<p><strong>ಬೆಂಗಳೂರು</strong>: ‘ಪ್ರಸಿದ್ಧ ಲೇಖಕರು ಬರೆದ ಕೆಟ್ಟ ಕಾವ್ಯ ಅಥವಾ ಕಾದಂಬರಿ ಓದುವ ಬದಲು, ಜನಸಾಮಾನ್ಯರ ಹಾಗೂ ವಿವಿಧ ಕ್ಷೇತ್ರಗಳ ಜನರ ಆತ್ಮಕಥನಗಳನ್ನು ಓದಲು ಬಯಸುತ್ತೇನೆ’ ಎಂದುಚಿಂತಕ ರಹಮತ್ ತರೀಕೆರೆ ತಿಳಿಸಿದರು.</p>.<p>ವಿಶ್ವ ಪುಸ್ತಕ ದಿನದ ಅಂಗವಾಗಿ ಪುಸ್ತಕ ಪ್ರೀತಿ ಹಾಗೂಜನಶಕ್ತಿ ಮೀಡಿಯಾ ಸಹಯೋಗದಲ್ಲಿ ಆನ್ಲೈನ್ ಮೂಲಕ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕಿ ರೇಣುಕಾ ನಿಡಗುಂದಿ ಕನ್ನಡಕ್ಕೆ ಅನುವಾದಿಸಿರುವ ‘ಅಲೆಮಾರಿಯೊಬ್ಬಳ ಆತ್ಮ ವೃತ್ತಾಂತ’ ಕೃತಿ ಕುರಿತು ಮಾತನಾಡಿದರು.</p>.<p>‘ಲೇಖಕರು ಎಂದು ಪ್ರತಿಷ್ಠಾಪಿತಗೊಳ್ಳದವರು ಕೂಡ ತಮ್ಮ ಜೀವನದ ಅನುಭವಗಳನ್ನು ಬರೆಯುವ ಹೊಸ ಪ್ರಕಾರ ಹಾಗೂ ಆಯಾಮ ಕನ್ನಡ ಸಾಹಿತ್ಯ ಪ್ರವೇಶಿಸಿದೆ. ಬೇರೆ ಭಾಷೆಯ ಆತ್ಮಕಥನಗಳನ್ನೂ ತಮ್ಮದೇ ಎಂದು ಸ್ವೀಕರಿಸುವ ಪ್ರವೃತ್ತಿ ಬೆಳೆದಿದೆ’ ಎಂದರು.</p>.<p>‘ಸಾಮಾನ್ಯವಾಗಿ ಆತ್ಮಕಥನಗಳಲ್ಲಿ ಬಾಲ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿರುತ್ತದೆ. ಆದರೆ, ಈ ಕೃತಿಯಲ್ಲಿ ಬಾಲ್ಯದ ವಿನ್ಯಾಸವನ್ನು ಮುರಿಯಲಾಗಿದೆ. ಮಹಿಳಾ ಆತ್ಮಕಥೆಗಳಲ್ಲಿ ಹೊಸ ಆಯಾಮಗಳು ಕಂಡುಬರುತ್ತಿದ್ದು,ರೈತ, ರಂಗಕರ್ಮಿ, ಪತ್ರಕರ್ತ, ನಟ–ನಟಿ, ರಾಜಕಾರಣಿಗಳ ಆತ್ಮಕಥನಗಳು ಹೊಸ ವಿನ್ಯಾಸದಿಂದ ಕೂಡಿವೆ. ಇದರಿಂದ ಕನ್ನಡ ಸಾಹಿತ್ಯದ ಜೀವಂತಿಕೆ ಹೆಚ್ಚುತ್ತಿದೆ’ ಎಂದು ಹೇಳಿದರು.</p>.<p>ಲೇಖಕಿ ರೇಣುಕಾ ನಿಡಗುಂದಿ,‘ಈ ಅನುವಾದಿತ ಕೃತಿ ಮೂಲ ಅಜಿತ್ ಕೌರ್ ಅವರದ್ದು. ಪಂಜಾಬ್ನ ಘಟನೆಗಳನ್ನು ಅನುವಾದಿಸುವಾಗ ಕೆಲವು ಬಾರಿ ಭಾಷಾ ಸಮಸ್ಯೆ ಎದುರಾಯಿತು. ಕೊನೆಗೆ ಅಲ್ಲಿನ ಭಾಷಿಕರನ್ನೇ ಸಂಪರ್ಕಿಸಿ, ಅದೇ ರೀತಿ ಕನ್ನಡದಲ್ಲಿ ಕೃತಿ ಹೊರತರಲು ಸಹಕಾರಿಯಾಯಿತು’ ಎಂದರು.</p>.<p>ಮಹಿಳಾ ಹೋರಾಟಗಾರ್ತಿ ಕೆ.ಎಸ್.