ಬೆಂಗಳೂರು: ಮತ್ತಿಕೆರೆ ಬಸ್ ನಿಲ್ದಾಣ ಬಳಿ ಕಳ್ಳನೊಬ್ಬ ಪಾದಚಾರಿಯಿಂದ ಮೊಬೈಲ್ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದು, ಕಳ್ಳನನ್ನು ಪೊಲೀಸ್ ಸಿಬ್ಬಂದಿ ಬೆನ್ನಟ್ಟಿ ಹಿಡಿದಿದ್ಧಾರೆ.
ಯಶವಂತಪುರ ಸಂಚಾರ ಪೊಲೀಸ್ ಠಾಣಾ ಸಿಬ್ಬಂದಿ ಅನಂತಕುಮಾರ್ ಅವರು ಮತ್ತಿಕೆರೆ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆಗ ಘಟನೆ ನಡೆದಿದ್ದು, ಕಳ್ಳನನ್ನು ಅನಂತಕುಮಾರ್ ಬೆನ್ನಟ್ಟಿ ಹಿಡಿದು ಯಶವಂತಪುರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.