‘ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅದರಂತೆ ಗ್ರಾಮದ ಮಿಥುನ್, ನಗರದ ಕಂಪನಿಯೊಂ ದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಗಾಯಿತ್ರಿ ಬಡಾವಣೆ ಯಲ್ಲಿ ಸ್ನೇಹಿತರ ಜೊತೆ ವಾಸವಿದ್ದರು. ರಾಜಕಾಲುವೆ ಪಕ್ಕ ತಮ್ಮ ಬೈಕ್ ನಿಲ್ಲಿಸಿದ್ದರು. ಶುಕ್ರವಾರ ರಾತ್ರಿ 12.30ರ ಸುಮಾರಿಗೆ ಮಳೆ ವೇಳೆ ಕಾಲುವೆ ಗೋಡೆ ಕುಸಿದು ಬೈಕ್ ತೇಲಿ ಹೋಗುತ್ತಿತ್ತು. ಬೈಕ್ ಹಿಡಿದು ಎಳೆದುಕೊಳ್ಳಲು ಮುಂದಾಗಿದ್ದ ಮಿಥುನ್, ಕಾಲುವೆಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದರು’ ಎಂದು ಪೊಲೀಸರು ಹೇಳಿದರು.