‘ಸಾಮಾನ್ಯವಾಗಿ ಆತ್ಮಕಥನಗಳಲ್ಲಿ ಬಾಲ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿರುತ್ತದೆ. ಆದರೆ, ಈ ಕೃತಿಯಲ್ಲಿ ಬಾಲ್ಯದ ವಿನ್ಯಾಸವನ್ನು ಮುರಿಯಲಾಗಿದೆ. ಮಹಿಳಾ ಆತ್ಮಕಥೆಗಳಲ್ಲಿ ಹೊಸ ಆಯಾಮಗಳು ಕಂಡುಬರುತ್ತಿದ್ದು,ರೈತ, ರಂಗಕರ್ಮಿ, ಪತ್ರಕರ್ತ, ನಟ–ನಟಿ, ರಾಜಕಾರಣಿಗಳ ಆತ್ಮಕಥನಗಳು ಹೊಸ ವಿನ್ಯಾಸದಿಂದ ಕೂಡಿವೆ. ಇದರಿಂದ ಕನ್ನಡ ಸಾಹಿತ್ಯದ ಜೀವಂತಿಕೆ ಹೆಚ್ಚುತ್ತಿದೆ’ ಎಂದು ಹೇಳಿದರು.