‘ಸರ್ ಎಂ. ವಿಶ್ವೇಶ್ವರಯ್ಯ ಲೇಔಟ್ನ 26,253 ಚದರ ಅಡಿ ನಿವೇಶನವನ್ನು ಟ್ರಸ್ಟ್ಗೆ 2011ರಲ್ಲಿ ಗುತ್ತಿಗೆ ಆಧಾರದಲ್ಲಿ ನೀಡಲಾಗಿತ್ತು. ಶಾಲೆ ನಿರ್ಮಿಸುವುದಾಗಿ ಹೇಳಿ ಚಂದ್ರಪ್ಪ ಅವರು ನಿವೇಶನ ಪಡೆದಿದ್ದರು. 11 ವರ್ಷ ಕಳೆದರೂ ಶಾಲೆ ನಿರ್ಮಾಣ ಆಗಿರಲಿಲ್ಲ. ಕಳೆದ ವರ್ಷ ಅದೇ ಟ್ರಸ್ಟ್ಗೆ ನಿವೇಶನ ಮಾರಾಟ ಮಾಡುವ ನಿರ್ಧಾರ ಕೈಗೊಂಡಿದ್ದು, ನಿವೇಶನ ಹಂಚಿಕೆಯ ಉದ್ದೇಶ ವಿಫಲವಾದಂತಾಗಿದೆ. ನಿಯಮದಂತೆ 2 ವರ್ಷಗಳ ಅವಧಿಯಲ್ಲಿ ಮಂಜೂರು ಮಾಡಿದ ಉದ್ದೇಶಕ್ಕೆ ನಿವೇಶನ ಬಳಸದಿದ್ದರೆ ಅಂತಹ ನಿವೇಶನವನ್ನು ವಾಪಸ್ ಪಡೆಯುವ ಅಧಿಕಾರ ಬಿಡಿಎಗೆ ಇದೆ’ ಎನ್ನುತ್ತವೆ ಮೂಲಗಳು.