<p><strong>ಬೆಂಗಳೂರು</strong>: ನಕಲಿ ನೋಂದಣಿ ಸಂಖ್ಯೆ ಬಳಸಿದ್ದ ಕಾರಣಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದ ಬೆನ್ಜ್ ಕಾರನ್ನು ₹ 15.75 ಲಕ್ಷಕ್ಕೆ ಹರಾಜು ಮಾಡಲಾಗಿದೆ.</p>.<p>ಮಂಡ್ಯದ ರಾಜುಗೌಡ ಎಂಬುವರು ಏಳು ವರ್ಷಗಳಿಂದ ನಕಲಿ ನೋಂದಣಿ ಸಂಖ್ಯೆ ಬಳಸಿ ಬೆನ್ಜ್ ಕಾರು ಓಡಿಸುತ್ತಿದ್ದರು. ಈ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಯಶವಂತಪುರ ಆರ್ಟಿಒ ಇನ್ಸ್ಪೆಕ್ಟರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಕೆಲ ತಿಂಗಳ ಹಿಂದಷ್ಟೇ ಕಾರು ಜಪ್ತಿ ಮಾಡಿತ್ತು.</p>.<p>ಸೂಕ್ತ ದಾಖಲೆಗಳನ್ನು ಹಾಜರುಪಡಿಸಿ, ತೆರಿಗೆ ಪಾವತಿ ಮಾಡಿ ಕಾರು ಬಿಡಿಸಿಕೊಂಡು ಹೋಗುವಂತೆ ರಾಜುಗೌಡ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಅವರು ನಿಗದಿತ ಅವಧಿಯಲ್ಲಿ ನೋಟಿಸ್ಗೆ ಉತ್ತರ ನೀಡಿಲ್ಲ. ಹೀಗಾಗಿ, ಕಾರನ್ನು ಬುಧವಾರ ಹರಾಜು ಮಾಡಲಾಯಿತು.</p>.<p>’ಬೇರೊಬ್ಬರ ಕಾರಿನ ‘ಕೆಎ 05 ಎಂಡಬ್ಲ್ಯು 6201’ ನೋಂದಣಿ ಸಂಖ್ಯೆಯನ್ನೇ ರಾಜುಗೌಡ ನಕಲು ಮಾಡಿ ತಮ್ಮ ಬೆನ್ಜ್ ಕಾರಿಗೆ ಹಾಕಿಕೊಂಡಿದ್ದರು. ಹೀಗಾಗಿಯೇ ಕಾರು ಜಪ್ತಿ ಮಾಡಲಾಗಿತ್ತು’ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.</p>.<p>‘ಉದ್ಯಮಿ ಅರ್ಜುನ್ ಎಂಬುವರು ಬೆನ್ಜ್ ಕಾರು ಖರೀದಿ ಮಾಡಿದರು’ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಕಲಿ ನೋಂದಣಿ ಸಂಖ್ಯೆ ಬಳಸಿದ್ದ ಕಾರಣಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದ ಬೆನ್ಜ್ ಕಾರನ್ನು ₹ 15.75 ಲಕ್ಷಕ್ಕೆ ಹರಾಜು ಮಾಡಲಾಗಿದೆ.</p>.<p>ಮಂಡ್ಯದ ರಾಜುಗೌಡ ಎಂಬುವರು ಏಳು ವರ್ಷಗಳಿಂದ ನಕಲಿ ನೋಂದಣಿ ಸಂಖ್ಯೆ ಬಳಸಿ ಬೆನ್ಜ್ ಕಾರು ಓಡಿಸುತ್ತಿದ್ದರು. ಈ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಯಶವಂತಪುರ ಆರ್ಟಿಒ ಇನ್ಸ್ಪೆಕ್ಟರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಕೆಲ ತಿಂಗಳ ಹಿಂದಷ್ಟೇ ಕಾರು ಜಪ್ತಿ ಮಾಡಿತ್ತು.</p>.<p>ಸೂಕ್ತ ದಾಖಲೆಗಳನ್ನು ಹಾಜರುಪಡಿಸಿ, ತೆರಿಗೆ ಪಾವತಿ ಮಾಡಿ ಕಾರು ಬಿಡಿಸಿಕೊಂಡು ಹೋಗುವಂತೆ ರಾಜುಗೌಡ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಅವರು ನಿಗದಿತ ಅವಧಿಯಲ್ಲಿ ನೋಟಿಸ್ಗೆ ಉತ್ತರ ನೀಡಿಲ್ಲ. ಹೀಗಾಗಿ, ಕಾರನ್ನು ಬುಧವಾರ ಹರಾಜು ಮಾಡಲಾಯಿತು.</p>.<p>’ಬೇರೊಬ್ಬರ ಕಾರಿನ ‘ಕೆಎ 05 ಎಂಡಬ್ಲ್ಯು 6201’ ನೋಂದಣಿ ಸಂಖ್ಯೆಯನ್ನೇ ರಾಜುಗೌಡ ನಕಲು ಮಾಡಿ ತಮ್ಮ ಬೆನ್ಜ್ ಕಾರಿಗೆ ಹಾಕಿಕೊಂಡಿದ್ದರು. ಹೀಗಾಗಿಯೇ ಕಾರು ಜಪ್ತಿ ಮಾಡಲಾಗಿತ್ತು’ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.</p>.<p>‘ಉದ್ಯಮಿ ಅರ್ಜುನ್ ಎಂಬುವರು ಬೆನ್ಜ್ ಕಾರು ಖರೀದಿ ಮಾಡಿದರು’ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>