<p><strong>ಬೆಂಗಳೂರು:</strong> ಆನ್ಲೈನ್ ಜೂಜಾಟವಾಡಲು ಖರ್ಚು ಮಾಡಿದ್ದ ಹಾಗೂ ಸ್ನೇಹಿತರಿಂದ ಪಡೆದ ಸಾಲ ತೀರಿಸಲು ಅಪಹರಣ ನಾಟಕವಾಡಿದ್ದ ಆರೋಪದಡಿ ಕಾಲೇಜ್ವೊಂದರ ವಾರ್ಡನ್ ಸೇರಿ ನಾಲ್ವರನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>‘ಹಾಸನದ ಜೀವನ್ (29), ಈತನ ಸ್ನೇಹಿತರಾದ ವಿನಯ್ (27), ಪೂರ್ಣೇಶ್ ಅಲಿಯಾಸ್ ಪ್ರೀತಮ್ (28) ಹಾಗೂ ರಾಜು (28) ಬಂಧಿತರು. ಇವರಿಂದ ನಾಲ್ಕು ಮೊಬೈಲ್ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಆರೋಪಿ ಜೀವನ್, ಪ್ರತಿಷ್ಠಿತ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ. ಆನ್ಲೈನ್ ಜೂಜಿನಲ್ಲಿ ಹಣ ಕಳೆದುಕೊಂಡಿದ್ದ. ಸ್ನೇಹಿತರ ಬಳಿಯೂ ಹೆಚ್ಚು ಸಾಲ ಮಾಡಿದ್ದ. ಸಾಲ ವಾಪಸು ನೀಡುವಂತೆ ಸ್ನೇಹಿತರು ಪೀಡಿಸಲಾರಂಭಿಸಿದ್ದರು’ ಎಂದರು.</p>.<p>ಚಿಕ್ಕಮ್ಮನಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ: ‘ಆರೋಪಿ ಜೀವನ್ನ ಚಿಕ್ಕಮ್ಮ ಸಹ ಕಾಲೇಜ್ವೊಂದರ ಉದ್ಯೋಗಿ. ಚಿಕ್ಕಮ್ಮನ ಬಳಿ ಹಣವಿರುವುದನ್ನು ತಿಳಿದುಕೊಂಡಿದ್ದ ಆರೋಪಿ, ಅವರನ್ನು ಬೆದರಿಸಿ ಹಣ ಪಡೆಯಲು ಅಪಹರಣ ನಾಟಕಕ್ಕೆ ಸಂಚು ರೂಪಿಸಿದ್ದ’ ಎಂದು ಪೊಲೀಸರು ಹೇಳಿದರು.</p>.<p>‘ಜೀವನ್ ಹಾಗೂ ಸ್ನೇಹಿತರು, ಕೊಠಡಿಯೊಂದಕ್ಕೆ ಹೋಗಿ ಮದ್ಯದ ಪಾರ್ಟಿ ಮಾಡಿದ್ದರು. ನಂತರ, ಜೀವನ್ ತಲೆ–ಹಣೆ ಮೇಲೆ ಟೊಮೆಟೊ ಸಾಸ್ ಹಚ್ಚಿದ್ದರು. ಅದನ್ನೇ ರಕ್ತವೆಂಬಂತೆ ಬಿಂಬಿಸಿ ಫೋಟೊ ತೆಗೆದಿದ್ದರು. ಅದೇ ಫೋಟೊವನ್ನು ಚಿಕ್ಕಮ್ಮ ಅವರಿಗೆ ಕಳುಹಿಸಿದ್ದ ಆರೋಪಿಗಳು, ‘ಜೀವನ್ನನ್ನು ಅಪಹರಣ ಮಾಡಿದ್ದೇವೆ. ₹1 ಲಕ್ಷ ನೀಡಬೇಕು. ಇಲ್ಲದಿದ್ದರೆ, ಕೊಲೆ ಮಾಡುತ್ತೇವೆ’ ಎಂಬುದಾಗಿ ಬೆದರಿಸಿದ್ದರು.’</p>.<p>‘ಫೋಟೊ ನೋಡಿ ಹೆದರಿದ್ದ ಚಿಕ್ಕಮ್ಮ, ಜೀವನ್ ಫೋನ್ ಪೇಗೆ ₹20 ಸಾವಿರ ಕಳುಹಿಸಿದ್ದರು. ಇದಾದ ನಂತರ ಅನುಮಾನ ಬಂದಿತ್ತು. ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡು, ಆನೇಕಲ್ ತಾಲೂಕಿನ ಜಿಗಣಿ ಬಳಿಯ ಎಸ್. ಬಿಂಗೀಪುರ ಗ್ರಾಮದಲ್ಲಿ ಮದ್ಯದ ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಆನ್ಲೈನ್ ಜೂಜಾಟವಾಡಲು ಖರ್ಚು ಮಾಡಿದ್ದ ಹಾಗೂ ಸ್ನೇಹಿತರಿಂದ ಪಡೆದ ಸಾಲ ತೀರಿಸಲು ಅಪಹರಣ ನಾಟಕವಾಡಿದ್ದ ಆರೋಪದಡಿ ಕಾಲೇಜ್ವೊಂದರ ವಾರ್ಡನ್ ಸೇರಿ ನಾಲ್ವರನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>‘ಹಾಸನದ ಜೀವನ್ (29), ಈತನ ಸ್ನೇಹಿತರಾದ ವಿನಯ್ (27), ಪೂರ್ಣೇಶ್ ಅಲಿಯಾಸ್ ಪ್ರೀತಮ್ (28) ಹಾಗೂ ರಾಜು (28) ಬಂಧಿತರು. ಇವರಿಂದ ನಾಲ್ಕು ಮೊಬೈಲ್ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಆರೋಪಿ ಜೀವನ್, ಪ್ರತಿಷ್ಠಿತ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ. ಆನ್ಲೈನ್ ಜೂಜಿನಲ್ಲಿ ಹಣ ಕಳೆದುಕೊಂಡಿದ್ದ. ಸ್ನೇಹಿತರ ಬಳಿಯೂ ಹೆಚ್ಚು ಸಾಲ ಮಾಡಿದ್ದ. ಸಾಲ ವಾಪಸು ನೀಡುವಂತೆ ಸ್ನೇಹಿತರು ಪೀಡಿಸಲಾರಂಭಿಸಿದ್ದರು’ ಎಂದರು.</p>.<p>ಚಿಕ್ಕಮ್ಮನಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ: ‘ಆರೋಪಿ ಜೀವನ್ನ ಚಿಕ್ಕಮ್ಮ ಸಹ ಕಾಲೇಜ್ವೊಂದರ ಉದ್ಯೋಗಿ. ಚಿಕ್ಕಮ್ಮನ ಬಳಿ ಹಣವಿರುವುದನ್ನು ತಿಳಿದುಕೊಂಡಿದ್ದ ಆರೋಪಿ, ಅವರನ್ನು ಬೆದರಿಸಿ ಹಣ ಪಡೆಯಲು ಅಪಹರಣ ನಾಟಕಕ್ಕೆ ಸಂಚು ರೂಪಿಸಿದ್ದ’ ಎಂದು ಪೊಲೀಸರು ಹೇಳಿದರು.</p>.<p>‘ಜೀವನ್ ಹಾಗೂ ಸ್ನೇಹಿತರು, ಕೊಠಡಿಯೊಂದಕ್ಕೆ ಹೋಗಿ ಮದ್ಯದ ಪಾರ್ಟಿ ಮಾಡಿದ್ದರು. ನಂತರ, ಜೀವನ್ ತಲೆ–ಹಣೆ ಮೇಲೆ ಟೊಮೆಟೊ ಸಾಸ್ ಹಚ್ಚಿದ್ದರು. ಅದನ್ನೇ ರಕ್ತವೆಂಬಂತೆ ಬಿಂಬಿಸಿ ಫೋಟೊ ತೆಗೆದಿದ್ದರು. ಅದೇ ಫೋಟೊವನ್ನು ಚಿಕ್ಕಮ್ಮ ಅವರಿಗೆ ಕಳುಹಿಸಿದ್ದ ಆರೋಪಿಗಳು, ‘ಜೀವನ್ನನ್ನು ಅಪಹರಣ ಮಾಡಿದ್ದೇವೆ. ₹1 ಲಕ್ಷ ನೀಡಬೇಕು. ಇಲ್ಲದಿದ್ದರೆ, ಕೊಲೆ ಮಾಡುತ್ತೇವೆ’ ಎಂಬುದಾಗಿ ಬೆದರಿಸಿದ್ದರು.’</p>.<p>‘ಫೋಟೊ ನೋಡಿ ಹೆದರಿದ್ದ ಚಿಕ್ಕಮ್ಮ, ಜೀವನ್ ಫೋನ್ ಪೇಗೆ ₹20 ಸಾವಿರ ಕಳುಹಿಸಿದ್ದರು. ಇದಾದ ನಂತರ ಅನುಮಾನ ಬಂದಿತ್ತು. ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡು, ಆನೇಕಲ್ ತಾಲೂಕಿನ ಜಿಗಣಿ ಬಳಿಯ ಎಸ್. ಬಿಂಗೀಪುರ ಗ್ರಾಮದಲ್ಲಿ ಮದ್ಯದ ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>