ರಂಗ ನಟ, ನಿರ್ದೇಶಕ ಬಿ.ವಿ. ರಾಜಾರಾಮ್ ಮಾತನಾಡಿ, ‘ನಾಗೇಶ್ ಅವರು ರಂಗಭೂಮಿ ಕಟ್ಟುವ ಕೆಲಸ ಮಾಡಿದರು. ಅವರು ಇದ್ದಲ್ಲಿ ವಿಚಿತ್ರವಾದ ಶಕ್ತಿ ಇರುತ್ತಿತ್ತು. ರಂಗಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ, ಉಳಿಸಬೇಕು. ಈ ಪ್ರಕ್ರಿಯೆಯು ರಂಗ ಸಂಶೋಧಕರಿಗೆ ಸಹಕಾರಿಯಾಗಲಿದೆ. ದಾಖಲಾತಿಗಳನ್ನು ಸರ್ಕಾರಿ ಸಂಸ್ಥೆಗಳಿಗೆ ನೀಡಿದಲ್ಲಿ ಅದು ಅಲ್ಲಿ ಸುರಕ್ಷಿತವಾಗಿ ಇರುವ ಬಗ್ಗೆ ವಿಶ್ವಾಸವಿಲ್ಲ’ ಎಂದು ಹೇಳಿದರು.