಂದಿದ್ದಾರೆ. ಈ ಕೇಂದ್ರ ತೆರೆದಿರುವುದರಿಂದ ಸುತ್ತಮುತ್ತಲ ಹಾಗೂ ಗ್ರಾಮೀಣಭಾಗದ ಜನರಿಗೆ ಅನುಕೂಲವಾಗಲಿದೆ’ ಎಂದು ತಹಶೀಲ್ದಾರ್ ಕೆ.ನರಸಿಂಹಮೂರ್ತಿ ತಿಳಿಸಿದರು.</p>.<p>ಯಲಹಂಕ ವಲಯದ ಜಂಟಿ ಆಯುಕ್ತ ಡಾ.ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>