<p>‘ಏನ್ರಲೆ ಇವತ್ತಿನ ಹೊಸ ಸುದ್ದಿ? ಬಾಂಬ್ ಬಿಟ್ಟು ಬೇರೆ ಏನರೆ ಹೇಳ್ರಿ...’ ಹರಟೆಕಟ್ಟೆಯಲ್ಲಿ ದುಬ್ಬೀರ ತಾಕೀತು ಮಾಡಿದ.</p>.<p>‘ನಮಗೆ ಪ್ರತ್ಯೇಕ ರಾಜ್ಯ ಬೇಕು’ ಎಂದ ಪರ್ಮೇಶಿ.</p>.<p>‘ಕೊಡೋಣ ಬಿಡು, ಬೇರೆ ಏನು?’</p>.<p>‘ತಮ್ಮನ್ನ ಮಂತ್ರಿ ಮಾಡು ಅಂತ ಎಮ್ಮೆಲ್ಲೆಗಳು ಖರ್ಗೆ ಸಾಹೇಬ್ರ ಮನಿ ಬಾಗಿಲು ಬಡೀತದಾರಂತೆ...’ ತೆಪರೇಸಿ ಹೇಳಿದ.</p>.<p>‘ಬಾಗಿಲು ಬಡಿದರೆ ಮಂತ್ರಿ, ಒದ್ದರೆ ಮುಖ್ಯಮಂತ್ರಿ!’ ಗುಡ್ಡೆ ನಕ್ಕ.</p>.<p>‘ಕರೆಕ್ಟ್... ಆಮೇಲೆ ಇವತ್ತು ಬಿಹಾರ ಎಲೆಕ್ಷನ್ ಕೌಂಟಿಂಗು. ಯಾರು ಗೆಲ್ಲಬೋದು?’ ಕೊಟ್ರೇಶಿ ಕೇಳಿದ.</p>.<p>‘ಎಕ್ಸಿಟ್ ಫೈಲ್ ಆಗ್ಲೇ ಹೇಳೇತಲ್ಲ, ಮತ್ತೇನು?’ ಮಂಜಮ್ಮನ ಮುಖದಲ್ಲಿ ಖುಷಿ.</p>.<p>‘ನಿನ್ತೆಲಿ, ಅದು ಫೈಲ್ ಅಲ್ಲ ಪೋಲ್... ನಮ್ಗೆ ಎಕ್ಸಿಟ್ ಪೋಲ್ ಬ್ಯಾಡ, ಎಗ್ಜಾಕ್ಟ್ ಪೋಲ್ ಬೇಕು...’ ಎಂದ ದುಬ್ಬೀರ.</p>.<p>‘ಅಲ್ಲ, ಈ ಎಕ್ಸಿಟ್ ಪೋಲ್ನಲ್ಲೂ ಮತ ಕಳವು ಮಾಡಬೋದಾ?’ ಕೊಟ್ರೇಶಿ ಕೊಕ್ಕೆ.</p>.<p>‘ಅಲೆ ಇವ್ನ, ಕರೆಕ್ಟ್... ಇದ್ರ ಬಗ್ಗೆ ರಾಹುಲ್ ಗಾಂಧಿ ಯಾಕೆ ಇನ್ನೂ ಬಾಂಬ್ ಹಾಕಿಲ್ಲ?’</p>.<p>‘ಪಾಪ, ಬ್ಯುಸಿ ಅನ್ಸುತ್ತೆ. ಅದಿರ್ಲಿ, ನಮ್ಗೆ ಈಗ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು, ಅದರ ಬಗ್ಗೆ ಮಾತಾಡ್ರಿ’ ಎಂದ ಪರ್ಮೇಶಿ.</p>.<p>‘ಅದ್ಯಾಕೆ, ಎಲ್ರು ಒಂದೊಂದು ರಾಜ್ಯ ಮಾಡ್ಕಂಬಿಡಿ... ಉತ್ತರ ಕರ್ನಾಟಕ, ಮೈಸೂರು ಕರ್ನಾಟಕ, ಹೈದರಾಬಾದ್ ಕರ್ನಾಟಕ ಅಂತ ಚಾಣ ಛಿದ್ರ ಮಾಡಿ ಒಡೆದಾಕ್ರಿ ಅತ್ಲಾಗೆ...’ ಮಂಜಮ್ಮಗೆ ಸಿಟ್ಟು ಬಂತು.</p>.<p>‘ಮಧ್ಯ ಕರ್ನಾಟಕ ಯಾಕೆ ಬಿಟ್ಟೆ? ಅದ್ನೂ ಮಾಡ್ರಿ, ನಾವು ದಾವಣಗೆರೆ ರಾಜಧಾನಿ ಮಾಡ್ಕಂತೀವಿ...’ ಎಂದ ತೆಪರೇಸಿ.</p>.<p>‘ನಿಂಗ್ಯಾವ ರಾಜ್ಯ ಬೇಕೋ ಗುಡ್ಡೆ?’ ದುಬ್ಬೀರ ಕೇಳಿದ.</p>.<p>‘ನಂಗೆ ‘ಮದ್ಯ’ ಕರ್ನಾಟಕ ಬೇಕು, ಕೊಡಿಸ್ತೀಯ?’ ಗುಡ್ಡೆ ನಕ್ಕ.</p>.<p>‘ಅಂದ್ರೆ ಎಣ್ಣೆ? ಥು ನಿನ್ ಜನ್ಮಕ್ಕೆ...’ ಎಂದಳು ಮಂಜಮ್ಮ. ಎಲ್ಲರೂ ಗೊಳ್ಳಂತ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಏನ್ರಲೆ ಇವತ್ತಿನ ಹೊಸ ಸುದ್ದಿ? ಬಾಂಬ್ ಬಿಟ್ಟು ಬೇರೆ ಏನರೆ ಹೇಳ್ರಿ...’ ಹರಟೆಕಟ್ಟೆಯಲ್ಲಿ ದುಬ್ಬೀರ ತಾಕೀತು ಮಾಡಿದ.</p>.<p>‘ನಮಗೆ ಪ್ರತ್ಯೇಕ ರಾಜ್ಯ ಬೇಕು’ ಎಂದ ಪರ್ಮೇಶಿ.</p>.<p>‘ಕೊಡೋಣ ಬಿಡು, ಬೇರೆ ಏನು?’</p>.<p>‘ತಮ್ಮನ್ನ ಮಂತ್ರಿ ಮಾಡು ಅಂತ ಎಮ್ಮೆಲ್ಲೆಗಳು ಖರ್ಗೆ ಸಾಹೇಬ್ರ ಮನಿ ಬಾಗಿಲು ಬಡೀತದಾರಂತೆ...’ ತೆಪರೇಸಿ ಹೇಳಿದ.</p>.<p>‘ಬಾಗಿಲು ಬಡಿದರೆ ಮಂತ್ರಿ, ಒದ್ದರೆ ಮುಖ್ಯಮಂತ್ರಿ!’ ಗುಡ್ಡೆ ನಕ್ಕ.</p>.<p>‘ಕರೆಕ್ಟ್... ಆಮೇಲೆ ಇವತ್ತು ಬಿಹಾರ ಎಲೆಕ್ಷನ್ ಕೌಂಟಿಂಗು. ಯಾರು ಗೆಲ್ಲಬೋದು?’ ಕೊಟ್ರೇಶಿ ಕೇಳಿದ.</p>.<p>‘ಎಕ್ಸಿಟ್ ಫೈಲ್ ಆಗ್ಲೇ ಹೇಳೇತಲ್ಲ, ಮತ್ತೇನು?’ ಮಂಜಮ್ಮನ ಮುಖದಲ್ಲಿ ಖುಷಿ.</p>.<p>‘ನಿನ್ತೆಲಿ, ಅದು ಫೈಲ್ ಅಲ್ಲ ಪೋಲ್... ನಮ್ಗೆ ಎಕ್ಸಿಟ್ ಪೋಲ್ ಬ್ಯಾಡ, ಎಗ್ಜಾಕ್ಟ್ ಪೋಲ್ ಬೇಕು...’ ಎಂದ ದುಬ್ಬೀರ.</p>.<p>‘ಅಲ್ಲ, ಈ ಎಕ್ಸಿಟ್ ಪೋಲ್ನಲ್ಲೂ ಮತ ಕಳವು ಮಾಡಬೋದಾ?’ ಕೊಟ್ರೇಶಿ ಕೊಕ್ಕೆ.</p>.<p>‘ಅಲೆ ಇವ್ನ, ಕರೆಕ್ಟ್... ಇದ್ರ ಬಗ್ಗೆ ರಾಹುಲ್ ಗಾಂಧಿ ಯಾಕೆ ಇನ್ನೂ ಬಾಂಬ್ ಹಾಕಿಲ್ಲ?’</p>.<p>‘ಪಾಪ, ಬ್ಯುಸಿ ಅನ್ಸುತ್ತೆ. ಅದಿರ್ಲಿ, ನಮ್ಗೆ ಈಗ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು, ಅದರ ಬಗ್ಗೆ ಮಾತಾಡ್ರಿ’ ಎಂದ ಪರ್ಮೇಶಿ.</p>.<p>‘ಅದ್ಯಾಕೆ, ಎಲ್ರು ಒಂದೊಂದು ರಾಜ್ಯ ಮಾಡ್ಕಂಬಿಡಿ... ಉತ್ತರ ಕರ್ನಾಟಕ, ಮೈಸೂರು ಕರ್ನಾಟಕ, ಹೈದರಾಬಾದ್ ಕರ್ನಾಟಕ ಅಂತ ಚಾಣ ಛಿದ್ರ ಮಾಡಿ ಒಡೆದಾಕ್ರಿ ಅತ್ಲಾಗೆ...’ ಮಂಜಮ್ಮಗೆ ಸಿಟ್ಟು ಬಂತು.</p>.<p>‘ಮಧ್ಯ ಕರ್ನಾಟಕ ಯಾಕೆ ಬಿಟ್ಟೆ? ಅದ್ನೂ ಮಾಡ್ರಿ, ನಾವು ದಾವಣಗೆರೆ ರಾಜಧಾನಿ ಮಾಡ್ಕಂತೀವಿ...’ ಎಂದ ತೆಪರೇಸಿ.</p>.<p>‘ನಿಂಗ್ಯಾವ ರಾಜ್ಯ ಬೇಕೋ ಗುಡ್ಡೆ?’ ದುಬ್ಬೀರ ಕೇಳಿದ.</p>.<p>‘ನಂಗೆ ‘ಮದ್ಯ’ ಕರ್ನಾಟಕ ಬೇಕು, ಕೊಡಿಸ್ತೀಯ?’ ಗುಡ್ಡೆ ನಕ್ಕ.</p>.<p>‘ಅಂದ್ರೆ ಎಣ್ಣೆ? ಥು ನಿನ್ ಜನ್ಮಕ್ಕೆ...’ ಎಂದಳು ಮಂಜಮ್ಮ. ಎಲ್ಲರೂ ಗೊಳ್ಳಂತ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>