ಸಭೆ ನಿಗದಿ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್, ಸ್ಥಳಕ್ಕೆ ಬಂದು ಭದ್ರತೆ ಕೈಗೊಳ್ಳುವ ಬಗ್ಗೆ ಎಸಿಪಿ ಹಾಗೂ ಇನ್ಸ್ಪೆಕ್ಟರ್ಗಳಿಗೆ ಸೂಚನೆ ನೀಡಿದರು. ಹೋಟೆಲ್ ವ್ಯವಸ್ಥಾಪಕರ ಜೊತೆ ಚರ್ಚಿಸಿ ಭದ್ರತೆ ಬಗ್ಗೆ ಚರ್ಚಿಸಿದರು. 150 ಸಿಬ್ಬಂದಿಗಳನ್ನು ಹೋಟೆಲ್ ಬಳಿ ಕರೆಸಿಕೊಂಡ ಡಿಸಿಪಿ, ಭದ್ರತೆಗೆ ನಿಯೋಜಿಸಿದರು.