<p><strong>ಗಾಂಧಿ ಸ್ಮೃತಿ ಸಂಗೀತೋತ್ಸವ</strong></p>.<p>ಬೆಂಗಳೂರು: ನಗರದ ಸ್ವರ ಫೌಂಡೇಷನ್ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಅ.3ರ ಸಂಜೆ 5 ಗಂಟೆಗೆ ‘ಗಾಂಧಿ ಸ್ಮೃತಿ’ ಸಂಗೀತೋತ್ಸವ ಹಮ್ಮಿಕೊಂಡಿದೆ.</p>.<p>ಕಲಾವಿದರಾದ ಪ್ರವೀಣ್ ಗೋಡ್ಖಿಂಡಿ, ರವೀಂದ್ರ ಯಾವಗಲ್, ಮುದ್ದುಮೋಹನ್, ವಿಶ್ವನಾಥ ನಾಕೋಡ್, ವ್ಯಾಸಮೂರ್ತಿ ಕಟ್ಟಿ, ರಾಜೇಂದ್ರ ನಾಕೋಡ್, ಪಂಚಾಕ್ಷರಿ ಹಿರೇಮಠ, ಪ್ರದ್ಯುಮ್ನ ಕರ್ಪೂರ, ವೈಶಾಲಿ ಅವರು ಕಾರ್ಯಕ್ರಮದಲ್ಲಿ ಗಾಂಧೀಜಿ ಅವರಿಗೆ ಸಂಗೀತ ನಮನ ಸಲ್ಲಿಸುತ್ತಾರೆ.</p>.<p>ಸಂಗೀತೋತ್ಸವಕ್ಕೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ಚಾಲನೆ ನೀಡುತ್ತಾರೆ. ನಿವೃತ್ತ ಐಎಎಸ್ ಅಧಿಕಾರಿಗಳಾದ ಚಿರಂಜೀವ್ ಸಿಂಘ್, ಕೆ.ಜೈರಾಜ್, ಶಿವಯೋಗಿ ಕಳಸದ ಅವರು ಅತಿಥಿಗಳಾಗಿ ಭಾಗವಹಿಸುತ್ತಾರೆ. ಎಲ್ಲರಿಗೂ ಪ್ರವೇಶ ಉಚಿತ ಎಂದು ಪ್ರಕಟಣೆ ತಿಳಿಸಿದೆ.</p>.<p><strong>ಗಾಂಧಿ ವ್ಯಂಗ್ಯಚಿತ್ರ ಪ್ರದರ್ಶನ</strong></p>.<p>ಬೆಂಗಳೂರು: ಕರ್ನಾಟಕ ಗಾಂಧಿ ಸ್ಮಾರಕ ನಿಧಿಯು 75ನೇ ವಾರ್ಷಿಕೋತ್ಸವ ಆಚರಣೆಯ ಅಂಗವಾಗಿ ಅ.4ರಿಂದ ಅ.31ರವರೆಗೆ ಎಂ.ಜಿ ರಸ್ತೆಯಲ್ಲಿರುವ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯಲ್ಲಿ ‘ಗಾಂಧಿ’ ವ್ಯಂಗ್ಯಚಿತ್ರ ಪ್ರದರ್ಶನ ಹಮ್ಮಿಕೊಂಡಿದೆ.</p>.<p>ಭಾನುವಾರ ಮತ್ತು ಸಾರ್ವಜನಿಕ ರಜಾ ದಿನ ಹೊರತುಪಡಿಸಿ, ಉಳಿದ ದಿನಗಳು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಈ ಪ್ರದರ್ಶನ ನಡೆಯಲಿದೆ. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ ಅವರು ಈ ಪ್ರದರ್ಶನ ಉದ್ಘಾಟಿಸುತ್ತಾರೆ. </p>.<p>ಈ ಪ್ರದರ್ಶನದಲ್ಲಿ 23 ದೇಶಗಳ 110 ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಪ್ರವೇಶ ಉಚಿತ ಎಂದು ಪ್ರಕಟಣೆ ತಿಳಿಸಿದೆ.</p>.<p><strong>‘ಧ್ವನಿ’ ಸಂಗೀತ ಉತ್ಸವ</strong></p>.<p>ಬೆಂಗಳೂರು: ಬೆಂಗಳೂರು ಕಿಡ್ನಿ ಫೌಂಡೇಷನ್ ಅ.4 ಮತ್ತು ಅ.5ರಂದು ಕೆ.ಆರ್. ರಸ್ತೆಯಲ್ಲಿರುವ ಬೆಂಗಳೂರು ಗಾಯನ ಸಮಾಜದಲ್ಲಿ ‘ಧ್ವನಿ–ಬಿಕೆಎಫ್ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಹಿಂದೂಸ್ತಾನಿ ಸಂಗೀತ ಉತ್ಸವ’ ಹಮ್ಮಿಕೊಂಡಿದೆ. </p>.