ಬೆಂಗಳೂರು: ಭೀಮಾ ಜ್ಯುವೆಲ್ಲರ್ಸ್ನ ಕೋರಮಂಗಲದ ಮಳಿಗೆಯಲ್ಲಿ ಸಂಸ್ಥೆಯ 97ನೇ ಸಂಸ್ಥಾಪನಾದಿನದಅಂಗವಾಗಿ ಬಡ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ಹಾಗೂ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಯಿತು.
ಕೋವಿಡ್ನಿಂದ ಸಂಕಷ್ಟ ಅನುಭವಿಸಿರುವ ಜನರಿಗೆ ನೆರವಾಗುವ ಉದ್ದೇಶದಿಂದಒನ್ಬಿಲಿಯನ್ಲಿಟರೇಟ್ಸ್ಫೌಂಡೇಷನ್ ಮೂಲಕ ₹4.75 ಲಕ್ಷ ವೆಚ್ಚದಲ್ಲಿ 50 ಟ್ಯಾಬ್ಗಳನ್ನು ಬಡ ವಿದ್ಯಾರ್ಥಿಗಳಿಗೆ ನೀಡಲಾಯಿತು.
ನಾಗವಾರ ಪಾಳ್ಯ,ಕಗ್ಗದಾಸಪುರ,ವಿದ್ಯಾರಣ್ಯಪುರದ ವಲಸೆ ಮತ್ತು ದಿನಗೂಲಿ ನೌಕರರು ಹಾಗೂ ತೃತೀಯ ಲಿಂಗಿಗಳು ಸೇರಿದಂತೆ 500 ಮಂದಿಗೆ ₹5 ಲಕ್ಷ ವೆಚ್ಚದಲ್ಲಿ ದಿನಸಿ ಕಿಟ್ಗಳನ್ನು ವಿತರಿಸಿತು.
ಭೀಮಾಜ್ಯುವೆಲ್ಲರ್ಸ್ನಬೆಂಗಳೂರು ವಿಭಾಗದ ವಿಷ್ಣು ಶರಣ್ ಕೆ.ಭಟ್ ಇದ್ದರು.