‘ವಕೀಲರು ಜನಪರ ಚಳವಳಿಗಳ ಭಾಗವಾಗಬೇಕು. ಚಳವಳಿಗಳು ಏನು ಹೇಳುತ್ತಿವೆ, ಚಳವಳಿಕಾರರ ದನಿಯ ಆಶಯಗಳೇನು ಎಂಬುದನ್ನು ಅರಿಯಬೇಕು. ಹೋರಾಟಗಾರರು ಜೈಲಿನಲ್ಲಿದ್ದರೆ ಅವರಿಗೆ ಜಾಮೀನು ಕೊಡಿಸುವ ಪ್ರಕ್ರಿಯೆಗಳಿಂದ ಹಿಡಿದು ಅವರ ಪರವಾಗಿ ನ್ಯಾಯ ದೊರಕಿಸಲು ಎಲ್ಲ ಪ್ರಯತ್ನ ಮಾಡಬೇಕು. ಸಂವಿಧಾನದ ಮೌಲ್ಯಗಳು, ಮಾನವ ಹಕ್ಕುಗಳ ರಕ್ಷಣೆಯನ್ನು ತಮ್ಮ ವಾದ ಸರಣಿಯಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸೇರ್ಪಡೆ ಮಾಡುವ ಮುಖಾಂತರ ಆಶಾದಾಯಕವಾಗಿ ಹೋರಾಟಗಾರರ ಬೆನ್ನಿಗೆ ನಿಲ್ಲಬೇಕು’ ಎಂದರು.