<p>ಈ ಕಾರ್ಯಕ್ರಮದಿಂದ ಬರುವ ಆದಾಯವನ್ನು ಗ್ರಾಮೀಣ ಭಾಗದ ರೋಗಿಗಳ ಡಯಾಲಿಸಿಸ್ ಸೇವೆಗೆ ಒಳಸಿಕೊಳ್ಳಲಾಗುತ್ತದೆ. ಶನಿವಾರ ಸಂಜೆ 5 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಅಂದು ಎರಡು ಸಂಗೀತ ಕಛೇರಿ ನಡೆಯಲಿದೆ. ಭಾನುವಾರ ಬೆಳಿಗ್ಗೆ 9.30ರಿಂದ ಇಡೀ ದಿನ ಸಂಗೀತ ಕಾರ್ಯಕ್ರಮ ನಡೆಯಲಿದೆ. </p>.<p>ಎರಡು ದಿನಗಳ ಈ ಉತ್ಸವದಲ್ಲಿ ಶಿವಕುಮಾರ್ ಶರ್ಮಾ, ಎನ್. ರಾಜಂ, ಕಿಶೋರ್ ಅಮೋನ್ಕರ್, ವೆಂಕಟೇಶ್ ಕುಮಾರ್, ವಿಶ್ವಮೋಹನ್ ಭಟ್, ರಶೀದ್ ಖಾನ್, ಗಣಪತಿ ಭಟ್, ಜಯಶ್ರೀ ಪಟ್ನೇಕರ್ ಸೇರಿ ಹೆಸರಾಂತ ಕಲಾವಿದರು ಪಾಲ್ಗೊಳ್ಳುತ್ತಾರೆ ಎಂದು ಪ್ರಕಟಣೆ ತಿಳಿಸಿದೆ. </p>.<p>ವಿವರಕ್ಕೆ: 080 26614848 ಅಥವಾ 9901788354</p>.<p><strong>ನೃತ್ಯ ರೂಪಕ ಪ್ರದರ್ಶನ</strong></p>.<p>ಬೆಂಗಳೂರು: ಗೋಬ್ರಹ್ಮ ಪ್ರೊಡಕ್ಷನ್ಸ್ ಮತ್ತು ಶಿವಪ್ರಿಯಾ ಸ್ಕೂಲ್ ಆಫ್ ಡಾನ್ಸ್ ಜಂಟಿಯಾಗಿ ‘ಚಂದ್ರಲೇಖಾ–ದಿ ಲಾಸ್ಟ್ ಕೋರ್ಟಿಸಾನ್’ ಶೀರ್ಷಿಕೆಯಡಿ ಅ.4 ರಂದು ಮಧ್ಯಾಹ್ನ 3 ಮತ್ತು ಸಂಜೆ 7 ಗಂಟೆಗೆ ಮಲ್ಲೇಶ್ವರದಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ನೃತ್ಯ ರೂಪಕ ಹಮ್ಮಿಕೊಂಡಿದೆ. </p>.<p>ಪ್ರದರ್ಶನದಲ್ಲಿ ತರಬೇತಿ ಪಡೆದ 80ಕ್ಕೂ ಹೆಚ್ಚು ನೃತ್ಯ ಕಲಾವಿದರು, ಭರತನಾಟ್ಯ, ಕೂಚಿಪುಡಿ, ಕಥಕ್ ಮತ್ತು ಒಡಿಸ್ಸಿ ನೃತ್ಯ ಪ್ರಕಾರಗಳನ್ನು ಸಂಗೀತ ಮತ್ತು ನಾಟಕದೊಂದಿಗೆ ಸಂಯೋಜಿಸಿದ್ದಾರೆ. ಸಂಜಯ್ ಶಾಂತಾರಾಮ್ ಅವರು ಈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಪ್ರವೀಣ್ ಡಿ. ರಾವ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಟಿಕೆಟ್ಗಳು ಬುಕ್ ಮೈ ಶೋ ದಲ್ಲಿ ಲಭ್ಯ ಎಂದು ಪ್ರಕಟಣೆ ತಿಳಿಸಿದೆ.</p>.<p>‘ಸಾಂಸ್ಕೃತಿಕ ಮುನ್ನೋಟ’ ಅಂಕಣದಲ್ಲಿ ಪ್ರಕಟಿಸಲು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿವರಗಳನ್ನು ಈ ಕೆಳಗಿನ ಇ–ಮೇಲ್ಗೆ (ಬುಧವಾರ ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p>nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಾಂಧಿ ಸ್ಮೃತಿ ಸಂಗೀತೋತ್ಸವ</strong></p>.