‘ತಮಿಳುನಾಡಿನ ಶಿವಕಾಶಿಯಿಂದ ಪಟಾಕಿಯನ್ನು ಗಡಿಪ್ರದೇಶ ಅತ್ತಿಬೆಲೆಗೆ ಸಾಗಣೆ ಮಾಡಲು ಯಾವುದೇ ಪರವಾನಗಿ ಪಡೆದಿರಲಿಲ್ಲ. ಅಕ್ಟೋಬರ್ 7ರಂದು ಶಿವಕಾಶಿಯಿಂದ ಪಟಾಕಿ ತಂದು ಅತ್ತಿಬೆಲೆಯ ಗೋದಾಮಿನಲ್ಲಿ ಇಳಿಸುತ್ತಿದ್ದಾಗ ದುರಂತ ಸಂಭವಿಸಿತ್ತು. ಬೆಂಕಿ ಕಾಣಿಸಿಕೊಂಡ ಮೇಲೆ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದ. ಪ್ರಕರಣದಲ್ಲಿ 7ನೇ ಆರೋಪಿಯಾಗಿದ್ದ ಮರದುಪಾಂಡಿ ಮಾರಿಮುತ್ತುನನ್ನು ಬಂಧಿಸಲಾಗಿದೆ’ ಎಂದು ಸಿಐಡಿ ಮೂಲಗಳು ತಿಳಿಸಿದೆ.