<p><strong>ಬೆಂಗಳೂರು</strong>: ವಿಜಯನಗರ ಟೆಲಿಕಾಂ ಬಡಾವಣೆಯಲ್ಲಿ ಟೆಲಿಕಾಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಸಿ.ಎ ನಿವೇಶನ ಮಾರಾಟ ಮಾಡಿರುವ ಸಂಬಂಧ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಸ್ವಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡಿದೆ.</p>.<p>‘ಪ್ರಜಾವಾಣಿ’ಯಲ್ಲಿ ಆಗಸ್ಟ್ 12ರಂದು ‘ಟೆಲಿಕಾಂ ಬಡಾವಣೆ: ಸಿ.ಎ ನಿವೇಶನ ಮಾರಾಟ’ ಶೀರ್ಷಿಕೆಯಲ್ಲಿ ಪ್ರಕಟವಾದ ವರದಿ ಆಧಾರದಲ್ಲಿ ನ್ಯಾಯಾಲಯ ಪ್ರಕರಣ ದಾಖಲಿಸಿಕೊಂಡು, ಬೆಂಗಳೂರು ಉತ್ತರ ತಹಶೀಲ್ದಾರ್, ಬಿಡಿಎ ಆಯುಕ್ತರು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದೆ.</p>.<p>ಹೊಸಹಳ್ಳಿ ವಾರ್ಡ್ನಲ್ಲಿರುವ ವಿಜಯನಗರ ಟೆಲಿಕಾಂ ಬಡಾವಣೆಯಲ್ಲಿ ಸುಮಾರು ಏಳು ಸಾವಿರ ಚದರ ಅಡಿ ವಿಸ್ತೀರ್ಣದ 5 ಹಾಗೂ 6ನೇ ನಿವೇಶನಗಳನ್ನು ಕಾನೂನುಬಾಹಿರವಾಗಿ ಅನಿಲ ತಿಲಕ್ ಅವರಿಗೆ ₹2.32 ಕೋಟಿಗೆ ಮಾರಾಟ ಮಾಡಲಾಗಿದೆ. ಈ ಸಿ.ಎ. ನಿವೇಶನ 20 ವರ್ಷಗಳಿಂದ ಟೆಲಿಕಾಂ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಬಳಕೆಯಲ್ಲಿತ್ತು. ಈ ವಿಷಯವು ಭೂ ಕಬಳಿಕೆಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ವಿಶೇಷ ನ್ಯಾಯಾಲಯವು ಸ್ವಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡಿದೆ.</p>.<p>ಜಮೀನಿನ ಅತಿಕ್ರಮಣಕ್ಕೆ ಸಂಬಂಧಿಸಿದಂತೆ, ವಿಸ್ತೀರ್ಣ, ಅತಿಕ್ರಮಿಸಿದ ವ್ಯಕ್ತಿಗಳ ಹೆಸರು, ವಿವರವಾದ ಸ್ಕೆಚ್, ಅನುಮೋದಿತ ನಕ್ಷೆ ಸೇರಿದಂತೆ ಎಲ್ಲ ಮಾಹಿತಿಯ ವಿವರವಾದ ವರದಿಯನ್ನು ಅ.12ರೊಳಗೆ ಸಲ್ಲಿಸಲು ಮೂವರು ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ವಿಜಯನಗರ ಟೆಲಿಕಾಂ ಬಡಾವಣೆಯಲ್ಲಿ ಟೆಲಿಕಾಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಸಿ.ಎ ನಿವೇಶನ ಮಾರಾಟ ಮಾಡಿರುವ ಸಂಬಂಧ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಸ್ವಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡಿದೆ.</p>.<p>‘ಪ್ರಜಾವಾಣಿ’ಯಲ್ಲಿ ಆಗಸ್ಟ್ 12ರಂದು ‘ಟೆಲಿಕಾಂ ಬಡಾವಣೆ: ಸಿ.ಎ ನಿವೇಶನ ಮಾರಾಟ’ ಶೀರ್ಷಿಕೆಯಲ್ಲಿ ಪ್ರಕಟವಾದ ವರದಿ ಆಧಾರದಲ್ಲಿ ನ್ಯಾಯಾಲಯ ಪ್ರಕರಣ ದಾಖಲಿಸಿಕೊಂಡು, ಬೆಂಗಳೂರು ಉತ್ತರ ತಹಶೀಲ್ದಾರ್, ಬಿಡಿಎ ಆಯುಕ್ತರು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದೆ.</p>.<p>ಹೊಸಹಳ್ಳಿ ವಾರ್ಡ್ನಲ್ಲಿರುವ ವಿಜಯನಗರ ಟೆಲಿಕಾಂ ಬಡಾವಣೆಯಲ್ಲಿ ಸುಮಾರು ಏಳು ಸಾವಿರ ಚದರ ಅಡಿ ವಿಸ್ತೀರ್ಣದ 5 ಹಾಗೂ 6ನೇ ನಿವೇಶನಗಳನ್ನು ಕಾನೂನುಬಾಹಿರವಾಗಿ ಅನಿಲ ತಿಲಕ್ ಅವರಿಗೆ ₹2.32 ಕೋಟಿಗೆ ಮಾರಾಟ ಮಾಡಲಾಗಿದೆ. ಈ ಸಿ.ಎ. ನಿವೇಶನ 20 ವರ್ಷಗಳಿಂದ ಟೆಲಿಕಾಂ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಬಳಕೆಯಲ್ಲಿತ್ತು. ಈ ವಿಷಯವು ಭೂ ಕಬಳಿಕೆಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ವಿಶೇಷ ನ್ಯಾಯಾಲಯವು ಸ್ವಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡಿದೆ.</p>.<p>ಜಮೀನಿನ ಅತಿಕ್ರಮಣಕ್ಕೆ ಸಂಬಂಧಿಸಿದಂತೆ, ವಿಸ್ತೀರ್ಣ, ಅತಿಕ್ರಮಿಸಿದ ವ್ಯಕ್ತಿಗಳ ಹೆಸರು, ವಿವರವಾದ ಸ್ಕೆಚ್, ಅನುಮೋದಿತ ನಕ್ಷೆ ಸೇರಿದಂತೆ ಎಲ್ಲ ಮಾಹಿತಿಯ ವಿವರವಾದ ವರದಿಯನ್ನು ಅ.12ರೊಳಗೆ ಸಲ್ಲಿಸಲು ಮೂವರು ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>