<p>ಬೆಂಗಳೂರು: ನಗರದ ಸ್ವರ ಫೌಂಡೇಷನ್ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಅ.3ರ ಸಂಜೆ 5 ಗಂಟೆಗೆ ‘ಗಾಂಧಿ ಸ್ಮೃತಿ’ ಸಂಗೀತೋತ್ಸವ ಹಮ್ಮಿಕೊಂಡಿದೆ.</p>.<p>ಕಲಾವಿದರಾದ ಪ್ರವೀಣ್ ಗೋಡ್ಖಿಂಡಿ, ರವೀಂದ್ರ ಯಾವಗಲ್, ಮುದ್ದುಮೋಹನ್, ವಿಶ್ವನಾಥ ನಾಕೋಡ್, ವ್ಯಾಸಮೂರ್ತಿ ಕಟ್ಟಿ, ರಾಜೇಂದ್ರ ನಾಕೋಡ್, ಪಂಚಾಕ್ಷರಿ ಹಿರೇಮಠ, ಪ್ರದ್ಯುಮ್ನ ಕರ್ಪೂರ, ವೈಶಾಲಿ ಅವರು ಕಾರ್ಯಕ್ರಮದಲ್ಲಿ ಗಾಂಧೀಜಿ ಅವರಿಗೆ ಸಂಗೀತ ನಮನ ಸಲ್ಲಿಸುತ್ತಾರೆ.</p>.<p>ಸಂಗೀತೋತ್ಸವಕ್ಕೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ಚಾಲನೆ ನೀಡುತ್ತಾರೆ. ನಿವೃತ್ತ ಐಎಎಸ್ ಅಧಿಕಾರಿಗಳಾದ ಚಿರಂಜೀವ್ ಸಿಂಘ್, ಕೆ.ಜೈರಾಜ್, ಶಿವಯೋಗಿ ಕಳಸದ ಅವರು ಅತಿಥಿಗಳಾಗಿ ಭಾಗವಹಿಸುತ್ತಾರೆ. ಎಲ್ಲರಿಗೂ ಪ್ರವೇಶ ಉಚಿತ ಎಂದು ಪ್ರಕಟಣೆ ತಿಳಿಸಿದೆ.</p>.<p><strong>ಗಾಂಧಿ ವ್ಯಂಗ್ಯಚಿತ್ರ ಪ್ರದರ್ಶನ</strong></p>.<p>ಬೆಂಗಳೂರು: ಕರ್ನಾಟಕ ಗಾಂಧಿ ಸ್ಮಾರಕ ನಿಧಿಯು 75ನೇ ವಾರ್ಷಿಕೋತ್ಸವ ಆಚರಣೆಯ ಅಂಗವಾಗಿ ಅ.4ರಿಂದ ಅ.31ರವರೆಗೆ ಎಂ.ಜಿ ರಸ್ತೆಯಲ್ಲಿರುವ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯಲ್ಲಿ ‘ಗಾಂಧಿ’ ವ್ಯಂಗ್ಯಚಿತ್ರ ಪ್ರದರ್ಶನ ಹಮ್ಮಿಕೊಂಡಿದೆ.</p>.<p>ಭಾನುವಾರ ಮತ್ತು ಸಾರ್ವಜನಿಕ ರಜಾ ದಿನ ಹೊರತುಪಡಿಸಿ, ಉಳಿದ ದಿನಗಳು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಈ ಪ್ರದರ್ಶನ ನಡೆಯಲಿದೆ. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ ಅವರು ಈ ಪ್ರದರ್ಶನ ಉದ್ಘಾಟಿಸುತ್ತಾರೆ. </p>.<p>ಈ ಪ್ರದರ್ಶನದಲ್ಲಿ 23 ದೇಶಗಳ 110 ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಪ್ರವೇಶ ಉಚಿತ ಎಂದು ಪ್ರಕಟಣೆ ತಿಳಿಸಿದೆ.</p>.<p><strong>‘ಧ್ವನಿ’ ಸಂಗೀತ ಉತ್ಸವ</strong></p>.<p>ಬೆಂಗಳೂರು: ಬೆಂಗಳೂರು ಕಿಡ್ನಿ ಫೌಂಡೇಷನ್ ಅ.4 ಮತ್ತು ಅ.5ರಂದು ಕೆ.ಆರ್. ರಸ್ತೆಯಲ್ಲಿರುವ ಬೆಂಗಳೂರು ಗಾಯನ ಸಮಾಜದಲ್ಲಿ ‘ಧ್ವನಿ–ಬಿಕೆಎಫ್ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಹಿಂದೂಸ್ತಾನಿ ಸಂಗೀತ ಉತ್ಸವ’ ಹಮ್ಮಿಕೊಂಡಿದೆ. </p>.