ವಿಮಲಾ ಹಾಗೂ ಇತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಪ್ರಸಿದ್ಧ ಲೇಖಕರು ಬರೆದ ಕೆಟ್ಟ ಕಾವ್ಯ ಅಥವಾ ಕಾದಂಬರಿ ಓದುವ ಬದಲು, ಜನಸಾಮಾನ್ಯರ ಹಾಗೂ ವಿವಿಧ ಕ್ಷೇತ್ರಗಳ ಜನರ ಆತ್ಮಕಥನಗಳನ್ನು ಓದಲು ಬಯಸುತ್ತೇನೆ’ ಎಂದುಚಿಂತಕ ರಹಮತ್ ತರೀಕೆರೆ ತಿಳಿಸಿದರು.</p>.<p>ವಿಶ್ವ ಪುಸ್ತಕ ದಿನದ ಅಂಗವಾಗಿ ಪುಸ್ತಕ ಪ್ರೀತಿ ಹಾಗೂಜನಶಕ್ತಿ ಮೀಡಿಯಾ ಸಹಯೋಗದಲ್ಲಿ ಆನ್ಲೈನ್ ಮೂಲಕ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕಿ ರೇಣುಕಾ ನಿಡಗುಂದಿ ಕನ್ನಡಕ್ಕೆ ಅನುವಾದಿಸಿರುವ ‘ಅಲೆಮಾರಿಯೊಬ್ಬಳ ಆತ್ಮ ವೃತ್ತಾಂತ’ ಕೃತಿ ಕುರಿತು ಮಾತನಾಡಿದರು.</p>.<p>‘ಲೇಖಕರು ಎಂದು ಪ್ರತಿಷ್ಠಾಪಿತಗೊಳ್ಳದವರು ಕೂಡ ತಮ್ಮ ಜೀವನದ ಅನುಭವಗಳನ್ನು ಬರೆಯುವ ಹೊಸ ಪ್ರಕಾರ ಹಾಗೂ ಆಯಾಮ ಕನ್ನಡ ಸಾಹಿತ್ಯ ಪ್ರವೇಶಿಸಿದೆ. ಬೇರೆ ಭಾಷೆಯ ಆತ್ಮಕಥನಗಳನ್ನೂ ತಮ್ಮದೇ ಎಂದು ಸ್ವೀಕರಿಸುವ ಪ್ರವೃತ್ತಿ ಬೆಳೆದಿದೆ’ ಎಂದರು.</p>.<p>‘ಸಾಮಾನ್ಯವಾಗಿ ಆತ್ಮಕಥನಗಳಲ್ಲಿ ಬಾಲ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿರುತ್ತದೆ. ಆದರೆ, ಈ ಕೃತಿಯಲ್ಲಿ ಬಾಲ್ಯದ ವಿನ್ಯಾಸವನ್ನು ಮುರಿಯಲಾಗಿದೆ. ಮಹಿಳಾ ಆತ್ಮಕಥೆಗಳಲ್ಲಿ ಹೊಸ ಆಯಾಮಗಳು ಕಂಡುಬರುತ್ತಿದ್ದು,ರೈತ, ರಂಗಕರ್ಮಿ, ಪತ್ರಕರ್ತ, ನಟ–ನಟಿ, ರಾಜಕಾರಣಿಗಳ ಆತ್ಮಕಥನಗಳು ಹೊಸ ವಿನ್ಯಾಸದಿಂದ ಕೂಡಿವೆ. ಇದರಿಂದ ಕನ್ನಡ ಸಾಹಿತ್ಯದ ಜೀವಂತಿಕೆ ಹೆಚ್ಚುತ್ತಿದೆ’ ಎಂದು ಹೇಳಿದರು.</p>.<p>ಲೇಖಕಿ ರೇಣುಕಾ ನಿಡಗುಂದಿ,‘ಈ ಅನುವಾದಿತ ಕೃತಿ ಮೂಲ ಅಜಿತ್ ಕೌರ್ ಅವರದ್ದು. ಪಂಜಾಬ್ನ ಘಟನೆಗಳನ್ನು ಅನುವಾದಿಸುವಾಗ ಕೆಲವು ಬಾರಿ ಭಾಷಾ ಸಮಸ್ಯೆ ಎದುರಾಯಿತು. ಕೊನೆಗೆ ಅಲ್ಲಿನ ಭಾಷಿಕರನ್ನೇ ಸಂಪರ್ಕಿಸಿ, ಅದೇ ರೀತಿ ಕನ್ನಡದಲ್ಲಿ ಕೃತಿ ಹೊರತರಲು ಸಹಕಾರಿಯಾಯಿತು’ ಎಂದರು.</p>.<p>ಮಹಿಳಾ ಹೋರಾಟಗಾರ್ತಿ ಕೆ.ಎಸ್.ವಿಮಲಾ ಹಾಗೂ ಇತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>