<p><strong>ಬೆಂಗಳೂರು:</strong> ಕಡಿಮೆ ಬೆಲೆಯಲ್ಲಿ ಬಿಡಿಎ ನಿವೇಶನ ನೋಂದಣಿ ಮಾಡಿಸಿಕೊಡುವುದಾಗಿ ಹೇಳಿ ನಕಲಿ ಹಂಚಿಕೆ ಪತ್ರ, ರಸೀದಿಗಳನ್ನು ಸೃಷ್ಟಿಸಿ ₹ 2.25 ಕೋಟಿ ವಂಚಿಸಿದ ಆರೋಪದಲ್ಲಿ ಆರು ಮಂದಿ ವಿರುದ್ಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.</p>.<p>ಈ ಬಗ್ಗೆ ಹೊಸಕೆರೆಹಳ್ಳಿ ಬಿಎಸ್ಕೆ ಮೂರನೇ ಹಂತದ ನಿವಾಸಿ, ಉದ್ಯಮಿ ಕಿರಣ್ರಾಜ್ ದೂರು ನೀಡಿದ್ದಾರೆ. ಜೆ.ಆರ್.ನಾಗರಾಜು, ಶಾರದಾ, ಶ್ರೀವತ್ಸ, ಚೈತ್ರಾ, ಮಂಜೇಶ ಜಿ.ಅತ್ರೇಯ ಮತ್ತು ನಾಗರಾಜು ಅವರ ತಾಯಿ ವಿರುದ್ಧ ಎಫ್ಐಆರ್ ದಾಖಲಾಗಿದೆ.</p>.<p>‘ನನಗೆ ಬಿಡಿಎ ಆಯುಕ್ತರು ಹಾಗೂ ಅಧ್ಯಕ್ಷರು ಗೊತ್ತು. ಹೊಸಕೆರೆಹಳ್ಳಿಯ ಬನಶಂಕರಿ ಆರನೇ ಹಂತದ ಬಡಾವಣೆಯಲ್ಲಿ ಕಡಿಮೆ ಬೆಲೆಗೆ ಬಿಡಿಎ ನಾಗರಿಕ ಸೌಲಭ್ಯ (ಸಿ.ಎ) ನಿವೇಶನ<br />ಮತ್ತು ವಿವಿಧ ಅಳತೆಗಳ ನಿವೇಶನಗಳನ್ನು ಮರುಹಂಚಿಕೆ ಮಾಡಿಸಿ ಕೊಡುವುದಾಗಿ ಅರೋಪಿಗಳು ನಂಬಿಸಿದ್ದರು.</p>.<p>2018ರ ಅಕ್ಟೋಬರ್ ತಿಂಗಳಿನಿಂದ 2019ರ ನವೆಂಬರ್ ನಡುವೆ ನನ್ನಿಂದ ಮತ್ತು ನನ್ನ ಸ್ನೇಹಿತರಿಂದ ಆನ್ಲೈನ್ ಮೂಲಕ ಮತ್ತು ನಗದು ರೂಪದಲ್ಲಿ ಹಣ ಪಡೆದುಕೊಂಡಿದ್ದಾರೆ.</p>.<p>ಅಲ್ಲದೆ, ನಿವೇಶನ ಹಂಚಿಕೆ ಪತ್ರ ಮತ್ತು ಹಣ ಕಟ್ಟಿದ ಬಗ್ಗೆ ಬಿಡಿಎದಿಂದ ರಸೀದಿ ಕೂಡಾ ನೀಡಿದ್ದಾರೆ’ ಎಂದು ದೂರಿನಲ್ಲಿ ಕಿರಣ್ರಾಜ್ ಆರೋಪಿಸಿದ್ದಾರೆ.</p>.<p>‘ಆದರೆ, ಮಾತು ಕೊಟ್ಟಂತೆ ನಿವೇಶನಗಳನ್ನು ನೋಂದಣಿ ಮಾಡಿಸಿಕೊಡದೆ ಸತಾಯಿಸುತ್ತಿದ್ದರು. ಅನುಮಾನಗೊಂಡು ವಿಚಾರಿಸಿದಾಗ ನಮಗೆ ನೀಡಿರುವುದು ನಕಲಿ ನಿವೇಶನ ಹಂಚಿಕೆ ಪತ್ರ ಮತ್ತು ರಸೀದಿ ಎನ್ನುವುದು ಗೊತ್ತಾಗಿದೆ’ ಎಂದೂ ಅವರು ಈ ಸಂಬಂಧ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.</p>.<p><strong>₹ 576 ಮರುಪಾವತಿಸಲು ಕೇಳಿ ₹ 31,307 ಕಳೆದುಕೊಂಡ!