<p>ಈ ಕಾರ್ಯಕ್ರಮದಿಂದ ಬರುವ ಆದಾಯವನ್ನು ಗ್ರಾಮೀಣ ಭಾಗದ ರೋಗಿಗಳ ಡಯಾಲಿಸಿಸ್ ಸೇವೆಗೆ ಒಳಸಿಕೊಳ್ಳಲಾಗುತ್ತದೆ. ಶನಿವಾರ ಸಂಜೆ 5 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಅಂದು ಎರಡು ಸಂಗೀತ ಕಛೇರಿ ನಡೆಯಲಿದೆ. ಭಾನುವಾರ ಬೆಳಿಗ್ಗೆ 9.30ರಿಂದ ಇಡೀ ದಿನ ಸಂಗೀತ ಕಾರ್ಯಕ್ರಮ ನಡೆಯಲಿದೆ. </p>.<p>ಎರಡು ದಿನಗಳ ಈ ಉತ್ಸವದಲ್ಲಿ ಶಿವಕುಮಾರ್ ಶರ್ಮಾ, ಎನ್. ರಾಜಂ, ಕಿಶೋರ್ ಅಮೋನ್ಕರ್, ವೆಂಕಟೇಶ್ ಕುಮಾರ್, ವಿಶ್ವಮೋಹನ್ ಭಟ್, ರಶೀದ್ ಖಾನ್, ಗಣಪತಿ ಭಟ್, ಜಯಶ್ರೀ ಪಟ್ನೇಕರ್ ಸೇರಿ ಹೆಸರಾಂತ ಕಲಾವಿದರು ಪಾಲ್ಗೊಳ್ಳುತ್ತಾರೆ ಎಂದು ಪ್ರಕಟಣೆ ತಿಳಿಸಿದೆ. </p>.<p>ವಿವರಕ್ಕೆ: 080 26614848 ಅಥವಾ 9901788354</p>.<p><strong>ನೃತ್ಯ ರೂಪಕ ಪ್ರದರ್ಶನ</strong></p>.<p>ಬೆಂಗಳೂರು: ಗೋಬ್ರಹ್ಮ ಪ್ರೊಡಕ್ಷನ್ಸ್ ಮತ್ತು ಶಿವಪ್ರಿಯಾ ಸ್ಕೂಲ್ ಆಫ್ ಡಾನ್ಸ್ ಜಂಟಿಯಾಗಿ ‘ಚಂದ್ರಲೇಖಾ–ದಿ ಲಾಸ್ಟ್ ಕೋರ್ಟಿಸಾನ್’ ಶೀರ್ಷಿಕೆಯಡಿ ಅ.4 ರಂದು ಮಧ್ಯಾಹ್ನ 3 ಮತ್ತು ಸಂಜೆ 7 ಗಂಟೆಗೆ ಮಲ್ಲೇಶ್ವರದಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ನೃತ್ಯ ರೂಪಕ ಹಮ್ಮಿಕೊಂಡಿದೆ. </p>.<p>ಪ್ರದರ್ಶನದಲ್ಲಿ ತರಬೇತಿ ಪಡೆದ 80ಕ್ಕೂ ಹೆಚ್ಚು ನೃತ್ಯ ಕಲಾವಿದರು, ಭರತನಾಟ್ಯ, ಕೂಚಿಪುಡಿ, ಕಥಕ್ ಮತ್ತು ಒಡಿಸ್ಸಿ ನೃತ್ಯ ಪ್ರಕಾರಗಳನ್ನು ಸಂಗೀತ ಮತ್ತು ನಾಟಕದೊಂದಿಗೆ ಸಂಯೋಜಿಸಿದ್ದಾರೆ. ಸಂಜಯ್ ಶಾಂತಾರಾಮ್ ಅವರು ಈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಪ್ರವೀಣ್ ಡಿ. ರಾವ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಟಿಕೆಟ್ಗಳು ಬುಕ್ ಮೈ ಶೋ ದಲ್ಲಿ ಲಭ್ಯ ಎಂದು ಪ್ರಕಟಣೆ ತಿಳಿಸಿದೆ.</p>.<p>‘ಸಾಂಸ್ಕೃತಿಕ ಮುನ್ನೋಟ’ ಅಂಕಣದಲ್ಲಿ ಪ್ರಕಟಿಸಲು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿವರಗಳನ್ನು ಈ ಕೆಳಗಿನ ಇ–ಮೇಲ್ಗೆ (ಬುಧವಾರ ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p>nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>