<p><strong>ಬೆಂಗಳೂರು</strong>: ‘ಕ್ರಿಪ್ಟೊ’ ಹಾಗೂ ‘ಬಿಟ್ ಕಾಯಿನ್’ ಮೇಲೆ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ಹೇಳಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.</p>.<p>‘ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲ್ಲೂಕಿನ ಹಾರೋಗೇರಿಯ ಕಿರಣ್ ಭರತೇಶ್ (20) ಹಾಗೂ ಅರ್ಷದ್ ಮೊಹಿನುದ್ದೀನ್ (21) ಬಂಧಿತರು. ಎರಡು ಮೊಬೈಲ್, ಮೂರು ಸಿಮ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿದ್ದ ₹ 40 ಸಾವಿರ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಹೂಡಿಕೆ ಹೆಸರಿನಲ್ಲಿ ಹಣ ಕಳೆದುಕೊಂಡಿದ್ದ ನಗರದ ನಿವಾಸಿಯೊಬ್ಬರು ಮಾರ್ಚ್ 18ರಂದು ದೂರು ನೀಡಿದ್ದರು. ತನಿಖೆ ಕೈಗೊಂಡು ಹಾರೋಗೇರಿಯಲ್ಲೇ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದೂ ತಿಳಿಸಿದರು.</p>.<p class="Subhead">ಇನ್ಸ್ಟಾಗ್ರಾಮ್ದಲ್ಲಿ ಜಾಹೀರಾತು: ‘ಇನ್ಸ್ಟಾಗ್ರಾಮ್ ಆ್ಯಪ್ನಲ್ಲಿ ‘ಅಭಿಷೆ ಅಕ್ವಾನೆ – ತರುಣ ಕ್ರಿಪ್ಟೊ ಟ್ರೇಡರ್’ ಹೆಸರಿನಲ್ಲಿ ಖಾತೆ ತೆರೆದಿದ್ದ ಆರೋಪಿಗಳು, ಅದರ ಮೂಲಕ ಜನರನ್ನು ಸಂಪರ್ಕಿಸಿ ವಂಚಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ಹಣ ಹೂಡಿಕೆ ಮಾಡಿದರೆ, ಶೇ 60ರಷ್ಟು ಲಾಭ ಖಚಿತ’ ಎಂಬುದಾಗಿ ಆರೋಪಿಗಳು ಜಾಹೀರಾಜು ನೀಡುತ್ತಿದ್ದರು. ಅದು ನಿಜವೆಂದು ನಂಬಿ ಹಲವರು ಹಣ ಹೂಡಿಕೆ ಮಾಡುತ್ತಿದ್ದರು. ಹಣ ಪಡೆದ ನಂತರ ಆರೋಪಿಗಳು ಯಾವುದೇ ಲಾಭ ನೀಡುತ್ತಿರಲಿಲ್ಲ. ಅಸಲನ್ನೂ ಮರಳಿಸುತ್ತಿರಲಿಲ್ಲ’ ಎಂದೂ ತಿಳಿಸಿದರು.</p>.<p>‘ನಗರದ ಹಲವರನ್ನು ಆರೋಪಿಗಳು ವಂಚಿಸಿದ್ದಾರೆ. ಇವರ ವಿರುದ್ಧ ದಕ್ಷಿಣ ಸೈಬರ್ ಕ್ರೈಂ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ’ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಕ್ರಿಪ್ಟೊ’ ಹಾಗೂ ‘ಬಿಟ್ ಕಾಯಿನ್’ ಮೇಲೆ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ಹೇಳಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.</p>.<p>‘ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲ್ಲೂಕಿನ ಹಾರೋಗೇರಿಯ ಕಿರಣ್ ಭರತೇಶ್ (20) ಹಾಗೂ ಅರ್ಷದ್ ಮೊಹಿನುದ್ದೀನ್ (21) ಬಂಧಿತರು. ಎರಡು ಮೊಬೈಲ್, ಮೂರು ಸಿಮ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿದ್ದ ₹ 40 ಸಾವಿರ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಹೂಡಿಕೆ ಹೆಸರಿನಲ್ಲಿ ಹಣ ಕಳೆದುಕೊಂಡಿದ್ದ ನಗರದ ನಿವಾಸಿಯೊಬ್ಬರು ಮಾರ್ಚ್ 18ರಂದು ದೂರು ನೀಡಿದ್ದರು. ತನಿಖೆ ಕೈಗೊಂಡು ಹಾರೋಗೇರಿಯಲ್ಲೇ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದೂ ತಿಳಿಸಿದರು.</p>.<p class="Subhead">ಇನ್ಸ್ಟಾಗ್ರಾಮ್ದಲ್ಲಿ ಜಾಹೀರಾತು: ‘ಇನ್ಸ್ಟಾಗ್ರಾಮ್ ಆ್ಯಪ್ನಲ್ಲಿ ‘ಅಭಿಷೆ ಅಕ್ವಾನೆ – ತರುಣ ಕ್ರಿಪ್ಟೊ ಟ್ರೇಡರ್’ ಹೆಸರಿನಲ್ಲಿ ಖಾತೆ ತೆರೆದಿದ್ದ ಆರೋಪಿಗಳು, ಅದರ ಮೂಲಕ ಜನರನ್ನು ಸಂಪರ್ಕಿಸಿ ವಂಚಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ಹಣ ಹೂಡಿಕೆ ಮಾಡಿದರೆ, ಶೇ 60ರಷ್ಟು ಲಾಭ ಖಚಿತ’ ಎಂಬುದಾಗಿ ಆರೋಪಿಗಳು ಜಾಹೀರಾಜು ನೀಡುತ್ತಿದ್ದರು. ಅದು ನಿಜವೆಂದು ನಂಬಿ ಹಲವರು ಹಣ ಹೂಡಿಕೆ ಮಾಡುತ್ತಿದ್ದರು. ಹಣ ಪಡೆದ ನಂತರ ಆರೋಪಿಗಳು ಯಾವುದೇ ಲಾಭ ನೀಡುತ್ತಿರಲಿಲ್ಲ. ಅಸಲನ್ನೂ ಮರಳಿಸುತ್ತಿರಲಿಲ್ಲ’ ಎಂದೂ ತಿಳಿಸಿದರು.</p>.<p>‘ನಗರದ ಹಲವರನ್ನು ಆರೋಪಿಗಳು ವಂಚಿಸಿದ್ದಾರೆ. ಇವರ ವಿರುದ್ಧ ದಕ್ಷಿಣ ಸೈಬರ್ ಕ್ರೈಂ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ’ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>