<p><strong>ಬೆಂಗಳೂರು</strong>: ನಗರದ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕೆನರಾ ಬ್ಯಾಂಕ್ನ ವಾರ್ಷಿಕ ಮ್ಯಾರಥಾನ್ನಲ್ಲಿ 12 ಸಾವಿರ ಓಟಗಾರರು ಭಾಗವಹಿಸಿದರು.</p>.<p>3ಕೆ, 5ಕೆ ಮತ್ತು 10ಕೆ ಎಂಬ ಮೂರು ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆನರಾ ಮ್ಯಾರಥಾನ್ನಲ್ಲಿ 3 ವರ್ಷದ ಮಗುವಿನಿಂದ ಹಿಡಿದು 97 ವರ್ಷದ ವೃದ್ಧರವರೆಗೆ ಭಾಗವಹಿಸಿದ್ದರು.</p>.<p>ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಕೆ. ಸತ್ಯನಾರಾಯಣ ರಾಜು, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಓಟಕ್ಕೆ ಚಾಲನೆ ನೀಡಿದರು. 10 ಕೆ ಓಟದ ಪುರುಷರ ವಿಭಾಗದಲ್ಲಿ ಧರ್ಮೇಂದ್ರ ಪೂರ್ಣಿಯಾ, ಮಹಿಳೆಯರ ವಿಭಾಗದಲ್ಲಿ ಕವಿತಾ ಯಾದವ್ ಪ್ರಥಮ ಸ್ಥಾನ ಪಡೆದರು. 5 ಕೆ ಪುರುಷ, ಮಹಿಳಾ ವಿಭಾಗದಲ್ಲಿ ಕ್ರಮವಾಗಿ ಜಯೇಶ್ ಪಾಟೀಲ್ ಮತ್ತು ಚಂದಾ ಅಗ್ರ ಸ್ಥಾನವನ್ನು ಪಡೆದರು.</p>.<p>10 ಕೆ ವಿಭಾಗದ ವಿಜೇತರಿಗೆ ₹ 2 ಲಕ್ಷ, ದ್ವಿತೀಯ ಸ್ಥಾನ ಪಡೆದವರಿಗೆ ₹ 1 ಲಕ್ಷ, 5 ಕೆ ವಿಜೇತರಿಗೆ ₹ 1 ಲಕ್ಷ, ದ್ವಿತೀಯ ಸ್ಥಾನ ಪಡೆದವರಿಗೆ ₹ 50 ಸಾವಿರ ನೀಡಿ ಗೌರವಿಸಲಾಯಿತು. ಅಲ್ಲದೇ ವಿವಿಧ ಸ್ಥಾನಗಳನ್ನು ಪಡೆದವರಿಗೆ ಬಹುಮಾನ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಗರದ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕೆನರಾ ಬ್ಯಾಂಕ್ನ ವಾರ್ಷಿಕ ಮ್ಯಾರಥಾನ್ನಲ್ಲಿ 12 ಸಾವಿರ ಓಟಗಾರರು ಭಾಗವಹಿಸಿದರು.</p>.<p>3ಕೆ, 5ಕೆ ಮತ್ತು 10ಕೆ ಎಂಬ ಮೂರು ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆನರಾ ಮ್ಯಾರಥಾನ್ನಲ್ಲಿ 3 ವರ್ಷದ ಮಗುವಿನಿಂದ ಹಿಡಿದು 97 ವರ್ಷದ ವೃದ್ಧರವರೆಗೆ ಭಾಗವಹಿಸಿದ್ದರು.</p>.<p>ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಕೆ. ಸತ್ಯನಾರಾಯಣ ರಾಜು, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಓಟಕ್ಕೆ ಚಾಲನೆ ನೀಡಿದರು. 10 ಕೆ ಓಟದ ಪುರುಷರ ವಿಭಾಗದಲ್ಲಿ ಧರ್ಮೇಂದ್ರ ಪೂರ್ಣಿಯಾ, ಮಹಿಳೆಯರ ವಿಭಾಗದಲ್ಲಿ ಕವಿತಾ ಯಾದವ್ ಪ್ರಥಮ ಸ್ಥಾನ ಪಡೆದರು. 5 ಕೆ ಪುರುಷ, ಮಹಿಳಾ ವಿಭಾಗದಲ್ಲಿ ಕ್ರಮವಾಗಿ ಜಯೇಶ್ ಪಾಟೀಲ್ ಮತ್ತು ಚಂದಾ ಅಗ್ರ ಸ್ಥಾನವನ್ನು ಪಡೆದರು.</p>.<p>10 ಕೆ ವಿಭಾಗದ ವಿಜೇತರಿಗೆ ₹ 2 ಲಕ್ಷ, ದ್ವಿತೀಯ ಸ್ಥಾನ ಪಡೆದವರಿಗೆ ₹ 1 ಲಕ್ಷ, 5 ಕೆ ವಿಜೇತರಿಗೆ ₹ 1 ಲಕ್ಷ, ದ್ವಿತೀಯ ಸ್ಥಾನ ಪಡೆದವರಿಗೆ ₹ 50 ಸಾವಿರ ನೀಡಿ ಗೌರವಿಸಲಾಯಿತು. ಅಲ್ಲದೇ ವಿವಿಧ ಸ್ಥಾನಗಳನ್ನು ಪಡೆದವರಿಗೆ ಬಹುಮಾನ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>