</strong><br />ಬೆಂಗಳೂರು: ಆನ್ಲೈನ್ನಲ್ಲಿ ₹ 576 ಮೊತ್ತದ ತರಕಾರಿಯನ್ನು ಖರೀದಿಸಿದ್ದ ವ್ಯಕ್ತಿಯೊಬ್ಬರ ಖಾತೆಗೆ ಕನ್ನ ಹಾಕಿದ ಸೈಬರ್ ಕಳ್ಳರು, ₹ 31,307 ಹಣ ಲಪಟಾಯಿಸಿದ ಘಟನೆ ಸರ್ಜಾಪುರ ರಸ್ತೆಯ ಅಂಬೇಡ್ಕರ್ ನಗರದಲ್ಲಿ ನಡೆದಿದೆ. ಹಣ ಕಳೆದುಕೊಂಡಿರುವ ಜೆ.ಸಿ.ಬಿ. ಆಪರೇಟರ್ ಶ್ರೀನಿವಾಸ್ ಎಂಬವರು ಈ ಬಗ್ಗೆ ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.</p>.<p>ಶ್ರೀನಿವಾಸ್ ಅವರು ಜ. 23ರಂದು ‘ಗ್ರೋಜೆರ್’ ಆ್ಯಪ್ನಲ್ಲಿ ₹ 576 ಮೊತ್ತದ ತರಕಾರಿ ಖರೀದಿಸಿದ್ದರು. ಇನ್ನೂ ಹೆಚ್ಚು ತರಕಾರಿ ಬೇಕೆಂಬ ಕಾರಣಕ್ಕೆ ಹಿಂದಿನ ಆರ್ಡರ್ ರದ್ದುಪಡಿಸಿ, ₹ 1,200 ಮೊತ್ತದ ತರಕಾರಿ ಪೂರೈಸಲು ಕೋರಿದ್ದರು. ಎರಡನೇ ಬಾರಿಗೆ ಖರೀದಿಸಿದ್ದ ತರಕಾರಿ ಮನೆಗೆ ತಲುಪಿತ್ತು. ಆದರೆ, ಮೊದಲ ಖರೀದಿಗೆ ಸಂಬಂಧಿಸಿ ಹಣ ಖಾತೆಗೆ ಮರುಜಮೆ ಆಗಿರಲಿಲ್ಲ.</p>.<p>ಈ ಬಗ್ಗೆ ವಿಚಾರಿಸಲು ಜ.31ರಂದು ಬೆಳಿಗ್ಗೆ ಆ್ಯಪ್ನಲ್ಲಿದ್ದ ಗ್ರಾಹಕ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದರು. ತಕ್ಷಣ ಬೇರೊಂದು ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿಯೊಬ್ಬ, ‘ಹಣ ಜಮೆ ಮಾಡುತ್ತೇವೆ. ನಿಮ್ಮ ಬ್ಯಾಂಕ್ ಖಾತೆಗೆ ಜೋಡಣೆಯಾಗಿರುವ ಮೊಬೈಲ್ ನಂಬರ್ ಕೊಡಿ’ ಎಂದು ಅವರಿಗೆ ಹೇಳಿದ್ದ.</p>.<p>ಮೊಬೈಲ್ ನಂಬರ್ ಕೊಡುತ್ತಿದ್ದಂತೆ, ‘ನಿಮ್ಮ ಮೊಬೈಲ್ಗೆ ಬಂದಿರುವ ಒಟಿಪಿ (ಒನ್ ಟೈಮ್ ಪಾಸ್ವರ್ಡ್) ಸಂಖ್ಯೆ ತಿಳಿಸಿ’ ಎಂದು ಶ್ರೀನಿವಾಸ್ ಅವರಿಗೆ ವ್ಯಕ್ತಿ ತಿಳಿಸಿದ್ದ. ಒಟಿಪಿ ಸಂಖ್ಯೆ ಕೇಳಿದ್ದರಿಂದ ಅನುಮಾನಗೊಂಡು ಖಾತೆ ಇರುವ ಫೆಡರಲ್ ಬ್ಯಾಂಕ್ಗೆ ತೆರಳಿ ವಿಚಾರಿಸಿದಾಗ ಖಾತೆಯಿಂದ ₹ 5 ಸಾವಿರ, ₹ 10 ಸಾವಿರ, ₹ 10 ಸಾವಿರ, ₹ 6 ಸಾವಿರ ಮತ್ತು ₹ 307 ಹೀಗೆ ಐದು ಬಾರಿ ಒಟ್ಟು ₹ 31,307 ಹಣ ಕಡಿತಗೊಂಡಿರುವುದು ಶ್ರೀನಿವಾಸ್ ಅವರ ಗಮನಕ್ಕೆ ಬಂದಿದೆ.</p>.