<p><strong>ಪೀಣ್ಯದಾಸರಹಳ್ಳಿ:</strong> ‘ಸಾಹಿತ್ಯಕ್ಕೂ ಸಂಗೀತಕ್ಕೂ ಅವಿನಾಭಾವ ಸಂಬಂಧವಿದೆ. ಸಾಹಿತ್ಯ ಸಂಗೀತವಾದಾಗ ಜನಪ್ರಿಯತೆಯನ್ನು ಪಡೆಯುತ್ತದೆ. ಕವಿಯ ಭಾವಗಳು ಸ್ವರವಾದಾಗ ಜನ ಮಾನ್ಯತೆಯನ್ನು ಪಡೆಯುತ್ತವೆ’ ಎಂದು ಕಾದಂಬರಿಗಾರ್ತಿ ಮಮತಾ ವಾರನಹಳ್ಳಿ ಹೇಳಿದರು.</p>.<p>ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ತಮ್ಮೇನಹಳ್ಳಿಯ ಶ್ರೀ ಕೃಷ್ಣ ಕಲಾಸಂಗಮದ 'ಭಾವ ಸ್ವರ' ಕನ್ನಡ ಗೀತಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಕನ್ನಡಪರ ಚಿಂತಕ ಬಿ.ಎಲ್.ಎನ್ ಸಿಂಹ, ‘ಕವಿ ತನ್ನ ಕವಿತೆಗಳ ಮೂಲಕ ಪ್ರಸಿದ್ಧನಾಗಬೇಕಾದರೆ ಸಂಗೀತಗಾರ ಆ ಕವಿತೆಯನ್ನು ಹಾಡಿದಾಗ ಮಾತ್ರ ಅದಕ್ಕೊಂದು ಜನಮನ್ನಣೆ ಸಿಗುತ್ತದೆ’ ಎಂದರು.</p>.<p>ಕನ್ನಡ ಸಾಹಿತ್ಯ ಪರಿಷತ್ತಿನದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ವೈ. ಬಿ.ಎಚ್. ಜಯದೇವ್, ‘ನಮ್ಮ ಕನ್ನಡ ಗಾಯಕರು ಅಸಂಖ್ಯಾತ ಸಂಖ್ಯೆಯಲ್ಲಿ ಎಲ್ಲೆಲ್ಲೋ ಇದ್ದಾರೆ. ಅವರನ್ನು ಹುಡುಕಿ ಬೆಳಕಿಗೆ ತರುವ ಕೆಲಸ ಆಗಬೇಕಾಗಿದೆ’ ಎಂದರು.</p>.<p>ಸಾಹಿತಿ ನಾಗರಾಜ್ ನಾಗಸಂದ್ರ, ನಿವೃತ್ತ ಅಧಿಕಾರಿ ಸಿದ್ದಪ್ಪ, ಶ್ರೀ ಕೃಷ್ಣ ಕಲಾಸಂಗಮದ ಅಧ್ಯಕ್ಷ ಎನ್. ಡಿ ಕೃಷ್ಣ ಮೂರ್ತಿ, ಕವಿ ಪ್ರಸನ್ನಕುಮಾರ್, ಸಂಘಟಕರಾದ ಪ್ರದೀಪ್, ಕವಿಯತ್ರಿ ಮಂಜು ಭಾಷಿಣಿ, ಭಾರತಿ ಕೋಕಿಲೆ, ಪುಷ್ಪಲತಾ, ರಶ್ಮಿ ಕಾಂಬೋಡಿಯಾ ಉಪಸ್ಥಿತರಿದ್ದರು.</p>.<p>ಪ್ರಸಿದ್ದ ಕವಿಗಳ ಭಾವಗೀತೆಗಳ 'ಭಾವಸ್ವರ’ ಕಾರ್ಯಕ್ರಮವು ಕೇಳುಗರ ಮನಸೂರೆಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೀಣ್ಯದಾಸರಹಳ್ಳಿ:</strong> ‘ಸಾಹಿತ್ಯಕ್ಕೂ ಸಂಗೀತಕ್ಕೂ ಅವಿನಾಭಾವ ಸಂಬಂಧವಿದೆ. ಸಾಹಿತ್ಯ ಸಂಗೀತವಾದಾಗ ಜನಪ್ರಿಯತೆಯನ್ನು ಪಡೆಯುತ್ತದೆ. ಕವಿಯ ಭಾವಗಳು ಸ್ವರವಾದಾಗ ಜನ ಮಾನ್ಯತೆಯನ್ನು ಪಡೆಯುತ್ತವೆ’ ಎಂದು ಕಾದಂಬರಿಗಾರ್ತಿ ಮಮತಾ ವಾರನಹಳ್ಳಿ ಹೇಳಿದರು.</p>.<p>ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ತಮ್ಮೇನಹಳ್ಳಿಯ ಶ್ರೀ ಕೃಷ್ಣ ಕಲಾಸಂಗಮದ 'ಭಾವ ಸ್ವರ' ಕನ್ನಡ ಗೀತಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಕನ್ನಡಪರ ಚಿಂತಕ ಬಿ.ಎಲ್.ಎನ್ ಸಿಂಹ, ‘ಕವಿ ತನ್ನ ಕವಿತೆಗಳ ಮೂಲಕ ಪ್ರಸಿದ್ಧನಾಗಬೇಕಾದರೆ ಸಂಗೀತಗಾರ ಆ ಕವಿತೆಯನ್ನು ಹಾಡಿದಾಗ ಮಾತ್ರ ಅದಕ್ಕೊಂದು ಜನಮನ್ನಣೆ ಸಿಗುತ್ತದೆ’ ಎಂದರು.</p>.<p>ಕನ್ನಡ ಸಾಹಿತ್ಯ ಪರಿಷತ್ತಿನದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ವೈ. ಬಿ.ಎಚ್. ಜಯದೇವ್, ‘ನಮ್ಮ ಕನ್ನಡ ಗಾಯಕರು ಅಸಂಖ್ಯಾತ ಸಂಖ್ಯೆಯಲ್ಲಿ ಎಲ್ಲೆಲ್ಲೋ ಇದ್ದಾರೆ. ಅವರನ್ನು ಹುಡುಕಿ ಬೆಳಕಿಗೆ ತರುವ ಕೆಲಸ ಆಗಬೇಕಾಗಿದೆ’ ಎಂದರು.</p>.<p>ಸಾಹಿತಿ ನಾಗರಾಜ್ ನಾಗಸಂದ್ರ, ನಿವೃತ್ತ ಅಧಿಕಾರಿ ಸಿದ್ದಪ್ಪ, ಶ್ರೀ ಕೃಷ್ಣ ಕಲಾಸಂಗಮದ ಅಧ್ಯಕ್ಷ ಎನ್. ಡಿ ಕೃಷ್ಣ ಮೂರ್ತಿ, ಕವಿ ಪ್ರಸನ್ನಕುಮಾರ್, ಸಂಘಟಕರಾದ ಪ್ರದೀಪ್, ಕವಿಯತ್ರಿ ಮಂಜು ಭಾಷಿಣಿ, ಭಾರತಿ ಕೋಕಿಲೆ, ಪುಷ್ಪಲತಾ, ರಶ್ಮಿ ಕಾಂಬೋಡಿಯಾ ಉಪಸ್ಥಿತರಿದ್ದರು.</p>.<p>ಪ್ರಸಿದ್ದ ಕವಿಗಳ ಭಾವಗೀತೆಗಳ 'ಭಾವಸ್ವರ’ ಕಾರ್ಯಕ್ರಮವು ಕೇಳುಗರ ಮನಸೂರೆಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>