ಪ್ರಶಸ್ತಿಯು ₹25 ಸಾವಿರ ನಗದು ಒಳಗೊಂಡಿದೆ. ಕಾದಂಬರಿಕಾರ ಕಾ.ತ. ಚಿಕ್ಕಣ್ಣ, ಕಾದಂಬರಿಗಾರ್ತಿ ಲತಾಗುತ್ತಿ ಅವರು ಈ ಆಯ್ಕೆ ಮಾಡಿದ್ದಾರೆ. ಸ್ಪರ್ಧೆಗೆ 48 ಕಾದಂಬರಿಗಳು ಬಂದಿದ್ದವು. ಅವುಗಳಲ್ಲಿ ಅಂತಿಮ ಮೂರರಲ್ಲಿ ಸುನಂದಮ್ಮ ಅವರ ಕಾದಂಬರಿ ಜತೆಗೆ ಚೀಮನಹಳ್ಳಿ ರಮೇಶ್ ಬಾಬು ಅವರ ‘ಮಂಪರು’ ಕಾದಂಬರಿ ಹಾಗೂ ಗಂಗಪ್ಪ ತಳವಾರ್ ಅವರ ‘ಧಾವತಿ’ ಕಾದಂಬರಿಗಳು ಸ್ಥಾನ ಪಡೆದಿದ್ದವು.