<p>‘ಒಟಿಪಿ ಪಡೆದ ಅಪರಿಚಿತರು ನನ್ನ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಬೇಕು’ ಎಂದು ದೂರಿನಲ್ಲಿ ಅವರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕಡಿಮೆ ಬೆಲೆಯಲ್ಲಿ ಬಿಡಿಎ ನಿವೇಶನ ನೋಂದಣಿ ಮಾಡಿಸಿಕೊಡುವುದಾಗಿ ಹೇಳಿ ನಕಲಿ ಹಂಚಿಕೆ ಪತ್ರ, ರಸೀದಿಗಳನ್ನು ಸೃಷ್ಟಿಸಿ ₹ 2.25 ಕೋಟಿ ವಂಚಿಸಿದ ಆರೋಪದಲ್ಲಿ ಆರು ಮಂದಿ ವಿರುದ್ಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.</p>.<p>ಈ ಬಗ್ಗೆ ಹೊಸಕೆರೆಹಳ್ಳಿ ಬಿಎಸ್ಕೆ ಮೂರನೇ ಹಂತದ ನಿವಾಸಿ, ಉದ್ಯಮಿ ಕಿರಣ್ರಾಜ್ ದೂರು ನೀಡಿದ್ದಾರೆ. ಜೆ.ಆರ್.ನಾಗರಾಜು, ಶಾರದಾ, ಶ್ರೀವತ್ಸ, ಚೈತ್ರಾ, ಮಂಜೇಶ ಜಿ.ಅತ್ರೇಯ ಮತ್ತು ನಾಗರಾಜು ಅವರ ತಾಯಿ ವಿರುದ್ಧ ಎಫ್ಐಆರ್ ದಾಖಲಾಗಿದೆ.</p>.<p>‘ನನಗೆ ಬಿಡಿಎ ಆಯುಕ್ತರು ಹಾಗೂ ಅಧ್ಯಕ್ಷರು ಗೊತ್ತು. ಹೊಸಕೆರೆಹಳ್ಳಿಯ ಬನಶಂಕರಿ ಆರನೇ ಹಂತದ ಬಡಾವಣೆಯಲ್ಲಿ ಕಡಿಮೆ ಬೆಲೆಗೆ ಬಿಡಿಎ ನಾಗರಿಕ ಸೌಲಭ್ಯ (ಸಿ.ಎ) ನಿವೇಶನ<br />ಮತ್ತು ವಿವಿಧ ಅಳತೆಗಳ ನಿವೇಶನಗಳನ್ನು ಮರುಹಂಚಿಕೆ ಮಾಡಿಸಿ ಕೊಡುವುದಾಗಿ ಅರೋಪಿಗಳು ನಂಬಿಸಿದ್ದರು.</p>.<p>2018ರ ಅಕ್ಟೋಬರ್ ತಿಂಗಳಿನಿಂದ 2019ರ ನವೆಂಬರ್ ನಡುವೆ ನನ್ನಿಂದ ಮತ್ತು ನನ್ನ ಸ್ನೇಹಿತರಿಂದ ಆನ್ಲೈನ್ ಮೂಲಕ ಮತ್ತು ನಗದು ರೂಪದಲ್ಲಿ ಹಣ ಪಡೆದುಕೊಂಡಿದ್ದಾರೆ.</p>.<p>ಅಲ್ಲದೆ, ನಿವೇಶನ ಹಂಚಿಕೆ ಪತ್ರ ಮತ್ತು ಹಣ ಕಟ್ಟಿದ ಬಗ್ಗೆ ಬಿಡಿಎದಿಂದ ರಸೀದಿ ಕೂಡಾ ನೀಡಿದ್ದಾರೆ’ ಎಂದು ದೂರಿನಲ್ಲಿ ಕಿರಣ್ರಾಜ್ ಆರೋಪಿಸಿದ್ದಾರೆ.</p>.<p>‘ಆದರೆ, ಮಾತು ಕೊಟ್ಟಂತೆ ನಿವೇಶನಗಳನ್ನು ನೋಂದಣಿ ಮಾಡಿಸಿಕೊಡದೆ ಸತಾಯಿಸುತ್ತಿದ್ದರು. ಅನುಮಾನಗೊಂಡು ವಿಚಾರಿಸಿದಾಗ ನಮಗೆ ನೀಡಿರುವುದು ನಕಲಿ ನಿವೇಶನ ಹಂಚಿಕೆ ಪತ್ರ ಮತ್ತು ರಸೀದಿ ಎನ್ನುವುದು ಗೊತ್ತಾಗಿದೆ’ ಎಂದೂ ಅವರು ಈ ಸಂಬಂಧ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.</p>.<p><strong>₹ 576 ಮರುಪಾವತಿಸಲು ಕೇಳಿ ₹ 31,307 ಕಳೆದುಕೊಂಡ!</strong><br />ಬೆಂಗಳೂರು: ಆನ್ಲೈನ್ನಲ್ಲಿ ₹ 576 ಮೊತ್ತದ ತರಕಾರಿಯನ್ನು ಖರೀದಿಸಿದ್ದ ವ್ಯಕ್ತಿಯೊಬ್ಬರ ಖಾತೆಗೆ ಕನ್ನ ಹಾಕಿದ ಸೈಬರ್ ಕಳ್ಳರು, ₹ 31,307 ಹಣ ಲಪಟಾಯಿಸಿದ ಘಟನೆ ಸರ್ಜಾಪುರ ರಸ್ತೆಯ ಅಂಬೇಡ್ಕರ್ ನಗರದಲ್ಲಿ ನಡೆದಿದೆ. ಹಣ ಕಳೆದುಕೊಂಡಿರುವ ಜೆ.