‘ಪ್ರಧಾನಿಯಾಗಿದ್ದ ನೆಹರೂ ಮತ್ತು ಆಗಿನ ಉಪಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನಡುವೆ ಉತ್ತಮ ಹೊಂದಾಣಿಕೆಯಿತ್ತು. ಆದರೆ, ಬಿಜೆಪಿಯವರು ಸುಳ್ಳು ಸುದ್ದಿ ಹಬ್ಬಿಸಿ ಇತಿಹಾಸ ತಿರುಚುವ ಯತ್ನ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದ ಸಿದ್ದರಾಮಯ್ಯ, ‘ರಾಮಾಯಣ, ಮಹಾಭಾರತ, ಶಾಕುಂತಲೆಯಂಥ ಮಹಾ ಕಾವ್ಯಗಳನ್ನು ಬರೆದವರು ಹಿಂದುಳಿದ ಸಮುದಾಯಗಳಿಗೆ ಸೇರಿದ ದಾರ್ಶನಿಕರು. ಮೇಲ್ಜಾತಿಯವರು ಯಾರೂ ಬರೆದಿಲ್ಲ’ ಎಂದರು.