<p><strong>ಬೆಂಗಳೂರು</strong>: ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ ನೀಡುವ 2023ನೇ ಸಾಲಿನ ‘ಅತ್ಯುತ್ತಮ ಕಾದಂಬರಿ ಪ್ರಶಸ್ತಿ’ಗೆ ಲೇಖಕಿ ಆರ್. ಸುನಂದಮ್ಮ ಅವರ ‘ಭರತಕಲ್ಪ’ ಕಾದಂಬರಿ ಆಯ್ಕೆಯಾಗಿದೆ. </p>.<p>ಪ್ರಶಸ್ತಿಯು ₹25 ಸಾವಿರ ನಗದು ಒಳಗೊಂಡಿದೆ. ಕಾದಂಬರಿಕಾರ ಕಾ.ತ. ಚಿಕ್ಕಣ್ಣ, ಕಾದಂಬರಿಗಾರ್ತಿ ಲತಾಗುತ್ತಿ ಅವರು ಈ ಆಯ್ಕೆ ಮಾಡಿದ್ದಾರೆ. ಸ್ಪರ್ಧೆಗೆ 48 ಕಾದಂಬರಿಗಳು ಬಂದಿದ್ದವು. ಅವುಗಳಲ್ಲಿ ಅಂತಿಮ ಮೂರರಲ್ಲಿ ಸುನಂದಮ್ಮ ಅವರ ಕಾದಂಬರಿ ಜತೆಗೆ ಚೀಮನಹಳ್ಳಿ ರಮೇಶ್ ಬಾಬು ಅವರ ‘ಮಂಪರು’ ಕಾದಂಬರಿ ಹಾಗೂ ಗಂಗಪ್ಪ ತಳವಾರ್ ಅವರ ‘ಧಾವತಿ’ ಕಾದಂಬರಿಗಳು ಸ್ಥಾನ ಪಡೆದಿದ್ದವು. </p>.<p>ದ್ವಾರನಕುಂಟೆ ಪಾತಣ್ಣ ಅವರ ಜನ್ಮದಿನವಾದ ಇದೇ 14ರಂದು ಸಂಜೆ 5.30ಕ್ಕೆ ಶೇಷಾದ್ರಿಪುರಂ ಕಾಲೇಜು ದತ್ತಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಂ. ಹನೀಫ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ ನೀಡುವ 2023ನೇ ಸಾಲಿನ ‘ಅತ್ಯುತ್ತಮ ಕಾದಂಬರಿ ಪ್ರಶಸ್ತಿ’ಗೆ ಲೇಖಕಿ ಆರ್. ಸುನಂದಮ್ಮ ಅವರ ‘ಭರತಕಲ್ಪ’ ಕಾದಂಬರಿ ಆಯ್ಕೆಯಾಗಿದೆ. </p>.<p>ಪ್ರಶಸ್ತಿಯು ₹25 ಸಾವಿರ ನಗದು ಒಳಗೊಂಡಿದೆ. ಕಾದಂಬರಿಕಾರ ಕಾ.ತ. ಚಿಕ್ಕಣ್ಣ, ಕಾದಂಬರಿಗಾರ್ತಿ ಲತಾಗುತ್ತಿ ಅವರು ಈ ಆಯ್ಕೆ ಮಾಡಿದ್ದಾರೆ. ಸ್ಪರ್ಧೆಗೆ 48 ಕಾದಂಬರಿಗಳು ಬಂದಿದ್ದವು. ಅವುಗಳಲ್ಲಿ ಅಂತಿಮ ಮೂರರಲ್ಲಿ ಸುನಂದಮ್ಮ ಅವರ ಕಾದಂಬರಿ ಜತೆಗೆ ಚೀಮನಹಳ್ಳಿ ರಮೇಶ್ ಬಾಬು ಅವರ ‘ಮಂಪರು’ ಕಾದಂಬರಿ ಹಾಗೂ ಗಂಗಪ್ಪ ತಳವಾರ್ ಅವರ ‘ಧಾವತಿ’ ಕಾದಂಬರಿಗಳು ಸ್ಥಾನ ಪಡೆದಿದ್ದವು. </p>.<p>ದ್ವಾರನಕುಂಟೆ ಪಾತಣ್ಣ ಅವರ ಜನ್ಮದಿನವಾದ ಇದೇ 14ರಂದು ಸಂಜೆ 5.30ಕ್ಕೆ ಶೇಷಾದ್ರಿಪುರಂ ಕಾಲೇಜು ದತ್ತಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಂ. ಹನೀಫ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>