ಸಿ.ಬಿ. ಆಪರೇಟರ್ ಶ್ರೀನಿವಾಸ್ ಎಂಬವರು ಈ ಬಗ್ಗೆ ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.</p>.<p>ಶ್ರೀನಿವಾಸ್ ಅವರು ಜ. 23ರಂದು ‘ಗ್ರೋಜೆರ್’ ಆ್ಯಪ್ನಲ್ಲಿ ₹ 576 ಮೊತ್ತದ ತರಕಾರಿ ಖರೀದಿಸಿದ್ದರು. ಇನ್ನೂ ಹೆಚ್ಚು ತರಕಾರಿ ಬೇಕೆಂಬ ಕಾರಣಕ್ಕೆ ಹಿಂದಿನ ಆರ್ಡರ್ ರದ್ದುಪಡಿಸಿ, ₹ 1,200 ಮೊತ್ತದ ತರಕಾರಿ ಪೂರೈಸಲು ಕೋರಿದ್ದರು. ಎರಡನೇ ಬಾರಿಗೆ ಖರೀದಿಸಿದ್ದ ತರಕಾರಿ ಮನೆಗೆ ತಲುಪಿತ್ತು. ಆದರೆ, ಮೊದಲ ಖರೀದಿಗೆ ಸಂಬಂಧಿಸಿ ಹಣ ಖಾತೆಗೆ ಮರುಜಮೆ ಆಗಿರಲಿಲ್ಲ.</p>.<p>ಈ ಬಗ್ಗೆ ವಿಚಾರಿಸಲು ಜ.31ರಂದು ಬೆಳಿಗ್ಗೆ ಆ್ಯಪ್ನಲ್ಲಿದ್ದ ಗ್ರಾಹಕ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದರು. ತಕ್ಷಣ ಬೇರೊಂದು ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿಯೊಬ್ಬ, ‘ಹಣ ಜಮೆ ಮಾಡುತ್ತೇವೆ. ನಿಮ್ಮ ಬ್ಯಾಂಕ್ ಖಾತೆಗೆ ಜೋಡಣೆಯಾಗಿರುವ ಮೊಬೈಲ್ ನಂಬರ್ ಕೊಡಿ’ ಎಂದು ಅವರಿಗೆ ಹೇಳಿದ್ದ.</p>.<p>ಮೊಬೈಲ್ ನಂಬರ್ ಕೊಡುತ್ತಿದ್ದಂತೆ, ‘ನಿಮ್ಮ ಮೊಬೈಲ್ಗೆ ಬಂದಿರುವ ಒಟಿಪಿ (ಒನ್ ಟೈಮ್ ಪಾಸ್ವರ್ಡ್) ಸಂಖ್ಯೆ ತಿಳಿಸಿ’ ಎಂದು ಶ್ರೀನಿವಾಸ್ ಅವರಿಗೆ ವ್ಯಕ್ತಿ ತಿಳಿಸಿದ್ದ. ಒಟಿಪಿ ಸಂಖ್ಯೆ ಕೇಳಿದ್ದರಿಂದ ಅನುಮಾನಗೊಂಡು ಖಾತೆ ಇರುವ ಫೆಡರಲ್ ಬ್ಯಾಂಕ್ಗೆ ತೆರಳಿ ವಿಚಾರಿಸಿದಾಗ ಖಾತೆಯಿಂದ ₹ 5 ಸಾವಿರ, ₹ 10 ಸಾವಿರ, ₹ 10 ಸಾವಿರ, ₹ 6 ಸಾವಿರ ಮತ್ತು ₹ 307 ಹೀಗೆ ಐದು ಬಾರಿ ಒಟ್ಟು ₹ 31,307 ಹಣ ಕಡಿತಗೊಂಡಿರುವುದು ಶ್ರೀನಿವಾಸ್ ಅವರ ಗಮನಕ್ಕೆ ಬಂದಿದೆ.</p>.<p>‘ಒಟಿಪಿ ಪಡೆದ ಅಪರಿಚಿತರು ನನ್ನ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಬೇಕು’ ಎಂದು ದೂರಿನಲ್ಲಿ ಅವರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>