<p><strong>ಬೆಂಗಳೂರು:</strong> ‘ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹಾಗೂ ಇತರೆಡೆ, ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಉತ್ತರ ಕಾಸರಗೋಡು ಪ್ರದೇಶದಲ್ಲಿ ಗೌಡ ಸಮುದಾಯದವರ ಆಡುಭಾಷೆಯಾಗಿರುವ ಅರೆಭಾಷೆ ಕೆಲವೆಡೆ ಪ್ರಾದೇಶಿಕ ಭಾಷೆಯಾಗಿಯೂ ಬೆಳೆದಿದೆ’ ಎಂದು ವಿದ್ವಾಂಸ ಸೀತಾರಾಮ ಕೇವಳ ಹೇಳಿದರು.</p>.<p>ಭಾನುವಾರ ಅರೆಭಾಷೆ ಕುರಿತು ವರ್ಚುವಲ್ ಆಗಿ ಹಮ್ಮಿಕೊಂಡಿದ್ದ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಳ್ಯ ಪ್ರದೇಶದಲ್ಲಿ ಮುಸ್ಲಿಂ, ಕ್ರೈಸ್ತ ಮತ್ತು ಬಂಟ ಸಮುದಾಯದವರಿಗೂ ಅರೆಭಾಷೆ ಗೊತ್ತಿದೆ. ವ್ಯವಹಾರಿಕವಾಗಿ ಅವರು ಈ ಭಾಷೆಯನ್ನೂ ಬಳಸುತ್ತಿದ್ದಾರೆ. ಭಾಷೆಯ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆ’ ಎಂದರು.</p>.<p>‘ಕನ್ನಡದಲ್ಲಿ ಅರೆಭಾಷೆ ಅಂದರೆ ಅರ್ಧ ಭಾಷೆ ಎಂದರ್ಥ. ಸಂವಹನದ ಸಂದರ್ಭದಲ್ಲಿ ಬಳಸುವಕನ್ನಡ ಪದದ ಅರ್ಧ ಪದವನ್ನು ಮಾತ್ರ ಅರೆಭಾಷೆಯಲ್ಲಿ ಬಳಸಲಾಗುತ್ತಿದೆ. ಈ ಭಾಷೆಯು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ಇದಕ್ಕೆ ಲಿಪಿ ಇಲ್ಲದ ಕಾರಣ ಕನ್ನಡವನ್ನೇ ಬಳಸುತ್ತಾರೆ’ ಎಂದು ವಿವರಿಸಿದರು.</p>.<p>‘ಅರೆ ಭಾಷೆಯ ನಿಘಂಟು ರಚನೆಯ ಕೆಲಸ ನಡೆಯುತ್ತಿದ್ದು, ಈಗಾಗಲೇ 16,000ಕ್ಕೂ ಹೆಚ್ಚು ಪದಗಳನ್ನು ಸಂಗ್ರಹಿಸಲಾಗಿದೆ’ ಎಂದು ವಿದ್ವಾಂಸ ಡಾ.ವಿಶ್ವನಾಥ ಬದಿಕಾನ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹಾಗೂ ಇತರೆಡೆ, ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಉತ್ತರ ಕಾಸರಗೋಡು ಪ್ರದೇಶದಲ್ಲಿ ಗೌಡ ಸಮುದಾಯದವರ ಆಡುಭಾಷೆಯಾಗಿರುವ ಅರೆಭಾಷೆ ಕೆಲವೆಡೆ ಪ್ರಾದೇಶಿಕ ಭಾಷೆಯಾಗಿಯೂ ಬೆಳೆದಿದೆ’ ಎಂದು ವಿದ್ವಾಂಸ ಸೀತಾರಾಮ ಕೇವಳ ಹೇಳಿದರು.</p>.<p>ಭಾನುವಾರ ಅರೆಭಾಷೆ ಕುರಿತು ವರ್ಚುವಲ್ ಆಗಿ ಹಮ್ಮಿಕೊಂಡಿದ್ದ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಳ್ಯ ಪ್ರದೇಶದಲ್ಲಿ ಮುಸ್ಲಿಂ, ಕ್ರೈಸ್ತ ಮತ್ತು ಬಂಟ ಸಮುದಾಯದವರಿಗೂ ಅರೆಭಾಷೆ ಗೊತ್ತಿದೆ. ವ್ಯವಹಾರಿಕವಾಗಿ ಅವರು ಈ ಭಾಷೆಯನ್ನೂ ಬಳಸುತ್ತಿದ್ದಾರೆ. ಭಾಷೆಯ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆ’ ಎಂದರು.</p>.<p>‘ಕನ್ನಡದಲ್ಲಿ ಅರೆಭಾಷೆ ಅಂದರೆ ಅರ್ಧ ಭಾಷೆ ಎಂದರ್ಥ. ಸಂವಹನದ ಸಂದರ್ಭದಲ್ಲಿ ಬಳಸುವಕನ್ನಡ ಪದದ ಅರ್ಧ ಪದವನ್ನು ಮಾತ್ರ ಅರೆಭಾಷೆಯಲ್ಲಿ ಬಳಸಲಾಗುತ್ತಿದೆ. ಈ ಭಾಷೆಯು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ಇದಕ್ಕೆ ಲಿಪಿ ಇಲ್ಲದ ಕಾರಣ ಕನ್ನಡವನ್ನೇ ಬಳಸುತ್ತಾರೆ’ ಎಂದು ವಿವರಿಸಿದರು.</p>.<p>‘ಅರೆ ಭಾಷೆಯ ನಿಘಂಟು ರಚನೆಯ ಕೆಲಸ ನಡೆಯುತ್ತಿದ್ದು, ಈಗಾಗಲೇ 16,000ಕ್ಕೂ ಹೆಚ್ಚು ಪದಗಳನ್ನು ಸಂಗ್ರಹಿಸಲಾಗಿದೆ’ ಎಂದು ವಿದ್ವಾಂಸ ಡಾ.ವಿಶ್ವನಾಥ ಬದಿಕಾನ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>