ತಡೆಯಾಜ್ಞೆ ಆದೇಶದಿಂದ ಯಾರ ಮನಸಿಗಾದರೂ ನೋವಾಗಿದ್ದರೆ ಕಾನೂನಿನ ಅಡಿಯಲ್ಲೇ ಪರಿಹಾರ ಕಂಡುಕೊಳ್ಳಲು ಅವಕಾಶ ಇದೆ. ಆದರೆ, ಮುಚ್ಚಿರುವ ಪ್ರತಿಮೆಯನ್ನು ಪದೇ ಪದೇ ತೆಗೆದು ಅನಾವರಣಗೊಳಿಸುತ್ತಿರುವುದು ಆಘಾತಕಾರಿ ಸಂಗತಿ. ಹಾಳಾಗಿರುವ ಕೆರೆಯ ಸ್ವರೂಪ ಪುನರ್ ಸ್ಥಾಪಿಸುವುದು ಆದೇಶದ ಉದ್ದೇಶ. ಅದನ್ನು ತಿರಸ್ಕರಿಸುವುದು ಕಾನೂನುಬಾಹಿರ’ ಎಂದು ಪೀಠ ಹೇಳಿತು.